ಸಚಿವರ ವಿರುದ್ಧ ಗೋ ಬ್ಯಾಕ್ ಅಭಿಯಾನ- ಬಿಜೆಪಿಗರಿಂದಲೇ ಅಶೋಕ್‍ಗೆ ಭಾರೀ ವಿರೋಧ

Public TV
2 Min Read
ASHOK 1

ಮಂಡ್ಯ: ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya) ದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ (Vidhanasabha Election) ಯಲ್ಲಿ ಶತಾಯಗತಾಯ ನಾಲ್ಕೈದು ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಬೇಕೆಂದು ಮಾಸ್ಟರ್ ಪ್ಲಾನ್ ಮಾಡುತ್ತಾ ಇದೆ. ಹೀಗಾಗಿ ಸಚಿವ ಗೋಪಾಲಯ್ಯ (Gopalaiah) ರಿಗೆ ಕೊಕ್ ನೀಡಿ ಆರ್.ಅಶೋಕ್‍ರ ಹೆಗಲಿಗೆ ಬಿಜೆಪಿ ನಾಯಕರು ಉಸ್ತುವಾರಿ ಜವಾಬ್ದಾರಿ ನೀಡಿದ್ದಾರೆ. ಇದೀಗ ಬಿಜೆಪಿ ನಾಯಕರ ಈ ನಿರ್ಧಾರ ಮಂಡ್ಯ ಬಿಜೆಪಿಯಲ್ಲೊ ತೀವ್ರ ಅಸಮಾಧಾನ ಭುಗಿಲೆದ್ದಿದೆ. ಮಂಡ್ಯದಲ್ಲಿ ಗೋ ಬ್ಯಾಕ್ ಅಶೋಕ್ (Go Back Ashok) ಎಂದು ಬಿಜೆಪಿ ಕಾರ್ಯಕರ್ತರು ಗೊಡೆಬರಹ ಅಂಟಿಸುತ್ತಿದ್ದಾರೆ.

ASHOK 3

ಕಳೆದ ಕೆಆರ್ ಪೇಟೆ ಉಪಚುನಾವಣೆಯಲ್ಲಿ ನಾರಾಯಣಗೌಡ (Narayana Gowda) ಗೆಲುವಿನ ಮೂಲಕ ಬಿಜೆಪಿ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಅಕೌಂಟ್ ಓಪನ್ ಮಾಡಿದೆ. ಇದೀಗ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕನಿಷ್ಠ ನಾಲ್ಕೈದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಬಿಜೆಪಿ ನಾಯಕರು ಸ್ಟಾಟರ್ಜಿ ಮಾಡ್ತಾ ಇದ್ದಾರೆ. ಆ ಸ್ಟಾಟರ್ಜಿಯ ಒಂದು ಭಾಗ ಎಂಬಂತೆ ಸಚಿವ ಗೋಪಾಲಯ್ಯ ಅವರಿಗೆ ಕೊಕ್ ನೀಡಿ ಆರ್.ಅಶೋಕ್ (R Ashok) ಅವರಿಗೆ ಮಂಡ್ಯ ಉಸ್ತುವಾರಿಯನ್ನು ನೀಡಲಾಗಿದೆ. ಅಶೋಕ್ ಅವರಿಗೆ ಉಸ್ತುವಾರಿ ಜವಾಬ್ದಾರಿ ನೀಡಿರುವ ಕಾರಣ ಮಂಡ್ಯ ಬಿಜೆಪಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಅಶೋಕ್ ಅವರು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ, ಅವರಿಂದ ಮಂಡ್ಯದಲ್ಲಿ ಬಿಜೆಪಿ ಕಟ್ಟಲು ಸಾಧ್ಯವಿಲ್ಲ. ಹೀಗಾಗಿ ಫೇಸ್‍ಬುಕ್ (Facebook) ಹಾಗೂ ರಸ್ತೆಯ ಗೋಡೆಯ ಮೇಲೆ ಅಶೋಕ್ ಗೋ ಬ್ಯಾಕ್, ಬಾಯ್ಕಟ್ ಎಂಬ ಪೋಸ್ಟರ್ ಗಳನ್ನು ಅಂಟಿಸಲಾಗಿದೆ. ಇದನ್ನೂ ಓದಿ: ಭವಾನಿ ಕಡೇ ಆಟ.. ಕಡೇ ಓಟ – ಹೆಚ್.ಡಿ.ರೇವಣ್ಣ ಅವತ್ತು ಐಡಿಯಾ ಮಾಡಿದ್ಯಾಕೆ?

ASHOK

ಇಂದು ಅಶೋಕ್ ಅವರು ಮಂಡ್ಯದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದ್ರು. ಈ ವೇಳೆಯೂ ಸಹ ಬಿಜೆಪಿಯ ಪ್ರಮುಖ ನಾಯಕರು ಕಾಣಿಕೊಳ್ಳದೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಶೋಕ್ ಅವರನ್ನು ಕೇಳಿದ್ರೆ ನಮ್ಮ ಪಕ್ಷದಲ್ಲಿ ಅಸಮಾಧಾನ ಇಲ್ಲ. ನಾನು ಯಾರೊಂದಿಗೂ ಸಹ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ, ನನ್ನ ವಿರುದ್ಧ ಸುಮ್ಮನೆ ಅಪಪ್ರಚಾರ ಮಾಡಲಾಗುತ್ತಿದೆ. ನಾನು ಬಂದಿರುವುದಕ್ಕೆ ಕೆಲವರಿಗೆ ಭಯ ಬಂದಿದೆ ಹೀಗಾಗಿ ಬೇರೆ ಪಕ್ಷದವರು ಎತ್ತಿ ಕಟ್ಟುತ್ತಿದ್ದಾರೆ ಎನ್ನುವ ಮೂಲಕ ತಮ್ಮ ಮೇಲಿನ ಅಸಮಾಧಾನವನ್ನು ತಳ್ಳಿ ಹಾಕಿದ್ದಾರೆ.

MANDYA

ಒಟ್ಟಾರೆ ಬಿಜೆಪಿ ನಾಯಕರು ಮಂಡ್ಯದಲ್ಲಿ ಬೇರೆ ಏನೋ ಲೆಕ್ಕಾಚಾರದಲ್ಲಿ ಸ್ಟಾಟರ್ಜಿ ಮಾಡಲು ಮುಂದಾದ್ರೆ, ಇದೀಗ ಆ ಸ್ಟಾಟರ್ಜಿಯನ್ನು ಮಂಡ್ಯ ಬಿಜೆಪಿ ಕಾರ್ಯಕರ್ತರು ಉಲ್ಟಾ ಮಾಡಿದ್ದಾರೆ. ಈಗ ಬಿಜೆಪಿ ನಾಯಕರು ಈ ಅಸಮಾಧಾನದ ಬೇಗುದಿಯನ್ನು ಹೇಗೆ ತಣ್ಣಗೆ ಮಾಡ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಜೆಡಿಎಸ್‍ಗೆ ಸೊಸೆ ಸಂಕಟ – ಮಾವನ ಕೈಯಲ್ಲಿ ಸೊಸೆ ಭವಿಷ್ಯ.!?

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *