Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಇಂದು ನಡೆದ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಏನೇನು ನಡೆಯಿತು? ಇಲ್ಲಿದೆ ಮಾಹಿತಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Dharwad | ಇಂದು ನಡೆದ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಏನೇನು ನಡೆಯಿತು? ಇಲ್ಲಿದೆ ಮಾಹಿತಿ

Dharwad

ಇಂದು ನಡೆದ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಏನೇನು ನಡೆಯಿತು? ಇಲ್ಲಿದೆ ಮಾಹಿತಿ

Public TV
Last updated: November 5, 2017 7:43 pm
Public TV
Share
3 Min Read
HBL SAMVESHA 14
SHARE

ಹುಬ್ಬಳ್ಳಿ: ನಗರದಲ್ಲಿ ಇಂದು ಏರ್ಪಡಿಸಲಾಗಿದ್ದ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಸಮಾವೇಶ ಒಂದು ಕಡೆ ಯಶಸ್ವಿಯಾದರ ಮತ್ತೊಂದು ಕಡೆ ಭಾರೀ ವಿವಾದಕ್ಕೆ ಕಾರಣವಾಗಿದೆ.

ಸಮಾವೇಶದಲ್ಲಿ ಭಾಗವಹಿಸಿದ್ದ ಸ್ವಾಮೀಜಿಗಳು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದರು. ಸಮಾವೇಶದಲ್ಲಿ ಭಾಗವಹಿಸಿದ್ದ ಪಂಚಮಸಾಲಿ ಪೀಠದ ಮೃತ್ಯುಂಜಯ ಸ್ವಾಮೀಜಿಗಳು ಮಾತನಾಡುತ್ತಾ ಒಂದು ತಂದೆಗೆ ಹುಟ್ಟಿದವರು ಲಿಂಗಾಯತರು ಐದು ಜನಕ್ಕೆ ಹುಟ್ಟಿದವರು ವೀರಶೈವರ ಎನ್ನುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಭಾಷಣ ವೇಳೆ ಅವೇಶಭರಿತರಾಗಿ ಮಾತನಾಡಿದ ಅವರು ಮನುವಾದಿಗಳ ಕುತಂತ್ರಕ್ಕೆ ತಕ್ಕ ಉತ್ತರವನ್ನು ಬಸವರಾಜ ಹೊರಟ್ಟಿ ಹಾಗೂ ವಿನಯ್ ಕುಲಕರ್ಣಿಯವರು ಕೊಟ್ಟಿದ್ದಾರೆ. ಹುಬ್ಬಳ್ಳಿ ಅಂದರೆ ಸಾಕಷ್ಟು ಇತಿಹಾಸ ಪುರುಷರಿಗೆ ಜನ್ಮ ನೀಡಿದೆ. ಲಿಂಗಾಯತರಿಗೆ ಯಾವಾಗಲೂ ಬಸವಣ್ಣನೇ ತಂದೆಯಾಗಿರುತ್ತಾನೆ ಎಂದು ಹೇಳಿದ್ದಾರೆ.

HBL SAMAVESHA

ಇನ್ನು ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ ಮರುಕ್ಷಣವೇ ಸ್ವಾಮೀಜಿ ತಮ್ಮ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ. ತಮ್ಮ ಹೇಳಿಕೆ ಕುರಿತು ಸ್ಪಷ್ಟಣೆ ನೀಡಿದ ಸ್ವಾಮೀಜಿ, ಬಸವಣ್ಣನವರ ಅನುಯಾಯಿಗಳು ಒಬ್ಬ ತಂದೆ ಇದ್ದ ಹಾಗೆ, ವೀರಶೈವರು ಪಂಚ ಪೀಠದ ಅನುಯಾಯಿಗಳು ಅವರು ಐದು ಜನರ ಆರಾಧಕರು ಹೀಗಾಗಿ ಅವರು ಐದು ತಂದೆಯ ಮಕ್ಕಳು ಎಂದು ಹೇಳಿದೆ. ಆದರೆ ಯಾವುದೇ ಸಮುದಾಯದ ಜನರಿಗೆ ನೋವು ಉಂಟು ಮಾಡುವುದು ನನ್ನ ಉದ್ದೇಶವಲ್ಲ. ಯಾರು ನನ್ನ ಮಾತನ್ನು ತಪ್ಪಾಗಿ ತಿಳಿಯಬೇಡಿ ಇದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆಂದು ಸ್ಪಷ್ಟಣೆ ನೀಡಿದ್ದಾರೆ.

