Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: PublicTV Explainer: ಚೀನಾ-ಭಾರತ ಗಡಿ ಸಂಘರ್ಷ – ಚೀನಾ ಯಾಂಗ್‌ಟ್ಸೆ ಪ್ರದೇಶವನ್ನೇ ಟಾರ್ಗೆಟ್‌ ಮಾಡೋದೇಕೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Explainer | PublicTV Explainer: ಚೀನಾ-ಭಾರತ ಗಡಿ ಸಂಘರ್ಷ – ಚೀನಾ ಯಾಂಗ್‌ಟ್ಸೆ ಪ್ರದೇಶವನ್ನೇ ಟಾರ್ಗೆಟ್‌ ಮಾಡೋದೇಕೆ?

Explainer

PublicTV Explainer: ಚೀನಾ-ಭಾರತ ಗಡಿ ಸಂಘರ್ಷ – ಚೀನಾ ಯಾಂಗ್‌ಟ್ಸೆ ಪ್ರದೇಶವನ್ನೇ ಟಾರ್ಗೆಟ್‌ ಮಾಡೋದೇಕೆ?

Public TV
Last updated: February 18, 2023 5:03 pm
Public TV
Share
5 Min Read
tawang clash
SHARE

ಜೂನ್ 2020 ರಲ್ಲಿ ಲಡಾಖ್‌ನ (Ladakh) ಗಾಲ್ವಾನ್ (Galwan) ಕಣಿವೆಯಲ್ಲಿ ಭಾರತ-ಚೀನಾ ಸೇನಾಪಡೆಗಳ (India China Border Clash) ನಡುವಿನ ಮಾರಣಾಂತಿಕ ಎನ್‌ಕೌಂಟರ್‌ ಘಟನೆ ಸಂಭವಿಸಿ ಎರಡೂವರೆ ವರ್ಷಗಳ ನಂತರ ತವಾಂಗ್‌ನಲ್ಲಿ ಮತ್ತೆ ಘರ್ಷಣೆ ನಡೆದಿದೆ. ಗಡಿ ವಿಚಾರವಾಗಿ ಚೀನಾ ಮತ್ತು ಭಾರತದ (India) ನಡುವಿನ ತಿಕ್ಕಾಟ ಹೊಸದೇನು ಅಲ್ಲ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ದಿಟ್ಟ ನಿಲುವನ್ನು ತೆಗೆದುಕೊಂಡು ಚೀನಾಗೆ (China) ಸ್ಪಷ್ಟ ಸಂದೇಶ ರವಾನಿಸುವ ಅಗತ್ಯವಿದೆ. ಭಾರತ ಮತ್ತು ಚೀನಾ ನಡುವೆ ಹಿಂದಿನಿಂದಲೂ ಇರುವ ಈ ಗಡಿ ವಿವಾದದ ಬಗ್ಗೆ ಒಂದಷ್ಟು ಒಳನೋಟ ಇಲ್ಲಿದೆ.

ತವಾಂಗ್: ಭಾರತ-ಚೀನಾ ಘರ್ಷಣೆಯ ತಾಣ
ಅರುಣಾಚಲ ಪ್ರದೇಶದ (Arunachal Pradesh) ತವಾಂಗ್ (Tawang) ಸೆಕ್ಟರ್‌ನ ಮೇಲ್ಭಾಗದ ಯಾಂಗ್‌ಟ್ಸೆ (Yantse) ಎಂಬ ಪ್ರದೇಶದಲ್ಲಿ ಎರಡು ಕಡೆಯ ಸೈನಿಕರು ಘರ್ಷಣೆ ನಡೆಸಿದರು. ಗಡಿ ಬಿಕ್ಕಟ್ಟಿನಲ್ಲಿ ಭಾರತ ಮತ್ತು ಚೀನಾ ನಡುವಿನ ಗಂಭೀರ ವಿವಾದದ ಬಿಂದುಗಳಲ್ಲಿ ಇದು ಕೂಡ ಒಂದಾಗಿದೆ. ತವಾಂಗ್ ಆರನೇ ದಲೈ ಲಾಮಾ ಅವರ ಜನ್ಮಸ್ಥಳ. ಟಿಬೆಟಿಯನ್ ಬೌದ್ಧರ ಪ್ರಮುಖ ಯಾತ್ರಾ ಕೇಂದ್ರ. 14 ನೇ ದಲೈ ಲಾಮಾ ಅವರು 1959 ರಲ್ಲಿ ಟಿಬೆಟ್‌ನಿಂದ ಭಾರತಕ್ಕೆ ಬಂದ ನಂತರ ತವಾಂಗ್‌ನಲ್ಲಿ ಆಶ್ರಯ ಪಡೆದರು. ಮುಂದುವರಿಯುವ ಮೊದಲು ಅಲ್ಲಿ ಮಠದಲ್ಲಿ ಕೆಲ ದಿನಗಳನ್ನು ಕಳೆದಿದ್ದರು. ಇದನ್ನೂ ಓದಿ: ಚೀನಾ ತಲುಪಬಲ್ಲ ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ-5 ಕ್ಷಿಪಣಿ ಪ್ರಯೋಗ ಯಶಸ್ವಿ

