Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕೇರಳ ಸರ್ಕಾರದ ವಿರುದ್ಧ ಕನ್ನಡಿಗರಿಂದ ಮೇ 21ಕ್ಕೆ #KasaragoduKannadaUlisi ಅಭಿಯಾನ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Dakshina Kannada | ಕೇರಳ ಸರ್ಕಾರದ ವಿರುದ್ಧ ಕನ್ನಡಿಗರಿಂದ ಮೇ 21ಕ್ಕೆ #KasaragoduKannadaUlisi ಅಭಿಯಾನ

Dakshina Kannada

ಕೇರಳ ಸರ್ಕಾರದ ವಿರುದ್ಧ ಕನ್ನಡಿಗರಿಂದ ಮೇ 21ಕ್ಕೆ #KasaragoduKannadaUlisi ಅಭಿಯಾನ

Public TV
Last updated: May 17, 2017 6:12 pm
Public TV
Share
3 Min Read
Kasaragoodu main
SHARE

ಕಾಸರಗೋಡು: ಕೇರಳ ಸರ್ಕಾರದ ಮಲೆಯಾಳಂ ಭಾಷೆ ಕಡ್ಡಾಯ ಆದೇಶ ವಿರೋಧಿಸಿ ಮೇ 21ಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ನಡೆಸಲು ಕನ್ನಡಿಗರು ಮುಂದಾಗಿದ್ದಾರೆ.

ಗಡಿನಾಡಿನ ಕನ್ನಡಿಗರು ಸಂದಿಗ್ದ ಸ್ಥಿತಿಗೆ ತಲುಪಿದ್ದಾರೆ. ಕನ್ನಡಿಗರು ಮಲೆಯಾಳಂ ಕಡ್ಡಾಯವಾಗಿ ಕಲಿಯಲೇ ಬೇಕು ಎನ್ನುವ ಧೋರಣೆಯಿಂದಾಗಿ ಕನ್ನಡ ಕಲಿತವರು, ಕಲಿಸುವವರು,ಹಾಗೂ ಕನ್ನಡಿಗರ ಸ್ಥಿತಿ ಚಿಂತಾಜನಕದತ್ತ ತಲುಪುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಪ್ರತಿಭಟನೆಗೆ ಸಹಕಾರ ನೀಡಬೇಕೆಂದು ಗಡಿನಾಡ ಕನ್ನಡಿಗರು ಮನವಿ ಮಾಡಿದ್ದಾರೆ.

ಹಲವು ಪ್ರತಿಭಟನೆ, ಮನವಿ ಸಲ್ಲಿಕೆಯನ್ನು  ಈ ಮೊದಲು ಹಲವು ಕನ್ನಡ ಸಂಘಟನೆಗಳು, ಕನ್ನಡಪ್ರೇಮಿಗಳು ಒಂದಾಗಿ ಮಾಡಿದ್ದರೂ ಜನ ಸಾಮಾನ್ಯರ ಕೂಗು ಸರಕಾರಕ್ಕೆ ತಲುಪಲಿಲ್ಲ. ತಲುಪಿದ್ದರೂ ದಬ್ಬಾಳಿಕೆಯ ರೂಪದಲ್ಲಿ, ಯಾವುದೋ ಸೇಡನ್ನು ಕಾಸರಗೋಡಿನ ಜನತೆಯ ಮೂಲಕ ತೀರಿಸುತ್ತಿರುವಂತೆ ಇನ್ನಷ್ಟು ಪರಿಸ್ಥಿತಿ, ಹಾಗೂ ಕಾನೂನನ್ನು ಜಟಿಲಗೊಳಿಸಿ ಕನ್ನಡಿಗರ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.

ಪ್ರಾದೇಶಿಕ ಭಾಷೆಗಳಿಗೆ ಮನ್ನಣೆ ಕೊಡಬೇಕೆಂಬ ಕಾನೂನಿದ್ದರೂ ಕನ್ನಡಿಗರ ಹಕ್ಕನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವುದು ವಿಪರ್ಯಾಸವೇ ಸರಿ. ಇದನ್ನು ಎಲ್ಲರ ಒಕ್ಕೊರಲಿನಿಂದ ಪ್ರತಿಭಟಿಸಲೇ ಬೇಕಿದೆ. ರಾಜಕೀಯ, ಹಾಗೂ ಇನ್ನಿತರ ಸಂಕೋಲೆಗಳಿಂದ ಹೊರಬಂದು ನಾವೆಲ್ಲ ಗಡಿನಾಡಿನ ಕನ್ನಡಿಗರೆಂಬ ಕನ್ನಾಡಾಭಿಮಾನದಿಂದ ಎಲ್ಲರೂ ಒಂದಾಗಿ ಪ್ರತಿಭಟಿಸಬೇಕೆಂದು ಗಡಿನಾಡಿನ ಕನ್ನಡಿಗರು ಕೇಳಿಕೊಂಡಿದ್ದಾರೆ.

ಪ್ರತಿಭಟನೆ ಹೇಗೆ? ಮೇ23ರಂದು ಕಾಸರಗೋಡಿನ ಜಿಲ್ಲಾಧಿಕಾರಿ ಕಛೇರಿಗೆ ಸಮಸ್ತ ಕನ್ನಡಿಗರೂ ಸೇರಿ ದಿಗ್ಬಂಧನ ಹಾಗೂ ಮೇ 21ರಂದು ಕಾಸರಗೋಡಿನ ಸಮಸ್ಯೆಯನ್ನು ರಾಷ್ಟ್ರೀಯ ನಾಯಕರುಗಳ ಗಮನಕ್ಕೆ ತರಲು ಸಾಮಾಜಿಕ ತಾಣಗಳ ಮೂಲಕ #KasaragoduKannadaUlisi   ಟ್ರೆಂಡ್ ಮಾಡಲು ಮಾಡಲು ತೀರ್ಮಾನಿಸಿದ್ದಾರೆ.

ಎಲ್ಲಾ ಕನ್ನಡಪರ ಹೋರಾಟಗಾರರೂ ನೇರವಾಗಿ ಪ್ರತಿಭಟನೆಯಲ್ಲಿ ಹಾಗೂ ಟ್ವೀಟರ್ ಟ್ರೆಂಡ್ ನಲ್ಲಿ ಭಾಗವಹಿಸಬೇಕು. ಕಾಸರಗೋಡಿನ ಕನ್ನಡಿಗರ ಹಕ್ಕಿಗಾಗಿ ಸಮಸ್ತ ಕನ್ನಡಿಗರೂ ಕರ್ನಾಟಕದ ಎಲ್ಲಾ ಸಂಘಟನೆಗಳೂ ಪ್ರೀತಿಯಿಂದ ಕನ್ನಡಾಭಿಮಾನದಿಂದ ಕೈಜೋಡಿಸುವಂತೆ ಗಡಿನಾಡ ಕನ್ನಡಿಗರು ಮನವಿ ಮಾಡಿದ್ದಾರೆ.

ಮಲೆಯಾಳಂ ಕಡ್ಡಾಯದಿಂದ ಏನೆಲ್ಲಾ ಸಂಭವಿಸಬಹುದು?
– ಶಾಲೆಗಳಲ್ಲಿ ಕನ್ನಡ ಮುಖ್ಯೋಪಾದ್ಯಾಯರ ಅಗತ್ಯವಿಲ್ಲ
– ಸರಕಾರೀ ಕಛೇರಿಗಳಲ್ಲಿ ಕಾಸರಗೋಡಿನ ಕನ್ನಡಿಗರೇ ಬೇಕಿಲ್ಲ
– ಸರಕಾರದ ಎಲ್ಲಾ ಸುತ್ತೋಲೆಗಳು ಮಲೆಯಾಳದಲ್ಲಿ
– ಪಿಎಸ್‍ಸಿ ಪರೀಕ್ಷೆ ಮಲಯಾಳದಲ್ಲಿ ನಡೆಯುತ್ತದೆ ಮತ್ತು ಗಡಿನಾಡು ಕನ್ನಡಿಗ ಸವಲತ್ತು ಇಲ್ಲ
– ನಮ್ಮ ಸಂಸ್ಕೃತಿ ನಾಶವಾಗಿ ಭಾಷಾ ಅಲ್ಪಸಂಖ್ಯಾತ ಸೌಲಭ್ಯ ಕಡಿತ
– ಕೊನೆಯದಾಗಿ ಕನ್ನಡ ಭಾಷೆಯ ನಿರ್ನಾಮ