HBL SAMVESHA 10

ಧರ್ಮಕ್ಕಾಗಿ ಹೋರಾಟ ಘೋಷಣೆ: ಅದು ಕಳೆದ ನಾಲ್ಕೈದು ತಿಂಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಪ್ರತ್ಯೇಕ ಧರ್ಮದ ಹೋರಾಟ ಕೆಲವು ರಾಜಕೀಯ ಮನ್ವಂತರಕ್ಕೆ ನಾಂದಿ ಹಾಡಿದೆ. ರಾಜ್ಯ ವಿಧಾನಸಭೆ ಚುನಾವಣೆ ಸಮೀಪವಾಗುತ್ತಿದ್ದಂತೆ ಪ್ರತ್ಯೇಕ ಧರ್ಮ ಕೂಗೂ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶಕ್ಕೆ ಸಾಗರೋಪಾದಿಯಲ್ಲಿ ಜನರು ಹರಿದು ಬಂದಿದ್ದರು. ಸಮಾವೇಶದದ ಯಾವ ಭಾಗದಲ್ಲಿ ನೋಡಿದರು ಜನ ಸಾಗರ ಕೈಯಲ್ಲಿ ಕೆಂಪು ಬಾವುಟ ಹಿಡಿದಕೊಂಡು ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಒಗ್ಗಟಾಗಿ ಹೋರಾಟ ನಡೆಸುವ ದೃಶ್ಯಗಳು ಕಂಡು ಬಂತು. ಇಂದು ನಡೆದ ಹೋರಾಟ ಲಿಂಗಾಯತ ಪ್ರತ್ಯೇಕ ಧರ್ಮದ ಸ್ಥಾಪನೆಯ ಸೆಮಿಪೈನಲ್ ಆಗಿ ಕಂಡು ಬಂತು. ಈ ಹಿಂದೆ ಬೀದರ್, ಕಲಬುರಗಿ, ಬೆಳಗಾವಿ ಯಲ್ಲಿ ನಡೆದ ಸಮಾವೇಶಗಳು ಇದಕ್ಕೆ ಸಾಕ್ಷಿಯಾಗಿವೆ. ಸಮಾವೇಶದಲ್ಲಿ ನಿರಂತರವಾಗಿ ಬಸವಣ್ಣನ ಅನುಯಾಯಿಗಳು ಎಲ್ಲರ ತಲೆಯ ಮೇಲೆ ಧರ್ಮಕ್ಕಾಗಿ ಹೋರಾಟ ಅನ್ನೋ ಘೋಷಣೆಗಳನ್ನು ಕೂಗಿದರು.

HBL SAMVESHA 15

ಶಪಥ: ಇಂದು ಬೆಳ್ಳಗೆ 11 ಗಂಟೆಗೆ ಬಸವಣ್ಣನ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಲಿಂಗಯತ ಧರ್ಮಕ್ಕೆ ಸಂಬಂಧಪಟ್ಟ ಸಂಸ್ಕ್ರತ ಗ್ರಂಥ ಹಾಗೂ ವಚನ ಸಾಹಿತ್ಯ ಪುಸ್ತಕಗಳನ್ನು ಚಿತ್ರದುರ್ಗದ ಮುರುಘಾ ಶ್ರೀಗಳಿಂದ ಬಿಡುಗಡೆ ಮಾಡಲಾಯಿತು. ನಂತರ ವೇದಿಕೆಯಲ್ಲಿದ್ದ ಗಣ್ಯರು ಸೇರಿ ಎಲ್ಲರೂ ಒಟ್ಟಾಗಿ ಲಿಂಗಾಯತ ಧರ್ಮಕ್ಕಾಗಿ ನಡೆಯುತ್ತಿರೋ ಹೋರಾಟ ಪ್ರತ್ಯೇಕ ಧರ್ಮ ಆಗೋವರೆಗೂ ಹಿಂದೆ ಸರಿಯುವುದಿಲ್ಲ ಎನ್ನುವ ಶಪಥ ಮಾಡಿದರು.

