ಮಂಡ್ಯ: ಸುಮಲತಾ ಅಂಬರೀಶ್ ಅವರು 45 ಸಾವಿರ ಲೀಡ್ನಲ್ಲಿ ಗೆಲ್ಲುತ್ತಾರೆ ಎಂದು ಮಂಡ್ಯ ಬಿಜೆಪಿ ಘಟಕವು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ವರದಿ ಒಪ್ಪಿಸಿದೆ.
ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಬಿಜೆಪಿ ಚುನಾವಣೆ ನಿರ್ವಹಣಾ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿತ್ತು. ಈ ವೇಳೆ ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಗನಗೌಡ ಅವರು ಸುಮಲತಾ ಗೆಲ್ಲುತ್ತಾರೆ ಎಂಬ ವರದಿಯನ್ನು ಸಲ್ಲಿಸಿದ್ದಾರೆ.
ಪಾಂಡವಪುರ ಮತ್ತು ಮೇಲುಕೋಟೆಯಲ್ಲಿ ಜೆಡಿಎಸ್ ಅಲ್ಪ ಮುನ್ನಡೆ ಪಡೆಯಲಿದ್ದು ಉಳಿದಕಡೆ ಸಮಬಲದ ಮತ ಪಡೆಯಲಿದ್ದಾರೆ. ಅಂತಿಮವಾಗಿ 45 ಸಾವಿರ ಮತಗಳಿಂದ ಸುಮಲತಾ ಜಯಗಳಿಸುತ್ತಾರೆ ಎಂದು ನಾಗನಗೌಡ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
ವರದಿ ಸಲ್ಲಿಸುವ ವೇಳೆ ವಿಶೇಷ ಘಟನೆಗಳನ್ನು ಪ್ರಸ್ತಾಪಿಸುವಂತೆ ಬಿಎಸ್ವೈ ಸೂಚಿಸಿದರು. ಈ ವೇಳೆ ಮಂಡ್ಯದ ಚುನಾವಣೆ ವೇಳೆ ಪ್ರಸ್ತಾಪವಾಗಿದ್ದ ಮಾಯಾಂಗನೆ, ಗಂಡ ಸತ್ತ ಹೆಂಡತಿ, ಕಳ್ಳೆತ್ತು, ಜೋಡೆತ್ತು ಹೇಳಿಕೆಯನ್ನು ನಾಗನಗೌಡ ಪ್ರಸ್ತಾಪಿಸಿದ್ದಾರೆ.
ವಿವಾದಾತ್ಮಕ ಹೇಳಿಕೆ ಬಗ್ಗೆ ನಾಗನಗೌಡ ಒಂದೊಂದಾಗಿ ಹೇಳುತ್ತಿದ್ದಂತೆ, ಸಾಕು ಬೀಡಿ ಇಡೀ ರಾಜ್ಯವೇ ಆ ಎಲ್ಲ ಹೇಳಿಕೆಯನ್ನು ನೋಡಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.