ಮಡಿಕೇರಿ: ಪತಿಯ ಕುಮ್ಮಕ್ಕಿನಿಂದಲೇ ಪತ್ನಿ ಮೇಲೆ ಸೋದರ ಸಂಬಂಧಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ರಾತ್ರಿ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ನಡೆದಿದೆ.
ವಿಜಯರಾಜ್ ಪತ್ನಿ ಪುಷ್ಪವಲ್ಲಿ ಹಲ್ಲೆಗೊಳಗಾದ ಮಹಿಳೆ. ಹಲ್ಲೆಯಿಂದ ಪುಷ್ಪವತಿ ತಲೆಗೆ ಗಂಭೀರ ಗಾಯಗಳಾಗಿದೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಪುಷ್ಪವಲ್ಲಿಯನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
- Advertisement 2
ಅನಾರೋಗ್ಯದ ನೆಪವೊಡ್ಡಿ ವಿಜಯರಾಜ್ ಎರಡನೇ ಮದುವೆಯಾಗಿದ್ದನು. ಎರಡನೇ ಮದುವೆ ಬಳಿಕ ವಿಜಯರಾಜ್ ದಿನನಿತ್ಯ ಪುಷ್ಪವಲ್ಲಿಗೆ ಕಿರುಕುಳ ನೀಡುತ್ತಿದ್ದನು. ಶುಕ್ರವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿಜಯರಾಜ್ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಪತಿ ವಿಜಯರಾಜ್ ಮತ್ತು ಸಂಬಂಧಿ ವಿಶ್ವನಾಥ್ ವಿರುದ್ಧ ಕುಶಾಲನಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement 3
- Advertisement 4
ದೂರಿನಲ್ಲಿ ಏನಿದೆ?
ನನ್ನ ಮಗಳು ಪುಷ್ಪವಲ್ಲಿಯನ್ನು ವಿಜಯರಾಜ್ ಎಂಬವರ ಜೊತೆ ಮದುವೆ ಮಾಡಿಸಿ ಸುಮಾರು 37 ವರ್ಷವಾಗಿದೆ. ಈ ದಂಪತಿಗೆ ಮೂವರು ಮಕ್ಕಳಿದ್ದು, ಒಬ್ಬಳಿಗೆ ಮದುವೆ ಆಗಿದೆ, ಇಬ್ಬರು ಗಂಡು ಮಕ್ಕಳು ನಿರುದ್ಯೋಗಿಗಳಾಗಿರುತ್ತಾರೆ. ನನ್ನ ಮಗಳು ಪುಷ್ಪವಲ್ಲಿ ಸುಮಾರು 15 ವರ್ಷದಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಎರಡು-ಮೂರು ಬಾರಿ ಚಿಕಿತ್ಸೆ ಕೊಡಿಸಿದರು ಗುಣಮುಖಳಾಗುತ್ತಿಲ್ಲ. ಇವಳನ್ನು ಯಾರೂ ನೋಡಿಕೊಳ್ಳದ ಕಾರಣ ನಾನೇ ನೋಡಿಕೊಳ್ಳುತ್ತಿದ್ದೇನೆ. ಅಲ್ಲದೆ ಎಲ್ಲ ಖರ್ಚು ವೆಚ್ಚವನ್ನು ನಾನೇ ಭರಿಸುತ್ತಿದ್ದೇನೆ. 29ರಂದು ನಾನು ನನ್ನ ಮಗಳಿಗೆ ಖರ್ಚಿಗೆ ಹಣ ಕೊಡಲು ಬೆಳಗ್ಗೆ ಸುಮಾರು 7 ಗಂಟೆಗೆ ಹೋದೆ. ಈ ವೇಳೆ ಪಕ್ಕದ ಮನೆಯವನಾದ ವಿಶ್ವನಾಥ್ ನನ್ನ ಮಗಳಿಗೆ ರಸ್ತೆಯಲ್ಲಿ ಅಡ್ಡಗಟ್ಟಿ ಪೈಪ್ನಿಂದ ಹೊಡೆಯುತ್ತಿದ್ದನು. ನಾನು ಬಿಡಿಸಲು ಹೋದಾಗ ಆತ ನನ್ನನ್ನು ತಳ್ಳಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪುಷ್ಪವಲ್ಲಿ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.