ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ 2023 (Karnataka Assembly Election 2023) ಹಿನ್ನೆಲೆಯಲ್ಲಿ ಮತದಾನ ನಡೆಯುತ್ತಿದ್ದು, ಎಲ್ಲರೂ ಅತ್ಯಂತ ಉತ್ಸಾಹದಿಂದಲೇ ಮತ ಹಾಕುತ್ತಿದ್ದಾರೆ. ಅಂತೆಯೇ ರೋಗಿಯೊಬ್ಬರು ತಮ್ಮ ಹಕ್ಕು ಚಲಾಯಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಆರ್ ಆರ್ ನಗರ ನಿವಾಸಿಯಾಗಿರುವ ಶೇಷಾದ್ರಿ (40) ಅವರು ಕಿಡ್ನಿ ಸಮಸ್ಯೆ (Kidney Problem) ಯಿಂದ ತಿಲಕ್ ನಗರದ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: Karnataka Election 2023 Live – ಅಮೆರಿಕದಿಂದ ವೋಟ್ ಹಾಕಲು ಬಂದ ಟೆಕ್ಕಿಗೆ ಶಾಕ್!
ಇದೀಗ ಅವರು ಇಂದು ತಮ್ಮ ಅಮೂಲ್ಯವಾದ ಮತ ನೀಡಲು ತಿಲಕ್ ನಗರದ ಸಾಗರ್ ಆಸ್ಪತ್ರೆಯಿಂದ ಆರ್ ಆರ್ ನಗರಕ್ಕೆ ಬಂದು ಮತದಾನ ಮಾಡಲು ತೆರಳಿದ್ದಾರೆ.