ಬೇಸಿಗೆ ಬೇಗೆಯಿಂದ ಕಂಗೆಟ್ಟಿದ್ದ ಕರುನಾಡ ಜನತೆಗೆ ಮಳೆರಾಯ ಗುಡ್ನ್ಯೂಸ್ ನೀಡಿದ್ದಾನೆ. ಮುಂದಿನ 4 ದಿನ ರಾಜ್ಯಾದ್ಯಂತ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಒಳನಾಡಿನಲ್ಲಿ ಮುಂದಿನ 4 ದಿನಗಳ ಕಾಲ ಮಳೆ ಇರಲಿದ್ದು, ಮಂಡ್ಯ, ಮೈಸೂರು, ಕೋಲಾರ, ಹಾಸನ, ಕೊಡಗು, ಚಾಮರಾಜನಗರ, ಸೇರಿದಂತೆ ಹಲವೆಡೆ ಮಳೆಯಾಗಲಿದೆ. ಅದೇ ರೀತಿಯಾಗಿ ಉತ್ತರ ಒಳನಾಡಿನಲ್ಲಿ ಮುಂದಿನ 2 ದಿನ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಒಣಹವೆ ಮುಂದುವರಿಯಲಿದ್ದು, ಬೆಂಗಳೂರಿನಲ್ಲಿ 2 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಮೋಡ ಕವಿದ ವಾತಾವರಣ ಹಾಗೂ ಗಾಳಿಯ ಪ್ರಮಾಣ ಹೆಚ್ಚಾಗಿರಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಚಿಕ್ಕಬಳ್ಳಾಪುರದಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 32-21
ಮಂಗಳೂರು: 33-24
ಶಿವಮೊಗ್ಗ: 37-19
ಬೆಳಗಾವಿ: 34-17
ಮೈಸೂರು: 34-22
ಮಂಡ್ಯ: 34-22
ಮಡಿಕೇರಿ: 31-17
ರಾಮನಗರ: 34-22
ಹಾಸನ: 33-19
ಚಾಮರಾಜನಗರ: 34-22
ಚಿಕ್ಕಬಳ್ಳಾಪುರ: 30-21
ಕೋಲಾರ: 32-22
ತುಮಕೂರು: 33-22
ಉಡುಪಿ: 33-23
ಕಾರವಾರ: 32-23
ಚಿಕ್ಕಮಗಳೂರು: 33-18
ದಾವಣಗೆರೆ: 37-19
ಹುಬ್ಬಳ್ಳಿ: 36-18
ಚಿತ್ರದುರ್ಗ: 35-20
ಹಾವೇರಿ: 36-18
ಬಳ್ಳಾರಿ: 37-23
ಗದಗ: 36-19
ಕೊಪ್ಪಳ: 36-22
ರಾಯಚೂರು: 37-23
ಯಾದಗಿರಿ: 37-24
ವಿಜಯಪುರ: 36-22
ಬೀದರ್: 35-22
ಕಲಬುರಗಿ: 37-23
ಬಾಗಲಕೋಟೆ: 37-21