– ಕಿಂಗ್ ಮೇಕರ್, ಹೆಚ್ಡಿಕೆ ಕನಸು
ಕೊಪ್ಪಳ: ದೆಹಲಿಯಲ್ಲಿ ಭಾರತೀಯ ಜನತಾ ಪಾರ್ಟಿ ಅತೀ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಎಕ್ಸಿಟ್ ಪೋಲ್ ಏನೇ ಬರಲಿ. ಆದರೆ ಬಿಜೆಪಿ ಅದ್ಭುತ ಸಾಧನೆ ಮಾಡುತ್ತೆ. ಹೀಗಾಗಿ ಫಲಿತಾಂಶದ ನಂತ್ರ ನೋಡಿ ಎಂದರು.
ಕುಮಾರಸ್ವಾಮಿ ಕಿಂಗ್ ಮೇಕರ್ ಆಗ್ತಾರೆ ಅನ್ನೋದು ಕನಸು. ಯಡಿಯೂರಪ್ಪ ಸರ್ಕಾರ ಸುಭದ್ರವಾಗಿದ್ದು ಮುಂದಿನ ಸರ್ಕಾರವೂ ಬಿಜೆಪಿದ್ದೇ ಆಗಿರುತ್ತದೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಮುಖ್ಯಮಂತ್ರಿ ಎಲ್ಲರಿಗೂ ನ್ಯಾಯ ಕೊಡ್ತಾರೆ ಎಂದರು. ಇದೇ ವೇಳೆ ಕಲ್ಯಾಣ ಕರ್ನಾಟಕಕ್ಕೆ ಸಚಿವ ಸ್ಥಾನ ನೀಡುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಎಲ್ಲರಿಗೂ ನ್ಯಾಯ ಕೊಡ್ತಾರೆ ಎಂದು ಹೇಳುವ ಮೂಲಕ ನುಣುಚಿಕೊಂಡರು.
ಪೌರತ್ವ ವಿಚಾರದಲ್ಲಿ ಕಾಂಗ್ರೆಸ್ ಜನರ ದಿಕ್ಕು ತಪ್ಪಿಸುತ್ತಿದೆ. ನೆಹರು-ಜಿನ್ನಾ ಷಡ್ಯಂತ್ರದಿಂದ ದೇಶ ಇಬ್ಭಾಗ ಆಯ್ತು. ಪೌರತ್ವ ಕನಸನ್ನು ಮಹಾತ್ಮ ಗಾಂಧಿ ಕಂಡಿದ್ರು. ಅಷ್ಟೇ ಅಲ್ಲ ಪಾಕಿಸ್ತಾನದಿಂದ ಅಲ್ಪಸಂಖ್ಯಾತರಿಗೆ ಪೌರತ್ವ ಕೊಡೋ ಕನಸು ಕೂಡ ಗಾಂಧಿ ಕಡಿದ್ರು. ಆದರೆ ಅದನ್ನು ನನಸು ಮಾಡಿದ್ದು ಮೋದಿ ಎಂದರು.
ಈ ದೇಶದ ಯಾವದೇ ಮುಸ್ಲಿಂ ಪೌರತ್ವವನ್ನು ನಾವು ಕಸಿದುಕೊಳ್ಳುವುದಿಲ್ಲ. ಬದಲಾಗಿ ಮೋದಿ ಕಾಲದಲ್ಲಿ ದೇಶದ ಎಲ್ಲ ಮುಸ್ಲಿಮರಿಗೂ ಬದುಕುವ ಹಕ್ಕು ಕೊಡ್ತೀವಿ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.