India vs China

ತವಾಂಗ್‌ನಲ್ಲಿ ಮೂರು ಪ್ರದೇಶಗಳಿವೆ. ಲುಂಗ್ರೂ ಹುಲ್ಲುಗಾವಲಿನ ಉತ್ತರಕ್ಕೆ ತವಾಂಗ್ ಪಟ್ಟಣದಿಂದ ಸುಮಾರು 25 ಕಿಮೀ ದೂರದಲ್ಲಿರುವ ಯಾಂಗ್‌ಟ್ಸೆ ಪ್ರದೇಶಗಳಲ್ಲಿ ಒಂದಾಗಿದೆ. ಇದು ಭಾರತೀಯ ಸೇನೆ ಮತ್ತು PLA ನಡುವಿನ ಸಂಘರ್ಷದ ತಾಣವಾಗಿದೆ. ವಿಶೇಷವಾಗಿ ಎತ್ತರದ ಪ್ರದೇಶವು ಭಾರತದ ಭಾಗದಲ್ಲಿರುವುದರಿಂದ ಇದು ಚೀನಾದ ಕಮಾಂಡಿಂಗ್ ಚಟುವಟಿಕೆ ವೀಕ್ಷಣೆಗೆ ಸಹಾಯವಾಗಿದೆ.

ಕಳೆದ ಅಕ್ಟೋಬರ್‌ನಲ್ಲಿ ಪಿಎಲ್‌ಎ ಮತ್ತು ಭಾರತೀಯ ಸೇನೆಯ ಗಸ್ತು ತಂಡಗಳು ಯಾಂಗ್‌ಟ್ಸೆಯಲ್ಲಿ ಮುಖಾಮುಖಿಯಾಗಿದ್ದು ಗಲಾಟೆಗೆ ಕಾರಣವಾಯಿತು. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ. 2016ರಲ್ಲೂ ಇದೇ ರೀತಿಯ ಘಟನೆ ವರದಿಯಾಗಿತ್ತು.

ಎಲ್‌ಎಸಿ ಎಂದರೇನು?
ಭಾರತೀಯ ನಿಯಂತ್ರಿತ ಪ್ರದೇಶವನ್ನು ಚೀನೀ ನಿಯಂತ್ರಿತ ಪ್ರದೇಶದಿಂದ ಪ್ರತ್ಯೇಕಿಸುವುದೇ ಎಲ್‌ಎಸಿ. ಇದನ್ನು ಮೂರು ವಲಯಗಳಾಗಿ ವಿಂಗಡಿಸಲಾಗಿದೆ. ಪೂರ್ವ ವಲಯ (ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ), ಮಧ್ಯ ವಲಯ (ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ) ಮತ್ತು ಪಶ್ಚಿಮ ವಲಯ (ಲಡಾಖ್). ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ಚೀನಾ ವಿರುದ್ಧ ಮಾತನಾಡಲು ಅವಕಾಶವೇ ಇಲ್ಲ – ಖರ್ಗೆ ಕಿಡಿ

arunachal LAC

ಭಾರತ ಮತ್ತು ಚೀನಾ LACಯನ್ನು ಪರಸ್ಪರ ಒಪ್ಪುತ್ತಿಲ್ಲ. ಭಾರತವು LACಯನ್ನು 3,488 ಕಿಮೀ ಉದ್ದ ಎಂದು ಪರಿಗಣಿಸುತ್ತದೆ. ಆದರೆ ಚೀನಿಯರು ಇದನ್ನು ಕೇವಲ 2,000 ಕಿಮೀ ಎಂದು ಪರಿಗಣಿಸುತ್ತಾರೆ. ಮಧ್ಯಮ ವಲಯದಲ್ಲೂ ಭಿನ್ನಾಭಿಪ್ರಾಯವಿದೆ.

