ಮಂಡ್ಯ: ಕಾಮುಕ ಟ್ಯೂಶನ್ ಶಿಕ್ಷಕನಿಂದ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಮಳವಳ್ಳಿ ಪಟ್ಟಣದ (Malavalli) ಬಾಲಕಿ ಕುಟುಂಬಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) 10 ಲಕ್ಷ ರೂಪಾಯಿ ಪರಿಹಾರ ಹಣವನ್ನು ಘೋಷಣೆ ಮಾಡಿದ್ದಾರೆ.
ಮಂಡ್ಯ ಜಿಲ್ಲೆ ಕೆ. ಆರ್. ಪೇಟೆಯ ಅಂಬಿಗರಹಳ್ಳಿ ಸಂಗಮದಲ್ಲಿ ಆಯೋಜಿಸಿರುವ ಶ್ರೀ ಮಲೆಮಹದೇಶ್ವರರ ಮಹಾಕುಂಭ ಮೇಳ 2022 ಮಹೋತ್ಸವದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರೊಂದಿಗೆ ಪಾಲ್ಗೊಂಡು ಮಾತನಾಡಿದೆನು. pic.twitter.com/HItEZ7wDJQ
— Basavaraj S Bommai (@BSBommai) October 16, 2022
ಮಂಡ್ಯ (Mandya ) ಜಿಲ್ಲೆಯ ಕೆಆರ್ಪೇಟೆ (K.R.Pete) ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಕುಂಭಮೇಳದಲ್ಲಿ (Kumbhamela)ಭಾಗಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು, ಕಾರ್ಯಕ್ರಮ ಮುಗಿಸಿ ಹೊರಡುವ ವೇಳೆ ವೇದಿಕೆಯಲ್ಲಿ ಮಳವಳ್ಳಿ (Malavalli) ಪಟ್ಟಣದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಬಾಲಕಿ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಹಣವನ್ನು ಘೋಷಿಸಿದ್ದಾರೆ. ಇದನ್ನೂ ಓದಿ: ಇದು ಜೈಲಲ್ಲ, ಚೀನಾದಲ್ಲಿರುವ ಕೋವಿಡ್ ಐಸೊಲೇಶನ್ ವಾರ್ಡ್- ವೀಡಿಯೋ ವೈರಲ್
ಕಳೆದ ಮಂಗಳವಾರ ಟ್ಯೂಶನ್ಗೆ ಹೋಗಿದ್ದ 10 ವರ್ಷದ ಬಾಲಕಿಯನ್ನು ಟ್ಯೂಶನ್ನ ಮೇಲ್ವಿಚಾರಕ ಹಾಗೂ ಶಿಕ್ಷಕ ಕಾಂತರಾಜು ಅತ್ಯಾಚಾರ ವೆಸಗಿ ನಂತರ ಕೊಲೆ ಮಾಡಿದ್ದ. ಇದಾದ ನಂತರ ಕಾಮುಕ ಕಾಂತರಾಜು ಅನ್ನು ಪೊಲೀಸರು ಬಂಧಿಸಿದ್ದಾರೆ. ಹೆತ್ತವರು ತಮ್ಮ ಮಗಳನ್ನು ನೆನದು ಕಣ್ಣೀರು ಹಾಕುವುದರ ಜೊತೆಗೆ ಕಾಂತರಾಜುವನ್ನು ನೇಣು ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಸಾರ್ವಜನಿಕರು ಪ್ರತಿಭಟನೆ ನಡೆಸಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದರು. ಇದನ್ನೂ ಓದಿ: ಆರ್ಎಸ್ಎಸ್, ಬಿಜೆಪಿ ಬ್ರಿಟಿಷರ ಜೊತೆಗೆ ಶಾಮೀಲಾಗಿದ್ರು: ರಾಮಲಿಂಗಾ ರೆಡ್ಡಿ