ಹಾವೇರಿ: ಮಾನಸಿಕ ಅಸ್ವಸ್ಥನೊಬ್ಬ ಕೈಯಲ್ಲಿ ಬಾಟಲಿ ಹಿಡಿದು ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಲು ಯತ್ನ ನಡೆಸಿ ಹುಚ್ಚಾಟ ನಡೆಸಿದ ಘಟನೆ ಹಾವೇರಿ ನಗರದಲ್ಲಿ ನಡೆದಿದೆ.
ಬಸವೇಶ್ವರ ನಗರ ಹಾಗೂ ವಿದ್ಯಾನಗರದ ಜನರು ಮಾನಸಿಕ ಅಸ್ವಸ್ಥನ ಹುಚ್ಚಾಟದಿಂದ ಆತಂಕಗೊಂಡಿದ್ದಾರೆ. ಪ್ರಭು ಹಿರೇಮಠ ಎಂಬ ಮಾನಸಿಕ ಅಸ್ವಸ್ಥ ಹುಚ್ಚಾಟ ನಡೆಸಿದ್ದಾನೆ. ಕೆಲವು ವರ್ಷಗಳಿಂದ ನಗರದಲ್ಲಿ ಓಡಾಡಿಕೊಂಡಿರುವ ಮಾನಸಿಕ ಅಸ್ವಸ್ಥ, ಇಂದು ಬಾಟಲಿ ಹಿಡಿದು ಹುಚ್ಚಾಟ ಪ್ರದರ್ಶನ ಮಾಡಿದ್ದಾನೆ.
ಅದೃಷ್ವಶಾತ್ ಯಾರ ಮೇಲೆಯೂ ಹಲ್ಲೆ ಆಗಿಲ್ಲ. ಮಾನಸಿಕ ಅಸ್ವಸ್ಥನಾದ್ದರಿಂದ ಪ್ರಭು, ಮೆಡಿಕಲ್ ಶಾಪ್ ಸೇರಿದಂತೆ ಕೆಲವೆಡೆ ನಿಂತವರ ಮೇಲೆ ಬಾಟಲ್ನಿಂದ ಹಲ್ಲೆಗೆ ಮುಂದಾಗಿದ್ದಾನೆ. ಇದರಿಂದ ಬಸವೇಶ್ವರ ನಗರ ಮತ್ತು ವಿದ್ಯಾನಗರದ ಜನರು ಗಾಬರಿಗೊಂಡಿದ್ದಾರೆ. ಆತನನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ರಸ್ತೆಗಳನ್ನು ಕಂಗನಾ ಕೆನ್ನೆಗಿಂತ ಸುಗಮವಾಗಿಸುತ್ತೇನೆ: ಇರ್ಫಾನ್ ಅನ್ಸಾರಿ