ಕಲಬುರಗಿ: ಅಡುಗೆಯಲ್ಲಿ ಎಣ್ಣೆ ಜಾಸ್ತಿ ಬಳಸಿದ ಕಾರಣಕ್ಕೆ ಪತ್ನಿ ಮೇಲೆ ಕುದಿಯುವ ಎಣ್ಣೆ ಎರಚಿದ ಹಿನ್ನೆಲೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕಲಬುರಗಿಯ ನೆಲೋಗಿ ಗ್ರಾಮದ ಪ್ರಿಯಾಂಕ ಚಿಕಿತ್ಸೆ ಫಲಕಾರಿಯಾಗದೇ ಕಲಬುರಗಿಯ ಬಸವೇಶ್ವರ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ.
ನವೆಂಬರ್ 26 ರಂದು ಅಡುಗೆ ಮಾಡುವಾಗ ಒಗ್ಗರಣೆಗೆ ಎಣ್ಣೆ ಜಾಸ್ತಿ ಬಳಸಿದ್ದರು ಎಂಬ ಕ್ಷುಲಕ ಕಾರಣಕ್ಕೆ ಆಕೆಯ ಪತಿ ಭೀಮಾಶಂಕರ್ ಪತ್ನಿಯ ಮುಖಕ್ಕೆ ಎಣ್ಣೆ ಎರಚಿ ನಂತರ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ್ದ. ಘಟನೆಯಲ್ಲಿ ಪ್ರಿಯಾಂಕ ಅವರ ದೇಹ ಶೇಕಡಾ 70ರಷ್ಟು ಸುಟ್ಟ ಪರಿಣಾಮ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಪ್ರಿಯಾಂಕ ಸಾವನಪ್ಪಿದ್ದಾರೆ. ಈ ಸುದ್ದಿ ತಿಳಿದ ಕೂಡಲೇ ಪ್ರಿಯಾಂಕ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಆರೋಪಿ ಭೀಮಾಶಂಕರ್ ನನ್ನು ನೆಲೋಗಿ ಪೊಲೀಸರು ಘಟನೆ ನಡೆದ ದಿನವೇ ವಶಕ್ಕೆ ಪಡೆದಿದ್ದಾರೆ.