ಪಣಜಿ: ಪತಿಯನ್ನು ಕೊಲೆ ಮಾಡಿ ಬಳಿಕ ಸ್ನೇಹಿತರೊಂದಿಗೆ ಸೇರಿ ದೇಹವನ್ನು ಕತ್ತರಿಸಿ ಕಾಡಿನಲ್ಲಿ ಎಸೆದಿದ್ದ ಪತ್ನಿಯನ್ನು ಗೋವಾ ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.
ಬಸುರಾಜ್ ಬಾಸ್ಸೂ (38) ಕೊಲೆಯಾದ ವ್ಯಕ್ತಿ. ವೃತ್ತಿಯಲ್ಲಿ ಕೂಲಿ ಕಾರ್ಮಿಕರಾಗಿದ್ದು, ಕಲ್ಪನಾ ಬಾಸ್ಸೂ (31) ಕೊಲೆ ಮಾಡಿ ಪತ್ನಿ.
- Advertisement 2
ಏನಿದು ಪ್ರಕರಣ: ದಕ್ಷಿಣ ಗೋವಾ ಜಿಲ್ಲೆಯ ಕೊರ್ಕೊರೆಮ್ ನಿವಾಸಿಯಾಗಿದ್ದ ಬಸುರಾಜ್ ರಂಬವರನ್ನ ಕಳೆದ ಮೂರು ತಿಂಗಳ ಹಿಂದೆ ಕೊಲೆ ಮಾಡಲಾಗಿತ್ತು. ಅಲ್ಲದೇ ಅವರ ಮೃತ ದೇಹವನನ್ನು ತುಂಡು ಮಾಡಿ ನಗರದ ಹೊರ ವಲಯದ ಕಾಡಿನಲ್ಲಿ ಎಸೆಯಲಾಗಿತ್ತು. ಮೃತ ದೇಹದ ಭಾಗಗಳು ಪತ್ತೆಯಾದ ಬಳಿಕ ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಬಸುರಾಜ್ ಪತ್ನಿಯನ್ನು ಅನುಮಾನದ ಮೇಲೆ ವಿಚಾರಣೆ ನಡೆಸಿದ್ದರು. ಆದ್ರೆ ಮೊದಲು ಕಲ್ಪನಾ ಈ ಕುರಿತು ನಿರಾಕರಿಸಿ ಪೊಲೀಸರ ದಿಕ್ಕು ತಪ್ಪಿಸಿದ್ದಳು.
- Advertisement 3
- Advertisement 4
ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೇ ವ್ಯಕ್ತಿಗಳನ್ನು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೊಲೆಯಲ್ಲಿ ಭಾಗಿಯಾದ ಆರೋಪಿಯ ಪತ್ನಿಯೊಬ್ಬಳು ಕಲ್ಪನಾ ಮೇಲೆಯೇ ಶಂಕೆ ವ್ಯಕ್ತಡಿಸಿದ್ದರು. ಈ ಮಾಹಿತಿ ಬೆನ್ನತ್ತಿದ್ದ ಪೊಲೀಸರು ಕೊಲೆ ಮಾಡಿದ್ದ ಪ್ರಮುಖ ಆರೋಪಿಗಳಾದ ಕಲ್ಪನಾ, ಆಕೆಯ ಪತಿಯ ಗೆಳೆಯರಾದ ಸುರೇಶ್ ಕುಮಾರ್, ಅಬ್ದುಲ್ ಕರೀಮ್ ಶೇಖ್ ಮತ್ತು ಪಂಕಜ್ ಪವಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಇನ್ ಸ್ಪೆಕ್ಟರ್ ರವೀಂದ್ರ ದೇಸಾಯಿ ತಿಳಿಸಿದ್ದಾರೆ.
ಕಾರಣವೇನು? ಸದ್ಯ ಕೊಲೆಯಾದ ವ್ಯಕ್ತಿಗೆ ಇಬ್ಬರು ಮಕ್ಕಳಿದ್ದು, ಪತಿ ಬಸುರಾಜ್ ನಿತ್ಯ ಅನಗತ್ಯ ಕಾರಣಕ್ಕೆ ನನ್ನ ಜೊತೆಗೆ ಜಗಳವಾಡುತ್ತಿದ್ದ. ಹೀಗಾಗಿ ಮನನೊಂದ ನಾನು ಕೊಲೆ ಮಾಡಿದ್ದಾಗಿ ಕಲ್ಪನಾ ತಿಳಿಸಿದ್ದಾಳೆ.
ಮೊದಲು ಪತಿಯನ್ನು ಕೊಲೆ ಮಾಡಿದ್ದ ಕಲ್ಪನಾ ಬಳಿಕ ತನ್ನ ಮೂವರು ಸ್ನೇಹಿತರಿಗೆ ಕರೆ ಮಾಡಿ ಕರೆಸಿಕೊಂಡಿದ್ದಾಳೆ. ಈ ವೇಳೆ ನಾಲ್ವರು ಸೇರಿ ಬಸುರಾಜ್ ದೇಹವನ್ನು 3 ತುಂಡು ಮಾಡಿ, ಗೊಣಿ ಚೀಲದಲ್ಲಿ ಹಾಕಿ ಕಾಡಿನಲ್ಲಿ ಬಿಸಾಡಿದ್ದರು. ಸದ್ಯ ಮೃತ ದೇಹ ಎಸೆದ ಸ್ಥಳಕ್ಕೆ ಪೊಲೀಸರು ಆರೋಪಿಗಳನ್ನು ಕರೆ ತಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಇನ್ನು ಹೆಚ್ಚಿನ ಜನರು ಈ ಕೃತ್ಯಕ್ಕೆ ಸಾಥ್ ನೀಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.