ಮಂಡ್ಯ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ರಾಜಕೀಯ ಮೆಟ್ಟಿಲು ಸದ್ಯದ ಸಂದರ್ಭದಲ್ಲಿ ಕುಸಿಯುತ್ತಿದೆ. ಹೀಗಾಗಿ ಅವರು ಸಿಡಿಗಳನ್ನು ಹಿಡಿದುಕೊಂಡು ಬರುತ್ತಿದ್ದಾರೆ ಎಂದು ಕೇಂದ್ರ ಸಚಿವ ಸದಾನಂದಗೌಡ ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಗಳೂರು ಗಲಭೆ ವಿಚಾರದ ಕುರಿತು ಸಿಡಿ ಬಿಡುಗಡೆ ಮಾಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಮಂಗಳೂರು ಗಲಭೆ ನಡೆದು ಇಷ್ಟು ದಿನಗಳು ಕಳೆದಿವೆ, ಗಲಭೆಯಾದಗ ಕುಮಾರಸ್ವಾಮಿ ಅವರು ಯಾಕೆ ಸಿಡಿ ಬಿಡುಗಡೆ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದರು.
- Advertisement 2
- Advertisement 3
ಕುಮಾರಸ್ವಾಮಿ ಅವರು ಅವರದ್ದೆ ಜನರನ್ನು ಕಳುಹಿಸಿ ಪೊಲೀಸ್ ಡ್ರೆಸ್ ಹಾಕಿಸಿ ಎಲ್ಲಾ ರೀತಿಯ ವಿಡಿಯೋ ಮಾಡಿ ಈಗ ಸಿಡಿ ಬಿಡುಗಡೆ ಮಾಡಿರಬೇಕು. ಈ ಸಿಡಿ ಬಿಡುಗಡೆಯ ಹಿಂದೆ ದೊಡ್ಡ ಹುನ್ನಾರವಿದೆ. ಸಿಡಿಗಳು ಹಲವಾರು ಜನರಿಗೆ ತಮ್ಮ ರಾಜಕೀಯ ಅಸ್ತಿತ್ವದ ಸ್ವತ್ತಾಗಿ ಪರಿವರ್ತನೆಯಾಗಿವೆ. ಹೀಗಾಗಿ ಕುಮಾರಸ್ವಾಮಿ ಅವರು ಸಿಡಿ ಬಿಡುಗಡೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನು ಓದಿ : ಮಂಗ್ಳೂರನ್ನು ‘ಕಾಶ್ಮೀರ’ ಮಾಡಲು ಹೊರಟಿದೆ, ಇದನ್ನು ತೋರಿಸಲು 35 ವಿಡಿಯೋ ರಿಲೀಸ್ – ‘ಸಿಡಿ’ದ ಎಚ್ಡಿಕೆ
- Advertisement 4
ಕರ್ನಾಟಕದಲ್ಲಿ ಇದುವರೆಗೆ ಸಾಕಷ್ಟು ಸಿಡಿಗಳು ಬಿಡುಗಡೆಯಾಗಿವೆ. ಅವುಗಳಲ್ಲಾ ಸತ್ಯ ಆಗಿದ್ದರೆ ಹಲವರು ಜೈಲಿಗೆ ಹೋಗಬೇಕಿತ್ತು. ಇದು ಕೇವಲ ತಮ್ಮ ತಾತ್ಕಾಲಿಕ ಬೆಳೆ ಬೇಯಿಸಿಕೊಳ್ಳಲು ಜನರನ್ನು ಬೇರೆ ದಾರಿಗೆ ಎಳೆಯಲು ಕುಮಾರಸ್ವಾಮಿ ಅವರು ಹೀಗೆ ಮಾಡುತ್ತಿದ್ದಾರೆ ಎಂದು ಸದಾನಂದಗೌಡ ಅವರು ವಾಗ್ದಾಳಿ ನಡೆಸಿದರು.