ಧಾರವಾಡ: ರ್ಯಾಂಕಿಂಗ್ ಬದಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಅಗತ್ಯತೆ ಇದೆ ಎಂದು ಭಾರತ ರತ್ನ ಪುರಸ್ಕೃತ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಹಮ್ಮಿಕೊಂಡಿದ್ದ ಉನ್ನತ ಶಿಕ್ಷಣ ಅಕಾಡೆಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಜಗತ್ತಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಫಿನ್ಲ್ಯಾಂಡ್ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ದಕ್ಷಿಣ ಕೊರಿಯಾ ಇದೆ. ಅಮೆರಿಕ ಕೂಡ 25ನೇ ಸ್ಥಾನದಲ್ಲಿದೆ. ಅಲ್ಲಿಯೂ ಕೂಡ ಗುಣಮಟ್ಟದ ಶಿಕ್ಷಣದ ಕೊರತೆ ಇದೆ. ಆದರೆ ನಮ್ಮ ದುರಾದೃಷ್ಟವೆಂದರೆ ಭಾರತ ಈ ವಿಚಾರದಲ್ಲಿ ನೂರನೇ ಸ್ಥಾನವನ್ನು ದಾಟಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂದಿನ ದಿನಗಳಲ್ಲಿ ಮಕ್ಕಳು ರ್ಯಾಂಕ್ ತರುವ ಸ್ಪರ್ಧೆಯಲ್ಲಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳು ನಾವು ಮೊದಲು ಬಿಎಸ್ಸಿ ಮಾಡಬೇಕು, ನಂತರ ಐಐಟಿ ಮಾಡಬೇಕು, ಇದರ ಜೊತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮಾಡುವ ಯತ್ನದಲ್ಲಿದ್ದಾರೆ. ಇದರಿಂದಾಗಿ ದೇಶದಲ್ಲಿ ಕೆಲವರು ಆತ್ಮಹತ್ಯೆ ಮಾಡಿಕೊಂಡರೆಮ ಇನ್ನು ಕೆಲವರು ಹುಚ್ಚರಾಗುತ್ತಿದ್ದಾರೆ ಎಂದು ಬೇಸರಿಸಿದರು.
ಎಲ್ಲರೂ ಗಮನದಲ್ಲಿಟ್ಟಿಕೊಳ್ಳಿ, ನಮಗೆ ರ್ಯಾಂಕ್ ಬದಲು ಗುಣಮಟ್ಟದ ಶಿಕ್ಷಣದ ಅಗತ್ಯತೆ ಇದೆ. ಈ ಬಗ್ಗೆ ಎಲ್ಲಾ ಕಡೆ ನಾನು ಹೇಳುತ್ತಲೇ ಇರುತ್ತೇನೆ. ನಮ್ಮ ದೇಶದಲ್ಲಿ 50 ಕೋಟಿ ಮಕ್ಕಳು ಗ್ರಾಮೀಣ ಭಾಗಗಳಲ್ಲಿ ಇದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಮಕ್ಕಳು ಬೇರೆ ಕಡೆ ಎಲ್ಲೂ ಇಲ್ಲ. ಅವರಿಗೆ ನಾವು ಸಹಾಯ ಮಾಡಬೇಕು. ಅವರಲ್ಲಿ ಪ್ಯಾರಡೆ, ನ್ಯೂಟನ್ರಂತಹ ವ್ಯಕ್ತಿಗಳು ಅಡಗಿದ್ದಾರೆ. ಅದನ್ನು ನಾವು ಹೊರಗೆ ತೆಗೆಯಬೇಕು. ಆಗ ಮಾತ್ರ ನಾವು ಒಳ್ಳೆಯ ಶಿಕ್ಷಕರಾಗಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಬಡ ಕೂಲಿ ಮಾಡುವ ಮಕ್ಕಳನ್ನು, ನಾವು ಉನ್ನತ ಮಟ್ಟದ ಶಿಕ್ಷಣ ನೀಡಿ ಅವರನ್ನು ಉನ್ನತ ಮಟ್ಟಕ್ಕೆ ತರುವುದೇ ಗುರಿಯಾಗಿರಬೇಕು. ದೇಶದ ಪ್ರಧಾನಿ ಸೇರಿದಂತೆ ರಾಜಕೀಯ ಪ್ರತಿನಿಧಿಗಳು, ಯಾವೊಬ್ಬ ಅಧಿಕಾರಿಯೂ ಮಾಡದೇ ಇರುವಂತಹ ಕೆಲಸ ಶಿಕ್ಷಕರದ್ದು. ಅದನ್ನು ಎಲ್ಲರೂ ಸರಿಯಾಗಿ ನಿರ್ವಹಿಸಬೇಕು ಎಂದು ಶಿಕ್ಷಕರಲ್ಲಿ ಮನವಿ ಮಾಡಿಕೊಂಡರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews