ಚಾಮರಾಜನಗರ: ರಾಜ್ಯ ಕಾಂಗ್ರೆಸ್ನಲ್ಲಿ (Congress) ಎಲ್ಲವೂ ಸರಿಯಿಲ್ಲ ಎಂಬುದು ಪದೇ ಪದೇ ಅನಾವರಣಗೊಳ್ಳುತ್ತಿದೆ. ಇತ್ತೀಚಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರನ್ನು ಸಿದ್ದರಾಮಯ್ಯ (Siddaramaiah) ಕಾಯಿಸುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದ್ದು ಇದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ.
ಗುರುವಾರ ಚಾಮರಾಜನಗರ (Chamarajanagara) ಸಮಾವೇಶದಲ್ಲಿ ಸಿದ್ದರಾಮಯ್ಯಗಾಗಿ ಡಿಕೆಶಿ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ (Randeep Surjewala) ಒಂದೂವರೆ ಗಂಟೆ ವೇದಿಕೆಯಲ್ಲೇ ಕಾದು ಕುಳಿತಿದ್ದರು. ಇದನ್ನೂ ಓದಿ: ಕಾಗಿನೆಲೆ ಈಶ್ವರಾನಂದ ಸ್ವಾಮೀಜಿ ಮೇಲೆ ಸಿಡಿಮಿಡಿಗೊಂಡ ಸಿಎಂ
ಡಿಕೆಶಿ ಮಾತಾಡುವಾಗ ಸ್ಥಳೀಯ ನಾಯಕರು ಸಿದ್ದರಾಮಯ್ಯ ಅವರನ್ನು ಸನ್ಮಾನಿಸುವ ಕೆಲಸದಲ್ಲಿ ತೊಡಗಿದ್ದರು. ಇದಕ್ಕೆ ಸಿಟ್ಟಾದ ಡಿಕೆಶಿ, ಒಂದು ಶಿಸ್ತು ಬೇಡವೇ? ನಿಮ್ಮ ಹತ್ತಿರ ಮಾತ್ರ ಹಾರ ಇದ್ಯಾ? ಸಭೆಯಲ್ಲಿ ಕುಳಿತಿರುವ ಬಡವರ ಹತ್ತಿರ ಇಲ್ಲವೇ? ಎಲ್ಲಾ ಮುಗಿದ ಮೇಲೆ ಹಾರ ಹಾಕಿ ಹೋಗಿ ಎಂದು ಗದರಿದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k