ಚೆನ್ನೈ: ಪ್ರೀತಿ ನಿರಾಕರಿಸಿದಕ್ಕೆ 21 ವರ್ಷದ ಯುವತಿಗೆ ಆಕೆಯ ಪ್ರಿಯಕರನೇ ಚಾಕು ಇರಿದಿರುವ ಘಟನೆ ಕೊಯಮತ್ತೂರಿನ ಕಾರು ಶೋರೂವೊಂದರಲ್ಲಿ ನಡೆದಿದೆ.
ಸಂತ್ರಸ್ತೆಯನ್ನು ದಕ್ಷಿಣ ಕೊಯಮತ್ತೂರಿನ ಕುನಿಯಮುತ್ತೂರಿನ ನಿವಾಸಿ 21 ವರ್ಷದ ಶುಭಶ್ರೀ ಎಂದು ಗುರುತಿಸಲಾಗಿದೆ. ಸೇಲಂನಲ್ಲಿದ್ದ ಆರೋಪಿ ದಿನೇಶ್ ಇನ್ಸ್ಟಾಗ್ರಾಮ್ ಮೂಲಕ ಯುವತಿಗೆ ಪರಿಚಯವಾಗಿದ್ದಾನೆ. ಈತ ಫೋಟೋಗ್ರಾಫರ್ ಆಗಿ ಕಾರ್ಯನಿರ್ವಹಿಸುತ್ತಿದ್ದನು. ಯುವತಿ ಹಾಗೂ ಆರೋಪಿ ಎರಡು ವರ್ಷಗಳ ಹಿಂದೆ ಸ್ನೇಹಿತರಾಗಿದ್ದರು. ಇದನ್ನೂ ಓದಿ: ಯುರೋಪಿನ ಅತಿ ದೊಡ್ಡ ಗ್ಯಾಸ್ ಪೈಪ್ಲೈನ್ ಸ್ಥಗಿತ – ಕೆನಡಾದ ಮೊರೆ ಹೋದ ಜರ್ಮನಿ
ಯುವತಿಯನ್ನು ಭೇಟಿಯಾಗಲು ದಿನೇಶ್ ಆಗಾಗ ಕೊಯಮತ್ತೂರ್ಗೆ ಹೋಗುತ್ತಿದ್ದನು. ಆರೋಪಿ ಯುವತಿಯನ್ನು ಪ್ರೀತಿಸುತ್ತಿದ್ದು, ತನ್ನ ಪ್ರೀತಿಯನ್ನು ಒಪಪಿಕೊಳ್ಳುವಂತೆ ಯುವತಿಗೆ ಒತ್ತಾಯಿಸಿದ್ದಾನೆ. ಆದರೆ ಪ್ರೀತಿಯನ್ನು ನಿರಾಕರಿಸಿ ಯುವತಿ ಆರೋಪಿಯ ಮೊಬೈಲ್ ನಂಬರ್ ಅನ್ನು ಎರಡು ತಿಂಗಳ ಹಿಂದೆ ಬ್ಲಾಕ್ ಮಾಡಿದ್ದಳು. ಇದನ್ನೂ ಓದಿ: ಹೀರೋಗಳು ಶರ್ಟ್ ತೆಗೆದು ‘ಆಬ್ಸ್’ ತೋರಿಸ್ತಾರೆ, ನಮಗೂ ಫ್ರೀಡಂ ಬೇಕು ಎಂದ ನಟಿ ಪೂಜಾ ಭಾಲೇಕರ್
ಆದರೆ ಸೋಮವಾರ ಬೆಳಗ್ಗೆ ಸುಬಶ್ರೀ ಕೆಲಸ ಮಾಡುತ್ತಿದ್ದ ಕಾರ್ ಶೋರೂಮ್ಗೆ ನುಗ್ಗಿದ ದಿನೇಶ್ ಆಕೆಯೊಂದಿಗೆ ಜಗಳವಾಡಿದ್ದಾನೆ. ನಂತರ ಏಕಾಏಕಿ ಜೇಬಿನಿಂದ ಚಾಕುವನ್ನು ತೆಗೆದು ಯುವತಿಯ ಕುತ್ತಿಗೆ, ಭುಜ ಮತ್ತು ಮುಖಕ್ಕೆ ಇರಿದಿದ್ದಾನೆ. ನಂತರ ಅಲ್ಲಿಂದ ಪರಾರಿಯಗಲು ಯತ್ನಿಸಿದಾಗ ಶೋರೂಂನಲ್ಲಿದ್ದ ಇತರ ಸಿಬ್ಬಂದಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದೀಗ ಆರೋಪಿ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ಶೋರೂಂನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಆಕೆಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.