ಚಾಮರಾಜನಗರ: ಸಿದ್ದರಾಮಯ್ಯ (Siddaramaiah) ಹೃದಯದಿಂದ ಮಾತನಾಡುತ್ತಿಲ್ಲ, ಗಂಟಲಿನಿಂದ ಇತ್ತೀಚೆಗೆ ಮಾತನಾಡುತ್ತಿದ್ದಾರೆ ಎಂದು ಸಚಿವ ವಿ ಸೋಮಣ್ಣ (V Somanna) ಕಿಡಿಕಾರಿದರು.
ಅಲಿಬಾಬಾ ಮತ್ತು ನಲವತ್ತು ಮಂದಿ ಕಳ್ಳರು ಎಂಬ ಸಿದ್ದರಾಮಯ್ಯ ಟೀಕೆ ವಿಚಾರವಾಗಿ ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರ ಭಾಷೆ ಅವರ ವ್ಯಕ್ತಿತ್ವ ತೋರಿಸುತ್ತದೆ. ಪದೇ ಪದೇ ಅವರ ಬಗ್ಗೆ ಮಾತನಾಡುವುದಕ್ಕೆ ಹೋಗಲ್ಲ. ಅವರ ಬಗ್ಗೆ ಮಾತಾಡಿದರೆ ಎಲ್ಲೆಲ್ಲಿಗೋ ಹೋಗಿಬಿಡುತ್ತದೆ. ಅವರ ಬಗ್ಗೆ ನನಗೆ ಇನ್ನೂ ಗೌರವವಿದೆ. ಅವರು ಹೃದಯದಿಂದ ಮಾತಾಡುತ್ತಿಲ್ಲ, ಗಂಟಲಿನಿಂದ ಇತ್ತೀಚೆಗೆ ಮಾತಾಡುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ತಾಲಿಬಾನ್ನ್ನು 21ನೇ ಶತಮಾನಕ್ಕೆ ತರಲು ಸಹಾಯ ಮಾಡಿ – ಮುಸ್ಲಿಂ ಮಹಿಳೆ ಸಲಹೆ
ಕಾಂಗ್ರೆಸ್ನ ಭರವಸೆಗಳು ಭರವಸೆಗಳಾಗಿಯೇ ಉಳಿಯುತ್ತವೆ. ಕಾಂಗ್ರೆಸ್ (Congress) ಪ್ರಜಾಧ್ವನಿ ಯಾತ್ರೆ ಹಾಗೂ ಭರವಸೆಗಳ ಬಗ್ಗೆ ವ್ಯಂಗ್ಯವಾಡಿದರು. ಅವರದ್ದೇ ಸರ್ಕಾರಗಳಿರುವ ರಾಜ್ಯಗಳಲ್ಲೇಕೆ ಜಾರಿಗೊಳಿಸಿಲ್ಲ. ಎಸ್ಕಾಂ ನೌಕರರಿಗೆ ನೀಡುತ್ತಿದ್ದ ಉಚಿತ ವಿದ್ಯುತ್ ಹಿಂತೆಗೆದುಕೊಂಡಿದ್ದು ಯಾರು?. 70 ವರ್ಷ ಆಳ್ವಿಕೆ ಮಾಡಿದವರಿಗೆ 5-10 ವರ್ಷ ತಡೆದುಕೊಳ್ಳಲು ಆಗುತ್ತಿಲ್ಲ. ಅವರು ಸರಿಯಾಗಿ ಆಡಳಿತ ಮಾಡಿದ್ದರೇ ದೇಶದ ಸ್ಥಿತಿ ಯಾಕೆ ಹೀಗಿರುತ್ತಿತ್ತು?. ಭರವಸೆಗಳ ಈಡೇರಿಕೆಗೆ ನಮ್ಮ ಆದಾಯ ಏನು ಸಂಪನ್ಮೂಲ ಏನು?. ಎಲ್ಲವನ್ನೂ ಚಿಂತನೆ ಮಾಡಬೇಕಲ್ವೆ? ಎಂದು ತಿಳಿಸಿದರು. ಇದನ್ನೂ ಓದಿ: ಯಡಿಯೂರಪ್ಪ ಬಗ್ಗೆ ನನ್ನನ್ನು ಇನ್ಮೇಲೆ ಏನು ಕೇಳಬೇಡಿ: ಯತ್ನಾಳ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k