ಮಡಿಕೇರಿ: ಸಾರಿಗೆ ಬಸ್ ಕಳೆದ ಮೂರು ದಿನಗಳ ಹಿಂದೆ ರಸ್ತೆ ಮಧ್ಯದಲ್ಲೇ ಕೆಟ್ಟು ನಿಂತರೂ ಇದುವರೆಗೂ ಅದನ್ನು ತೆರವುಗೊಳ್ಳಿಸದ ಕಾರಣ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ.
- Advertisement 2
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ-ಹೊನ್ನವಳ್ಳಿಗೆ ಹೋಗುವ ರಾಜ್ಯ ಹೆದ್ದಾರಿಯ ತಿರುವಿನಲ್ಲಿ ಕೆಎಸ್ಆರ್ ಟಿಸಿ ಬಸ್ ಮೂರು ದಿನಗಳ ಹಿಂದೆಯೇ ಕೆಟ್ಟು ನಿಂತಿದೆ. ಪರಿಣಾಮ ವಾಹನ ಸವಾರರು ಹಾಗೂ ಬಸ್ ಸಂಚಾರ ಮಾಡುವಲ್ಲಿ ತೊಂದರೆಯಾಗುತ್ತಿದೆ. ಇದನ್ನೂ ಓದಿ:ರಸ್ತೆ ಬಿಟ್ಟು ಮನೆ ಛಾವಣಿ ಹತ್ತಿ ನಿಂತ ಆಟೋ!
- Advertisement 3
- Advertisement 4
ಬೆಂಗಳೂರು ಡಿಪೋಗೆ ಸೇರಿದ ಕೆಎ 57 ಎಫ್ 4434 ನಂಬರಿನ ಬಸ್ ಇದಾಗಿದೆ. ರಸ್ತೆ ಮಧ್ಯದಲ್ಲೇ ಅನಾಥವಾಗಿ ಬಸ್ ನಿಂತಿದ್ದು. ಅದಷ್ಟು ಬೇಗ ಇಲಾಖೆ ಅಧಿಕಾರಿಗಳು ಬಸ್ ನ್ನು ತೆರವುಗೋಳಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕನಸು ಕಾಣುವ ಹಕ್ಕಿದೆ ಕಾಣಲಿ: ಕಾಂಗ್ರೆಸ್ಸಿಗರಿಗೆ ಸಚಿವ ಕೋಟ ಟಾಂಗ್