ಗುಂಡಿನ ದಾಳಿಯಲ್ಲಿ ಕರ್ನಾಟಕ ಮೂಲದ ಬಿಎಸ್‍ಎಫ್ ಯೋಧ ವೀರಮರಣ

Public TV
1 Min Read
CKB YODH DEATH AV 4

ಚಿಕ್ಕಬಳ್ಳಾಪುರ: ಕರ್ನಾಟಕ ಮೂಲದ ಬಿಎಸ್‍ಎಫ್ ಯೋಧರೊಬ್ಬರು ಗುಂಡಿನ ದಾಳಿಯಲ್ಲಿ ವೀರಮರಣವನ್ನಪ್ಪಿದ್ದಾರೆ.

ಯಣ್ಣಂಗೂರು ಗ್ರಾಮದ ಗಂಗಾಧರ್ ಹುತಾತ್ಮರಾದ ಯೋಧ. ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಯಣ್ಣಂಗೂರು ಗ್ರಾಮದವರಾಗಿದ್ದು, ಪಶ್ಚಿಮ ಬಂಗಾಳದ ಡಾರ್ಜಲಿಂಗ್ ಗಡಿಭಾಗದಲ್ಲಿ ವೀರಮರಣ ಹೊಂದಿದ್ದಾರೆ.

ಮುನಿಯಪ್ಪ ಲಕ್ಷಮ್ಮ ದಂಪತಿಯ ಹಿರಿಯ ಪುತ್ರರಾದ ಗಂಗಾಧರ್ ವೈದ್ಯೆ ಪತ್ನಿ ಶಿಲ್ಪಾ ಹಾಗೂ 10 ವರ್ಷದ ಪುತ್ರನನ್ನು ಆಗಲಿದ್ದಾರೆ. ಗಂಗಾಧರ್ ಅವರು ಕಳೆದ 20 ವರ್ಷಗಳಿಂದ ಬಿಎಸ್‍ಎಫ್ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದರು.

CKB YODH DEATH AV 3

ಬುಧವಾರ ಸಂಜೆ ಗುಂಡಿನ ದಾಳಿಯಲ್ಲಿ ಮೃತಪಟ್ಟಿರುವುದಾಗಿ ಬಿಎಸ್‍ಎಫ್ ಅಧಿಕಾರಿಗಳಿಂದ ಕುಟುಂಬಸ್ಥರಿಗೆ ಮಾಹಿತಿ ಬಂದಿದೆ. ಇಂದು ಸಂಜೆ ಸ್ವಗ್ರಾಮಕ್ಕೆ ಪಾರ್ಥೀವ ಶರೀರ ಬರುವ ಸಾಧ್ಯತೆ ಇದೆ ಎಂದು ಮೃತ ಗಂಗಾಧರ್ ಅವರ ಸಹೋದರ ಕುಮಾರ್ ಮಾಹಿತಿ ನೀಡಿದ್ದಾರೆ.

CKB YODH DEATH AV 6

CKB YODH DEATH AV 5

CKB YODH DEATH AV 2

CKB YODH DEATH AV 1

Share This Article
Leave a Comment

Leave a Reply

Your email address will not be published. Required fields are marked *