ಈ ವೇಳೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಲಿಂಗಾಯತ ಏಜುಕೇಷನ್ ಸೊಸೈಟಿಯ ಪ್ರಭಾಕರ್ ಕೊರೆ ಹಾಗೂ ವಿಪಕ್ಷ ನಾಯಕ ಶೆಟ್ಟರ್ ವಿರುದ್ಧ ವಾಗ್ಧಾಳಿ ನಡೆಸಿದರು. ನೀವು ಚುನಾವಣೆ ಗೆಲ್ಲಲು, ಲಿಂಗಾಯತ ವೋಟ್ ಬ್ಯಾಂಕ್ ಬೇಕು ಆಂದರೆ ನೀವು ವೀರಶೈವರ ಬಾಲ ಹಿಡಿದುಕೊಂಡು ಬೇಡಿ. ಲಿಂಗಾಯತ ಧರ್ಮದಲ್ಲಿ 99 ಒಳ ಪಂಗಡಗಳನ್ನು ಹೊಂದಿದ್ದು, ಇದರಲ್ಲಿ ವೀರಶೈವ ಸೇರಿದೆ. ಇಲ್ಲಿ ಸೇರಿರುವ ಎಲ್ಲಾ ಮುಖಂಡರ ಜಾತಿ ಪ್ರಮಾಣ ಪತ್ರದಲ್ಲಿ ಲಿಂಗಾಯತ ಎಂದಿದೆ. ವಿನಯ್ ಕುಲಕರ್ಣಿ, ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ್ ಹೊರಟ್ಟಿ ಅವರ ಪ್ರಮಾಣ ಪತ್ರದಲ್ಲಿಯೂ ಲಿಂಗಾಯತ ಎಂದಿದೆ. ವೀರಶೈವ ಎಂದು ಎಲ್ಲಿಯೂ ದಾಖಲಾಗಿಲ್ಲ ಎಂದು ಟೀಕೆ ಮಾಡಿದರು.

HBL SAMVESHA 12

ಬಳಿಕ ನೆಹರು ಮೈದಾನದಿಂದ ಎಲ್ಲಾ ಲಿಂಗಾಯತ ಮುಖಂಡರು ಹಾಗೂ ಮಠಧೀಶರ ನೈತೃತ್ವದಲ್ಲಿ ಬೃಹತ್ ಮೆರವಣಿಗೆ ಮಾಡಲಾಯಿತು. ನೆಹರು ಮೈದಾನದಿಂದ ಲಕ್ಷ ಲಕ್ಷ ಸಂಖ್ಯೆಯಲ್ಲಿ ಹೊರಟ ಬಸವಣ್ಣನ ಅನುಯಾಯಿಗಳು ನಗರದ ಕೊಪ್ಪಿಕರ್ ರೋಡ್, ಕೋಯಿನ್ ರಸ್ತೆ ಮೂಲಕ ಚೆನ್ನಮ್ಮ ವೃತ್ತದವರೆಗೆ ನಡೆದು ರಾಣಿ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಶಕ್ತಿ ಪ್ರದರ್ಶನ ನೀಡಿದರು.

HBL SAMVESHA 3

ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅನೇಕ ಸಚಿವರು ಮಠಾಧೀಶರು ಲಿಂಗಾಯತ ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಆದಷ್ಟು ಬೇಗ ಸರ್ಕಾರದಿಂದ ಮಾನ್ಯತೆ ಕೊಡಿಸುವುದಾಗಿ ಭರವಸೆ ನೀಡಿದರು. ಇನ್ನೂ ಸಮಾವೇಶದಲ್ಲಿ ಮಾತನಾಡಿದ ವಿವಿಧ ಮಠಾಧೀಶರು, ನಮ್ಮಲ್ಲಿ ವೀರಶೈವರೂ ಧರ್ಮ ಒಡೆಯುವ ಹುನ್ನಾರ ಮಾಡುತ್ತಿದ್ದಾರೆ. ನಮ್ಮಲ್ಲಿ ವೀರಶೈವ-ಲಿಂಗಾಯತ ಅಂತ ಇಷ್ಟು ದಿನ ತುಳಿದಿದ್ದಾರೆ. ಇನ್ನು ಮುಂದೆ ನಾವು ಯಾರು ಮೋಸ ಹೋಗಬಾರದು. ನಾವು ಯಾರು ರಾಜಕೀಯ ಲಾಭಕ್ಕಾಗಿ ಸಮಾವೇಶ ಮಾಡುತ್ತಿಲ್ಲ. ಬದಲಾಗಿ ನಮಗೆ ವೋಟು ಕೊಟ್ಟ ಜನರ ಋಣ ತೀರಿಸೋ ಕೆಲಸ ಮಾಡಿತ್ತಿದ್ದೇವೆ ಎಂದರು.