ಗಡಿನಾಡ ಕನ್ನಡಿಗರ ಮನವಿ ಏನು?
ನಾವು ಕಾಸರಗೋಡಿಗೆ ಮೂಲತಃ ಕನ್ನಡಿಗರು. ನಮ್ಮ ಜಾತಿ ಬೇರೆ ಇರಬಹುದು, ಮತ ಬೇರೆ ಇರಬಹುದು, ಮನೆಯಲ್ಲಿ ಆಡುವ ಭಾಷೆ ಬೇರೆ ಇರಬಹುದು. ಆದರೆ ಔದ್ಯೋಗಿಕವಾಗಿ ನಮ್ಮ ಭಾಷೆ ಕನ್ನಡ ಎಂದು ಭಾಷಾವಾರು ಪ್ರಾಂತ್ಯ ರಚನೆಯಾದ ಕಾಲದಲ್ಲೇ ಎಲ್ಲರೂ ಒಪ್ಪಿಕೊಂಡಿದ್ದೇವೆ. ಆದ್ದರಿಂದಲ್ಲವೆ ಕಾಸರಗೋಡು ಅನ್ಯಾಯವಾಗಿ ಕೇರಳಕ್ಕೆ ಸೇರಿಸಲ್ಪಟ್ಟಾಗ ಇಲ್ಲಿನ ಕನ್ನಡಿಗರಿಗೆ ಸಂಧಾನಾತ್ಮಕವಾಗಿ ಭಾಷಾ ಅಲ್ಪಸಂಖ್ಯಾತರು ಎಂಬ ವಿಶೇಷ ಸ್ಥಾನಮಾನ ಲಭಿಸಿದ್ದು. ಅದಕ್ಕಾಗಿ ದಿಟ್ಟತನದಿಂದ ಹೋರಾಡಿದ ಕಾಸರಗೋಡಿನ ಕನ್ನಡ ಹೋರಾಟಗಾರರ ಪ್ರಯತ್ನವನ್ನು ವ್ಯರ್ಥ ಮಾಡಿದ ಪಾಪ ನಮಗೆ ಬರಬಾರದಲ್ಲವೆ? ಅದಕ್ಕಾಗಿಯೇ ಮಲೆಯಾಳ ಭಾಷಾ ಮಸೂದೆಯಿಂದ ಕನ್ನಡದ ಅಳಿವು ನಿಶ್ಚಯ ಎಂಬ ದೂರಗಾಮಿ ಚಿಂತನೆಯಿರುವ ಕನ್ನಡಿಗರೆಲ್ಲರೂ ಎಚ್ಚೆತ್ತು ಮಸೂದೆಯಿಂದ ಕಾಸರಗೋಡನ್ನು ಹೊರತುಪಡಿಸಬೇಕೆಂಬ ಬೇಡಿಕೆಯೊಂದಿಗೆ ಹೋರಾಟ ಕಣಕ್ಕಿಳಿದಿದ್ದೇವೆ.

ಇದರಲ್ಲಿ ಮೂಲತಃ ಕನ್ನಡಿಗರಾಗಿರುವ ಎಲ್ಲರೂ ಕೈ ಜೋಡಿಸಬೇಕಾದುದು ಧರ್ಮ, ಕರ್ತವ್ಯ. ಬನ್ನಿ… ಕನ್ನಡ ಉಳಿಸುವಲ್ಲಿ ನಿಮ್ಮ ಅಳಿಲ ಸೇವೆಯೂ ಇರಲಿ. ಕನ್ನಡಿಗರ ಶಕ್ತಿ ಪ್ರದರ್ಶನಕ್ಕೆ ನಿಮ್ಮ ಪಾಲ್ಗೊಳ್ಳುವಿಕೆಯೂ ಇರಲಿ. ಮೇ 23 ಮಂಗಳವಾರ, ಬೆಳಗ್ಗೆ 7.30 ಕ್ಕೆ ವಿದ್ಯಾನಗರ ಕಲೆಕ್ಟರೇಟ್ ಬಳಿಯಲ್ಲಿ ಒಟ್ಟು ಸೇರೋಣ. ಆ ಒಂದು ದಿನವನ್ನು ಕಾಸರಗೋಡಿನಲ್ಲಿ ಕನ್ನಡದ ಉಳಿವಿಗಾಗಿ ನಡೆಸುವ ಐತಿಹಾಸಿಕ ಹೋರಾಟಕ್ಕೆ ಕಾಯ್ದಿರಿಸೋಣ.

ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಕನ್ನಡಿಗರ ಒಕ್ಕೂಟದ ಸಮಾಲೋಚನ ಸಭೆ ಪೈವಳಿಕೆನಗರ ಶಾಲೆಯಲ್ಲಿ ನಡೆಯಿತು. ಕಯ್ಯಾರು ಧರ್ಮ ಪ್ರಾಂತದ ಧರ್ಮಗುರು  ವಂದನೀಯ ಫಾ| ವಿಕ್ಟರ್ ಡಿಸೋಜಾ ಮಾತನಾಡಿದರು.

kaerala kananda 2

kerala kannada

TAGGED:kannadakarnatakakasaragod kannadigamalayalam ordinanceಎಡರಂಗಕನ್ನಡಕೇರಳಗಡಿನಾಡ ಕನ್ನಡಿಗರುಮಲೆಯಾಳಂ
Share This Article
Facebook Whatsapp Whatsapp Telegram

Cinema news

kavya gowda
ನಟಿ ಕಾವ್ಯ ಗೌಡ, ಪತಿ ಮೇಲೆ ಹಲ್ಲೆ ಆರೋಪ; ದೂರು ದಾಖಲು
Cinema Latest Main Post Sandalwood
Raghavendra Chitravani 1
ರಾಘವೇಂದ್ರ ಚಿತ್ರವಾಣಿಗೆ 50ರ ಸಂಭ್ರಮ – ಸಿನಿ ಗಣ್ಯರಿಂದ ಲೋಗೋ ಲಾಂಚ್
Cinema Latest Sandalwood Top Stories
Gilli Nata 6
ಚನ್ನಪಟ್ಟಣದಲ್ಲಿ ಗಿಲ್ಲಿ ಕ್ರೇಜ್ – ವೇದಿಕೆ ಏರಿದ ಅಭಿಮಾನಿಗಳ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ
Cinema Districts Karnataka Latest Ramanagara States Top Stories
Anantha Padmanabha
ಹಿಟ್‌ ಡೈಲಾಗ್‌ ರೈಟರ್‌ ಪ್ರಶಾಂತ್‌ ರಾಜಪ್ಪ ನಿರ್ದೇಶನದ ಚೊಚ್ಚಲ ಚಿತ್ರದ ಟೈಟಲ್ ರಿವೀಲ್
Cinema Latest Sandalwood

You Might Also Like

Husband commits suicide after wife elopes with her Lover in Davanagere
Crime

ಮದುವೆಯಾದ ಎರಡೇ ತಿಂಗಳಿಗೆ ಮತ್ತೊಬ್ಬನ ಜೊತೆ ಪತ್ನಿ ಪರಾರಿ – ನೇಣಿಗೆ ಕೊರಳೊಡ್ಡಿದ ಪತಿ

Public TV
By Public TV
2 minutes ago
arrest crime
Latest

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪರ ಬೇಹುಗಾರಿಕೆ ಶಂಕೆ; ರಾಜಸ್ಥಾನದ ಜೈಸಲ್ಮೇರ್‌ ವ್ಯಕ್ತಿ ಬಂಧನ

Public TV
By Public TV
1 hour ago
gold silver 1
Latest

ಬಜೆಟ್‌ ಬಳಿಕ ಚಿನ್ನ, ಬೆಳ್ಳಿ ದರ ಇಳಿಯುತ್ತಾ?

Public TV
By Public TV
2 hours ago
Bengaluru Hitachi Company ATM Theft
Bengaluru City

ಬೆಂಗಳೂರಿನಲ್ಲಿ ಮತ್ತೊಂದು ಎಟಿಎಂ ವಾಹನ ದರೋಡೆ – ಏಜೆನ್ಸಿ ಸಿಬ್ಬಂದಿಯಿಂದ 1.40 ಕೋಟಿ ಲೂಟಿ

Public TV
By Public TV
2 hours ago
Bengaluru GBA Election
Bengaluru City

ಜಿಬಿಎ ಚುನಾವಣೆಗೆ ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿ ಏರಿಕೆ – 369 ವಾರ್ಡ್‌ಗೆ 1,800 ಆಕಾಂಕ್ಷಿಗಳಿಂದ ಅರ್ಜಿ ಸ್ವೀಕಾರ

Public TV
By Public TV
2 hours ago
trump US
Latest

ಭಾರತ-EU ವ್ಯಾಪಾರ ಒಪ್ಪಂದದೊಂದಿಗೆ ಯುರೋಪ್ ತನ್ನ ವಿರುದ್ಧವೇ ಯುದ್ಧಕ್ಕೆ ಹಣಕಾಸು ಒದಗಿಸುತ್ತಿದೆ: ಅಮೆರಿಕ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?