ಕಲಬುರಗಿ: ಮೇವು ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಲಾರಿಗೆ ಬೆಂಕಿ ತಗುಲಿದ್ದು, ಪಕ್ಕದಲ್ಲಿದ್ದ ಕಾರು ಸಹ ಸುಟ್ಟು ಭಸ್ಮವಾದ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ ಬಳಿ ನಡೆದಿದೆ.
ವಿದ್ಯುತ್ ತಂತಿಯ ಸ್ಪರ್ಶದಿಂದ ಲಾರಿಯಲ್ಲಿನ ಮೇವಿಗೆ ಬೆಂಕಿ ತಗುಲಿದ್ದು, ನಂತರ ಲಾರಿ ಸ್ವಲ್ಪ ದೂರ ಸಂಚರಿಸಿದಾಗ ಅದರಲ್ಲಿನ ಮೇವಿನ ಗಟ್ಟಿಗಳು ಇಂಡಿಕಾ ಕಾರಿನ ಮೇಲೆ ಬಿದ್ದಿವೆ. ಪರಿಣಾಮ ಕಾರು ಸಹ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಕಾರಿನಲ್ಲಿದವರು ಚಹಾ ಕುಡಿಯಲು ಹೋಗಿದ್ದರಿಂದ ದೊಡ್ಡ ಅವಘಡವೊಂದು ತಪ್ಪಿದೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.