ಯಡಿಯೂರಪ್ಪ ಬಗ್ಗೆ ನನ್ನನ್ನು ಇನ್ಮೇಲೆ ಏನು ಕೇಳಬೇಡಿ: ಯತ್ನಾಳ್
ಹೈಕಮಾಂಡ್ ಸೂಚನೆ ಹಿನ್ನೆಲೆ ಸೈಲೆಂಟ್ ಆದ ರೆಬಲ್ ಶಾಸಕ

ವಿಜಯಪುರ: ಯಡಿಯೂರಪ್ಪ ಬಗ್ಗೆ ನನ್ನನ್ನು ಇನ್ಮೇಲೆ ಏನು ಕೇಳಬೇಡಿ. ಯಡಿಯೂರಪ್ಪ ಬಗ್ಗೆ ನಾನು ಏನು ಪ್ರತಿಕ್ರಿಯೆ ನೀಡಲ್ಲ ಎಂದು ವಿಜಯಪುರ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಹಿರಿಯರು, ಅವರ ಬಗ್ಗೆ ಮಾತನಾಡಬೇಡಿ. ಜೊತೆಗೆ ಚಿಲ್ಲರೆ ನಾಯಕರ ಬಗ್ಗೆ ಕೂಡ ಪ್ರತಿಕ್ರಿಯಿಸಬೇಡಿ ಎಂದು ಹೈಕಮಾಂಡ್ ನನಗೆ ಹೇಳಿದೆ. ಈ ಹಿನ್ನೆಲೆಯಲ್ಲಿ ನಾನು ನಮ್ಮ ಪಕ್ಷದ ಯಾವ ನಾಯಕರ ಬಗ್ಗೆಯೂ ಮಾತನಾಡಲ್ಲ. ಇನ್ಮೇಲೆ ಏನಿದ್ರೂ ವಿರೋಧಿ ಪಕ್ಷದವರ ವಿರುದ್ಧ ಮಾತ್ರ ಮಾತನಾಡುತ್ತೇನೆ ಎಂದು ತಿಳಿಸಿದರು.
ನನಗೆ ಯಾವುದೇ ನೋಟಿಸ್ ಬಂದಿಲ್ಲ. ನಿಮ್ಮ ಬಳಿ ಇದ್ರೆ ತೋರಿಸಿ. ಬಿಜೆಪಿ ರಾಜ್ಯಾಧ್ಯಕ್ಷರು ನೋಟಿಸ್ ನೀಡಿದ್ದೇನೆ ಎಂದು ಹೇಳಿಲ್ಲ ಎಂದ ಅವರು, ಹೈಕಮಾಂಡ್ ಮುಂದೆ ನಿಮಗೆ ಉತ್ತಮ ಭವಿಷ್ಯ ಇದೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಸಿಹಿ ಸುದ್ದಿ ಬರಲಿದೆ ಎಂದ ನುಡಿದರು.
ವಿಜಯಪುರದಲ್ಲಿ (Vijayapura) ನಡೆದ ಬಿಜೆಪಿ (BJP) ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಕಾರ್ಯಕ್ರಮಕ್ಕೆ ನಾನು ಬರಲು ಆಗಲ್ಲ ಎಂದು ನಡ್ಡಾ ಅವರಿಗೆ ಹೇಳಿದ್ದೆ. ಅವರ ಪರವಾನಿಗೆ ಪಡಿದೆ ನಾನು ಗೈರಾಗಿದ್ದೇನೆ ಎಂದರು.
ಡಿಕೆಶಿ (DK Shivakumar) ಬಳಿ ಇನ್ನಷ್ಟು ಸಿಡಿ ಇವೆ. ಅದನ್ನ ತನಿಖೆಗೆ ಸಿಬಿಐಗೆ ಒಪ್ಪಿಸಬೇಕು ಎಂಬ ರಮೇಶ್ ಜಾರಕಿಹೊಳಿ (Ramesh Jarakiholi) ಹೇಳಿಕೆಗೆ ಬೆಂಬಲ ನೀಡಿದ ಅವರು, ರಾಜಕಾರಣಿ, ಅಧಿಕಾರಿಗಳನ್ನು ಬ್ಲಾಕ್ಮೇಲ್ ಮಾಡುವ ಗುಂಪು ಬೆಂಗಳೂರಿನಲ್ಲಿದೆ. ಬೆಂಗಳೂರಿನಲ್ಲಿ ಒಂದು ಗುಂಪು ಕೆಲಸ ಮಾಡುತ್ತಿದೆ. ಬ್ಲಾಕ್ ಮೇಲ್ ಮಾಡುವುದೇ ಅವರ ದಂಧೆ, ಯಾವುದೇ ಪಕ್ಷದವರಿದ್ದರು ಬಣ್ಣ ಬಯಲಾಗುತ್ತದೆ. ಸಿಡಿ ಕೇಸ್ ಸಿಬಿಐಗೆ ಕೊಡಿ, ಬಣ್ಣ ಬಯಲಾಗುತ್ತೆ. ಜಾರಕಿಹೊಳಿ ಹೇಳಿದಂತೆ ಸಿಬಿಐ ತನಿಖೆ ನಡೆಯಲಿ. ಇದ್ರಲ್ಲಿ ಇನ್ನಷ್ಟು ರಾಜಕಾರಣಿಗಳ ಬಣ್ಣ ಬಯಲಾಗುತ್ತದೆ ಎಂದು ಒತ್ತಾಯಿಸಿದರು.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k