ಮಂಡ್ಯ: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ನೂರಾರು ಸೇಬು ಹಣ್ಣುಗಳುವುಳ್ಳ ಬೃಹತ್ ಹಾರವನ್ನು ಹಾಕಿ ಸನ್ಮಾನಿಸಲಾಗಿದೆ.
ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಇಂಡವಾಳು ಸಚ್ಚಿದಾನಂದ್ ಅವರು ಈ ಹಾರವನ್ನು ಹಾಕಿಸಿದ್ದಾರೆ. ಕ್ರೇನ್ ಮೂಲಕ 300 ಕೆ.ಜಿ. ತೂಕವುಳ್ಳ ಸೇಬಿನ ಹಾರ ಹಾಕುತ್ತಿದ್ದಂತೆ ಡಿ.ಕೆ.ಶಿವಕುಮಾರ್ ಸೇಬನ್ನು ಕಿತ್ತು ತಿಂದು ಜನರತ್ತ ಸಂತೋಷದಿಂದ ಕೈ ಬೀಸಿದರು. ಸೇಬಿನ ಹಾರಕ್ಕೆ ಬರೋಬ್ಬರಿ 1 ಲಕ್ಷದ 60 ಸಾವಿರ ರೂ. ಖರ್ಚಾಗಿದೆ ಅಂತಾ ತಿಳಿದು ಬಂದಿದೆ.
- Advertisement 2
- Advertisement 3
ಕ್ಷೇತ್ರದಲ್ಲಿನ ನಾಯಕರ ಬಂಡಾಯ ಶಮನ ಮಾಡಲು ಸಚಿವರು ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಆಗಮಿಸಿದ್ದರು. ಈ ವೇಳೆ ಟಿಕೆಟ್ ಆಕಾಂಕ್ಷಿಯಾಗಿರುವ ಸಚ್ಚಿದಾನಂದ್ ಅವರು ಅದ್ಧೂರಿ ಸ್ವಾಗತದ ಮೂಲಕ ಸಚಿವರನ್ನು ಓಲೈಕೆಗೆ ಮುಂದಾಗಿದ್ದಾರೆ. ಸುಮಾರು 10 ಕಿ.ಮೀ.ವರೆಗೆ ನಡೆದ ಮೆರವಣಿಗೆಯಲ್ಲಿ ಕ್ರೇನ್ ಮೂಲಕ ಹೂ ಮಳೆ ಸುರಿಸುವ ಮೂಲಕ ಸಚ್ಚಿದಾನಂದ್ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ರು.
- Advertisement 4
ಬೃಹತ್ ಮತ್ತು ವಿಭಿನ್ನ ಹಾರ ಹಾಕಿದ್ದಕ್ಕೆ ಪರ-ವಿರೋಧಗಳು ಚರ್ಚೆ ಆಗ್ತಿವೆ. ಹಣವುಳ್ಳವರ ರಾಜಕೀಯ ಅಂತಾ ಕೆಲವರು ಟೀಕಿಸಿದ್ರೆ, ಇನ್ನು ಕೆಲವರು ಅಭಿಮಾನದ ಹಾರ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಚಿವರಿಗೆ ಹಾರ ಹಾಕಿದ ನಂತರ ಸ್ಥಳದಲ್ಲಿ ನೆರೆದಿದ್ದ ಕಾರ್ಯಕರ್ತರು ಸೇಬು ಹಣ್ಣಿಗಾಗಿ ಕಿತ್ತಾಡಿದ ಘಟನೆಯೂ ನಡೆಯಿತು.