1962ರ ಚೀನಾ ದಾಳಿ
1962ರ ಅಕ್ಟೋಬರ್‌ 20ರಂದು ಚೀನಾ ಎರಡು ಕಡೆ ಅನಿರೀಕ್ಷಿತ ದಾಳಿ ನಡೆಸಿತು. ಭಾರತ ಯುದ್ಧಕ್ಕೆ ಸಿದ್ಧವಾಗಿರಲಿಲ್ಲ. ಹೀಗಾಗಿ 20,000 ಭಾರತೀಯ ಯೋಧರು 80,000 ಚೀನೀಯರ ಮುಂದೆ ಹತಾಶರಾಗಬೇಕಾಯಿತು. ಒಂದು ತಿಂಗಳ ಕಾಲ ನಡೆದ ಯುದ್ಧ ನವಂಬರ್‌ 21ರಂದು ಕೊನೆಗೊಂಡಿತು.

1993, 1996ರ ಒಪ್ಪಂದ
ಭಾರತ ಮತ್ತು ಚೀನಾ ನಡುವೆ ಲಡಾಕ್‌ನಿಂದ ಅರುಣಾಚಲ ಪ್ರದೇಶದ ತನಕ 4,000 ಕಿಲೋಮೀಟರ್‌ ಉದ್ದದ ಗಡಿಯಲ್ಲಿ ವಿಶ್ವಾಸ ವೃದ್ಧಿಸಲು ಈ ಹಿಂದೆ ಮೂರು ಸಲ ಒಪ್ಪಂದ ಏರ್ಪಟ್ಟಿತ್ತು. 1993, 1996 ಮತ್ತು 2013ರ ಉಭಯ ದೇಶಗಳ ನಡುವೆ ನಡೆದ ಒಪ್ಪಂದಗಳಲ್ಲಿ ಅನೇಕ ವಿಚಾರಗಳನ್ನು ನಮೂದಿಸಿವೆ. ಆದರೆ ಚೀನಾ ಮಾತ್ರ ತನ್ನ ಎಲ್ಲೆ ಮೀರಿ ಒಪ್ಪಂದವನ್ನು ಉಲ್ಲಂಘಿಸುತ್ತಲೇ ಇದೆ. ಇದನ್ನೂ ಓದಿ: ಭಾರತ, ಚೀನಾ ಸಂಘರ್ಷ – ಅರುಣಾಚಲ ಪ್ರದೇಶದ ಮೇಲೆ ಡ್ರ್ಯಾಗನ್‌ ಕಣ್ಣು ಹಾಕಿದ್ದು ಯಾಕೆ?

India china 1

ಅರುಣಾಚಲ ಪ್ರದೇಶದ ಬಗ್ಗೆ ಚೀನಾ ಹೇಳೋದೇನು?
ಚೀನಾವು, ಅರುಣಾಚಲ ಪ್ರದೇಶದ ಸುಮಾರು 90,000 ಚದರ ಕಿಮೀನ ಇಡೀ ರಾಜ್ಯವನ್ನು ತನ್ನ ಭೂಪ್ರದೇಶವೆಂದು ಹೇಳಿಕೊಂಡಿದೆ. ಇದು ಚೈನೀಸ್ ಭಾಷೆಯಲ್ಲಿ ಪ್ರದೇಶವನ್ನು “ಝಂಗ್ನಾನ್” ಎಂದು ಕರೆಯುತ್ತದೆ. ಚೀನೀ ನಕ್ಷೆಗಳು ಅರುಣಾಚಲ ಪ್ರದೇಶವನ್ನು ಚೀನಾದ ಭಾಗವೆಂದು ತೋರಿಸುತ್ತವೆ.