HBL SAMVESHA 4

 

HBL SAMVESHA 6

HBL SAMVESHA 9

HBL SAMVESHA 8

HBL SAMVESHA 7

HBL SAMVESHA 5

 

HBL SAMVESHA 2

TAGGED:fighthublilingayatMinister MB PatilPublic TVಪಬ್ಲಿಕ್ ಟಿವಿಲಿಂಗಾಯತಸಚಿವ ಎಂ.ಬಿ ಪಾಟೀಲ್ಹುಬ್ಬಳ್ಳಿಹೋರಾಟ
Share This Article
Facebook Whatsapp Whatsapp Telegram

Cinema news

darshan vijayalakshmi
ದರ್ಶನ್‌ಗೆ ಬೆನ್ನುನೋವು ಇರೋದು ನಿಜ: ನಟನ ಬದುಕಿನ ಏಳುಬೀಳಿನ ಬಗ್ಗೆ ಪತ್ನಿ ವಿಜಯಲಕ್ಷ್ಮಿ ಮಾತು
Cinema Latest Sandalwood Top Stories
Ugram Manju
ಸರಳವಾಗಿ ಮದುವೆಯಾಗಲು ರೆಡಿಯಾದ ಉಗ್ರಂ ಮಂಜು
Cinema Latest Sandalwood Top Stories
Rakshita Shetty Dhruvanth Secret Room Fight
`ರಕ್ಷಿತಾ ಆರ್ ಕೂಡ ನೀವಲ್ಲ’- ರಕ್ಷಿತಾ ಧ್ರುವಂತ್ ಸಿಕ್ಕಾಪಟ್ಟೆ ಕಿತ್ತಾಟ!
Cinema Latest Sandalwood Top Stories TV Shows
Sai Pallavi
ಎಂ.ಎಸ್ ಸುಬ್ಬಲಕ್ಷ್ಮಿ ಬಯೋಪಿಕ್‌ನಲ್ಲಿ ಸಾಯಿಪಲ್ಲವಿ ನಟನೆ ಫಿಕ್ಸ್‌
Bollywood Cinema Latest Top Stories

You Might Also Like

Sump ground Tank
Crime

ಸೈಕಲ್‌ ಆಟವಾಡುತ್ತಾ ನೀರಿನ ಸಂಪ್‌ಗೆ ಬಿದ್ದು 4 ವರ್ಷದ ಬಾಲಕ ಸಾವು

Public TV
By Public TV
2 minutes ago
DK Shivakumar 5
Belgaum

ಗ್ರೇಟರ್ ಬೆಂಗಳೂರು ಆಡಳಿತ 2ನೇ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ

Public TV
By Public TV
8 minutes ago
ELECTION COMMISSION OF INDIA
Latest

ಪ.ಬಂಗಾಳದಲ್ಲಿ SIR- 58 ಲಕ್ಷ ಮತದಾರರ ಹೆಸರುಗಳನ್ನು ಅಳಿಸಲು ಪ್ರಸ್ತಾಪ

Public TV
By Public TV
17 minutes ago
kea
Bengaluru City

ಇನ್ನೂ 26 ವೈದ್ಯಕೀಯ ಸೀಟು ಉಳಿಕೆ, ಯುಜಿ ವೈದ್ಯಕೀಯ-ಸ್ಟ್ರೇ ವೇಕೆನ್ಸಿ ಸುತ್ತಿನ ಅಂತಿಮ ಫಲಿತಾಂಶ ಪ್ರಕಟ: ಕೆಇಎ

Public TV
By Public TV
35 minutes ago
Kempegowda Airport Taxi Drivers Protest
Bengaluru City

ಹೊಸ ರೂಲ್ಸ್‌ಗೆ ವಿರೋಧ – ಏರ್ಪೋರ್ಟ್ ಅಥಾರಿಟಿ ವಿರುದ್ಧ ಸಿಡಿದೆದ್ದ ಟ್ಯಾಕ್ಸಿ ಚಾಲಕರು

Public TV
By Public TV
1 hour ago
aryan khan shilpa shetty
Bengaluru City

ಬೆಂಗಳೂರು| ಆರ್ಯನ್‌ ಖಾನ್‌ ಬಂದಿದ್ದ, ಶಿಲ್ಪಾ ಶೆಟ್ಟಿ ಒಡೆತನದ ಪಬ್‌ಗಳ ವಿರುದ್ಧ FIR

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?