ಕೊಪ್ಪಳ: ಪತಿ ಮನೆಯವರಿಂದ ವರದಕ್ಷಿಣೆಗಾಗಿ ಮೂರು ತಿಂಗಳ ಗರ್ಭಿಣಿಗೆ ಕಿರುಕುಳ ನೀಡಿ ರಾತ್ರೋ ರಾತ್ರಿ ಹೊರಹಾಕಿದ ಘಟನೆ ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ನಡೆದಿದೆ.
ಸುಷ್ಮಾ (19) ಎಂಬ ಯುವತಿಗೆ ಪತಿ ಬಸವರಾಜ ತಳಕಲ್ (27) ಹಾಗೂ ಕುಟುಂಬ ಸ್ಥರಿಂದ ವರದಕ್ಷಿಣೆ ಕಿರುಕುಳ ನೀಡಿ ಮನೆಯಿಂದ ಹೊರಹಾಕಿದ್ದಾರೆ.
ಪ್ರೀತ್ಸೆ ಅಂತ ದುಂಬಾಲು ಬಿದ್ದು ಬಸವರಾಜ ಸುಷ್ಮಾಳನ್ನ ಮದುವೆಯಾಗಿದ್ದನು. ಪ್ರೀತಿಸಿ ಮದುವೆಯಾಗಿ ನಾಲ್ಕೇ ತಿಂಗಳಿಗೆ ಪತ್ನಿಯನ್ನು ವರದಕ್ಷಿಣೆಗಾಗಿ ಪತಿ ಮನೆಯಿಂದ ಹೊರಹಾಕಿದ್ದು, ರಾತ್ರಿಯಿಡೀ ಅನ್ನ, ನೀರು ಕೊಡದೆ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಸದ್ಯ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಆದ್ರೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಸಹೋದರ ಗುಂಡಪ್ಪ ಕರಡಿ ರಾಜಕೀಯ ಪ್ರಭಾವದಿಂದ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಅನ್ನೋ ಆರೋಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ನೊಂದ ಯುವತಿ ಇದೀಗ ಎಸ್ಪಿ ಮೊರೆಹೋಗಿದ್ದಾರೆ.