ಭಾರತದ ಭೂಪ್ರದೇಶಕ್ಕೆ ಚೀನೀ ಹೆಸರು
ಭಾರತದ ಭೂಪ್ರದೇಶಕ್ಕೆ ಏಕಪಕ್ಷೀಯ ಹಕ್ಕು ಸಾಧಿಸಲು ಚೀನಾ ಪ್ರಯತ್ನಗಳನ್ನು ಮಾಡುತ್ತದೆ. ಈ ಕಾರ್ಯತಂತ್ರದ ಭಾಗವಾಗಿ, ಇದು ಅರುಣಾಚಲ ಪ್ರದೇಶದ ಸ್ಥಳಗಳಿಗೆ ಚೀನೀ ಹೆಸರುಗಳನ್ನು ನೀಡಲು ಪ್ರಯತ್ನಿಸಿದೆ. ಇದು 2017 ರಲ್ಲಿ ಅಂತಹ ಆರು ಹೆಸರುಗಳು ಮತ್ತು 2021 ರಲ್ಲಿ 15 ಹೆಸರುಗಳ ಪಟ್ಟಿಯನ್ನು ಪ್ರಕಟಿಸಿತು. ಆದರೆ ಇದನ್ನು ಭಾರತ ತಳ್ಳಿಹಾಕಿದೆ. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ಪ್ರತಿಪಾದಿಸಿದೆ.

ಚೀನಾ ಪಡೆ ʼಯಾಂಗ್‌ಟ್ಸೆಯನ್ನೇ ಟಾರ್ಗೆಟ್‌ ಮಾಡೋದೇಕೆ?
ಈ ಪ್ರದೇಶವು ಹುಲ್ಲುಗಾವಲು ಪ್ರದೇಶ ಮಾತ್ರವಲ್ಲದೆ, ಚೀನಾದ ಕಡೆಯ ಗಡಿಯಿಂದ ಟಿಬೆಟಿಯನ್ನರು ಪೂಜಿಸುವ ಪವಿತ್ರ ಜಲಪಾತಕ್ಕೆ ಹೊಂದಿಕೊಂಡಿದೆ. ತವಾಂಗ್ ಮೊನಾಸ್ಟರಿಯು ಲಾಸಾದ ಪೊಟಾಲಾ ಅರಮನೆಯ ನಂತರ ಎರಡನೇ ಅತಿದೊಡ್ಡ ಮೊನಾಸ್ಟರಿಯಾಗಿದೆ. 6 ನೇ ದಲೈ ಲಾಮಾ ತವಾಂಗ್‌ ನವರಾಗಿದ್ದರು. ಇದರೊಂದಿಗೆ ತವಾಂಗ್‌ನ ಭೌಗೋಳಿಕ, ಸಾಮಾಜಿಕ-ಜನಾಂಗೀಯ, ಮತ್ತು ಸಾಂಸ್ಕೃತಿಕ ನಿರಂತರತೆ ಸುತ್ತಮುತ್ತಲ ಜನರೊಂದಿಗೆ ಇದೆ. ಈ ಪ್ರದೇಶವು ನೈಸರ್ಗಿಕವಾಗಿ ಅಪರೂಪದ ಕಾಮೋತ್ತೇಜಕವನ್ನು ಬೆಳೆಯಲು ಹೆಸರುವಾಸಿಯಾಗಿದೆ. ಇದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇದೆ. ಸ್ವಾಭಾವಿಕವಾಗಿ, ಚೀನೀಯರು ಇದರ ಲಾಭ ಪಡೆಯಲು ಬಯಸುತ್ತಾರೆ ಎಂಬುದು ನಿವೃತ್ತ ಮೇಜರ್‌ ಜನರಲ್‌ ಸುಧಾಕರ್‌ ಅವರ ಅಭಿಪ್ರಾಯ. ಇದನ್ನೂ ಓದಿ: ಭಾರತ, ಚೀನಾ ಸಂಘರ್ಷಕ್ಕೆ ಕಾರಣ ಏನು? ಅರುಣಾಚಲದ ಗಡಿಯಲ್ಲಿ ನಿಜವಾಗಿ ಏನಾಯ್ತು?

India China

ಪಿಎಲ್‌ಎ ಘರ್ಷಣೆಗೆ ಮತ್ತೊಂದು ಕಾರಣವಿದೆ. ಈ ಪ್ರದೇಶವು ಭಾರತದ ಭಾಗದಲ್ಲಿರುವ ಸೆಲಾ ಪಾಸ್‌ನ ಪ್ರಾಬಲ್ಯ ಸಾಧಿಸಲು ಕಡಿಮೆ ವೈಮಾನಿಕ ದೂರವನ್ನು ಒದಗಿಸುತ್ತದೆ. ಭಾರತದ ಭಾಗದಲ್ಲಿ ಪೂರ್ಣ ವೇಗದಲ್ಲಿ ಮೂಲಸೌಕರ್ಯ ಅಭಿವೃದ್ಧಿ ನಡೆಯುತ್ತಿರುವುದರಿಂದ, ಸೆಲಾ ಪಾಸ್‌ನ ಕೆಳಗಿರುವ ಸುರಂಗವು ಪೂರ್ಣಗೊಳ್ಳುವ ಹಂತದಲ್ಲಿದೆ. ಇದು ಕೂಡ ಚೀನಾ ಕ್ಯಾತೆಗೆ ಪ್ರಮುಖ ಕಾರಣವಾಗಿರಬಹುದು.

ಡಿ.9ರ ನಂತರ ನಡೆದಿದ್ದೇನು?
ಚೀನಾ ಸೈನಿಕರು ಹಿಮಾಚಲ ಪ್ರದೇಶದ ತವಾಂಗ್‌ನಲ್ಲಿ ಡಿ.9 ರಂದು ಭಾರತದ ಗಡಿಯೊಳಕ್ಕೆ ನುಸುಳಲು ಯತ್ನಿಸಿದ್ದು ಕಳವಳ ಮೂಡಿಸುವ ಸಂಗತಿಯಾಗಿದ್ದು, ಎರಡೂ ದೇಶಗಳ ಗಡಿ ಬಿಕ್ಕಟ್ಟಿಗೆ ಮತ್ತಷ್ಟು ಇಂಬುಕೊಟ್ಟಂತಿದೆ. ಸಂಘರ್ಷದ ಬಗ್ಗೆ ಭಾರತದ ಕೇಂದ್ರ ಸರ್ಕಾರ ನೀಡಿದ ಸ್ಪಷ್ಟನೆಗೆ ಪ್ರತಿಪಕ್ಷಗಳು ಅತೃಪ್ತಿ ವ್ಯಕ್ತಪಡಿಸಿವೆ. ಘರ್ಷಣೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚೀನಾಗೆ ಸ್ಪಷ್ಟ ಸಂದೇಶ ರವಾನಿಸುವಲ್ಲಿ ಭಾರತ ಸರ್ಕಾರ ನಿರ್ಲಕ್ಷ್ಯ ಧೋರಣೆ ಹೊಂದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಡಿ.9ರಂದು ಚೀನಾ ಸೈನಿಕರು ಮತ್ತು ಭಾರತದ ಯೋಧರ ನಡುವೆ ಸಂಘರ್ಷ ನಡೆಯಿತು. ಅದಾದ ಎರಡು ಮೂರು ದಿನದಲ್ಲಿ ವಿಷಯ ಬಹಿರಂಗಗೊಂಡಿತು. ತಕ್ಷಣ ಎಚ್ಚೆತ್ತ ಸರ್ಕಾರ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಘರ್ಷಣೆ ಬಗ್ಗೆ ಸ್ಪಷ್ಟನೆ ನೀಡಿತು. ಇದರ ಬೆನ್ನಲ್ಲೇ ಚೀನಾ ಸರ್ಕಾರವು ಸಹ, ಭಾರತದೊಂದಿಗಿನ ಗಡಿ ಪರಿಸ್ಥಿತಿ ಸ್ಥಿರವಾಗಿದೆ ಎಂದು ಪ್ರತಿಕ್ರಿಯಿಸಿತ್ತು. ಇದನ್ನೂ ಓದಿ: ಗಡಿಯಲ್ಲಿ ಮತ್ತೆ ಬಡಿದಾಟ – ಚೀನಿ ಯೋಧರಿಗೆ ತಿರುಗೇಟು ಕೊಟ್ಟ ಭಾರತ

ಪೀಪಲ್ಸ್‌ ಲಿಬರೇಷನ್ಸ್‌ ಆರ್ಮಿಯ ವೆಸ್ಟರ್ನ್ ಥಿಯೇಟರ್ ಕಮಾಂಡ್‌ನ ವಕ್ತಾರ ಕರ್ನಲ್ ಲಾಂಗ್ ಶಾವೊಹುವಾ, “ನಮ್ಮ ಪಡೆಗಳ ಪ್ರತಿಕ್ರಿಯೆಯು ವೃತ್ತಿಪರ, ದೃಢ ಮತ್ತು ಪ್ರಮಾಣಿತವಾಗಿದೆ. ಇದು ಪರಿಸ್ಥಿತಿಯನ್ನು ಸ್ಥಿರಗೊಳಿಸಲು ಸಹಾಯ ಮಾಡಿದೆ. ಕಟ್ಟುನಿಟ್ಟಾಗಿ ನಿಯಂತ್ರಿಸಲು ಭಾರತದ ಕಡೆಯವರನ್ನೂ ಕೇಳುತ್ತೇವೆ. ಮುಂಚೂಣಿ ಪಡೆಗಳನ್ನು ನಿಗ್ರಹಿಸಿ ಮತ್ತು ಶಾಂತಿ ಕಾಪಾಡಲು ಚೀನಾದೊಂದಿಗೆ ಸಹಕರಿಸಿ” ಎಂದು ಹೇಳಿದ್ದಾರೆ.

Live Tv
[brid partner=56869869 player=32851 video=960834 autoplay=true]

TAGGED:India China Border ClashsoldiersTawangyangtseತವಾಂಗ್‌ಭಾರತ-ಚೀನಾ ಸಂಘರ್ಷಯಾಂಗ್‌ಟ್ಸೆಸೈನಿಕರು
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

Wild elephant attacks three ETF staff in Hassan Beluru
Districts

ಮೂವರು ಇಟಿಎಫ್‌ ಸಿಬ್ಬಂದಿ ಮೇಲೆ ಕಾಡಾನೆ ದಾಳಿ – ಗಾರ್ಡ್‌ ಸ್ಥಿತಿ ಗಂಭೀರ

Public TV
By Public TV
24 minutes ago
Donald Trump Angry
Latest

ಭಾರತ, ಚೀನಾ ನರಕದ ಕೂಪಗಳು| ಲ್ಯಾಪ್‌ಟಾಪ್ ಹೊಂದಿರುವ ದರೋಡೆಕೋರರು: ಟ್ರಂಪ್‌ ಕೆಂಡಾಮಂಡಲ

Public TV
By Public TV
25 minutes ago
Arvind Kejriwal 4
Court

ಕೋರ್ಟ್‌ ವಿಚಾರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್‌ – ಅರವಿಂದ್ ಕೇಜ್ರಿವಾಲ್‌ಗೆ ನೋಟಿಸ್

Public TV
By Public TV
26 minutes ago
PETROL
Latest

ಪೆಟ್ರೋಲ್, ಡೀಸೆಲ್ ದರ ಏರಿಕೆಯ ಚಿಂತನೆ ಇಲ್ಲ – ವದಂತಿಗಳಿಗೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ

Public TV
By Public TV
45 minutes ago
bad touch for young women 2 arrested in bengaluru
Bengaluru City

ಬೈಕ್‌ಲ್ಲಿ ಬಂದು ಯುವತಿಯರಿಗೆ ಬ್ಯಾಡ್ ಟಚ್ – ಬೀದಿ ಕಾಮಣ್ಣರು ಅಂದರ್‌

Public TV
By Public TV
56 minutes ago
thaad
Latest

ಅಮೆರಿಕ ಬಳಿಯಿದ್ದ 50% ಕ್ಷಿಪಣಿಗಳು ಖಾಲಿ – ಯುದ್ಧ ಮುಂದುವರಿದರೆ ʻದೊಡಣ್ಣʼನಿಗೆ ಆಪತ್ತು!

Public TV
By Public TV
56 minutes ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?