ಮಂಡ್ಯ: ಆದಿಚುಂಚನಗಿರಿ ಮಠಕ್ಕೆ ಆಗಮಿಸಿದ ಕೆ.ಎಸ್ ಭಗವಾನ್ ಮನುಸ್ಮೃತಿ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿ ರಾಮ ಹಾಗೂ ರಾಮ ಮಂದಿರ ನಿರ್ಮಾಣದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆದಿಚುಂಚನಗಿರಿ ಮಠಕ್ಕೆ ಆಗಮಿಸಿದ್ದ ಕೆ.ಎಸ್ ಭಗವಾನ್, ಹಿಂದೂ ಧರ್ಮ ಉಳಿಬೇಕು ಅಂದ್ರೆ ಮೊದಲು ಶೂದ್ರ ಎಂಬ ಪದವನ್ನು ಮನುಸ್ಮೃತಿಯಿಂದ ತೆಗೆದು ಹಾಕಬೇಕು. ಶೂದ್ರ ಅಂದ್ರೆ ಬರೀ ಗುಲಾಮ ಅಂತಷ್ಟೇ ಅರ್ಥವಲ್ಲ. ಮನುಸ್ಮೃತಿಯಲ್ಲಿ ಶೂದ್ರ ಎಂದರೆ ಸೂಳೆಮಕ್ಕಳು ಎಂದರ್ಥ. ಅಂತಹ ಅಸಭ್ಯ ಪದ ನಮಗೆ ಬೇಕಾ? ಅದು ನಮಗೆ ಗೌರವ ತರುತ್ತಿದೆಯಾ? ಅಂತಹ ಮನುಸ್ಮೃತಿಯನ್ನು ಬಿಜೆಪಿಯವರು ತರುತ್ತೇನೆ ಅಂತಾರೆ, ಅದನ್ನು ಒಪ್ಪಿಕೊಳ್ತೀರಾ ಎಂದು ಪ್ರಶ್ನಿಸಿದ್ದಾರೆ.
- Advertisement 2
- Advertisement 3
ಕಳೆದ ಎರಡು ವರ್ಷಗಳಿಂದ ನಾನು ವಾಲ್ಮೀಕಿ ರಾಮಾಯಣ ಅಧ್ಯಯನ ಮಾಡಿ `ರಾಮ ಮಂದಿರ ಏಕೆ ಬೇಡ’ ಎಂಬ ಪುಸ್ತಕವನ್ನು ಬರೆದಿದ್ದೇನೆ. ಅದನ್ನು ಓದಿದರೇ, ರಾಮ ಜನಸಾಮಾನ್ಯರಿಗೆ ವಿರುದ್ಧವಾಗಿದ್ದ ಎಂಬುದು ನಮಗೆ ಗೊತ್ತಾಗುತ್ತೆ. ರಾಮ ಚತುರ್ವರ್ಣದ ಪ್ರತಿನಿಧಿಯಾಗಿ ಅದನ್ನು ಉದ್ಧಾರ ಮಾಡಲು ರಾಮಾಯಣದಲ್ಲಿ ಗುರುತಿಸಿಕೊಂಡ. ಅವನು ನಿಜವಾದ ಮನುಷ್ಯನಲ್ಲ, ದೇವರಂತೂ ಅಲ್ಲವೇ ಅಲ್ಲ. ರಾಮನನ್ನು ದೇವರು ಎಂದು ವಾಲ್ಮೀಕಿ ರಾಮಾಯಣದಲ್ಲಿ ಎಲ್ಲೂ ಉಲ್ಲೇಖಿಸಿಲ್ಲ. ದೇವರು ಅಂತಾ ಯಾರಿಗೆ ಅನುಕೂಲವಾಯ್ತೋ, ಅಂತ ಪುರೋಹಿತರು ರಾಮ, ಕೃಷ್ಣನನ್ನು ದೇವರೆಂದು ಮಾಡಿಕೊಂಡಿದ್ದಾರೆ ಎಂದು ರಾಮನ ವಿರುದ್ಧ ಕಿಡಿಕಾರಿದರು.
- Advertisement 4
ಈ ದೇಶದಲ್ಲಿ ಶೇ.95 ರಷ್ಟು ಶೂದ್ರರಿದ್ದಾರೆ. ಅವರನ್ನೆಲ್ಲಾ ನೀವು ಗುಲಾಮರು, ಸೂಳೆಮಕ್ಕಳು ಎಂದರೆ ಒಪ್ಪುತ್ತೀರಾ? ಮನುಸ್ಮೃತಿಯ 8ನೇ ಅಧ್ಯಾಯ 415ನೇ ಶ್ಲೋಕದಲ್ಲಿ ಈ ವಿಚಾರವಿದೆ. ಜನರು ಇದನ್ನೆಲ್ಲ ತಿಳಿಯಬೇಕು ಎಂದು ಹೇಳುತ್ತಿದ್ದೇನೆ. ನನಗೆ ಗುಂಡಿಕ್ಕಿದರೂ ಇದನ್ನೆಲ್ಲ ತಿಳಿಸಿಯೇ ತಿಳಿಸುತ್ತೇನೆ. ನಾನು ಹೇಳುವುದು ವಿವಾದವಾದರು ಪರವಾಗಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv