ಬೆಂಗಳೂರು: ಬಾಸ್ ಅಂತ ಸ್ಟೇಟಸ್ ಹಾಕೋ ವಿಚಾರಕ್ಕೆ ಮನೆಗೆ ನುಗ್ಗಿ ಲಾಂಗ್ ಬೀಸೋ ಮಟ್ಟಕ್ಕೆ ಹೋಗಿತ್ತು. ಹೊಡೆಯಲು ಬಂದವರ ನಸೀಬ್ ಕೈ ಕೊಟ್ಟು ಲಾಂಗ್ ಕಿತ್ತುಕೊಂಡು ಮಚ್ಚಿನೇಟು ಕೊಟ್ಟ ಭಯಾನಕ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯ ನಾಗರಹೊಳೆನಗರದಲ್ಲಿ ನಡೆದಿದೆ.
ಸ್ವಾತಂತ್ರ್ಯೋತ್ಸವದ ದಿನದಂದು ನಡೆದ ಈ ಘಟನೆ ನೋಡಿ ಇಡೀ ಏರಿಯಾ ಜನರೇ ಬೆಚ್ಚಿ ಬಿದ್ದಿದ್ದಾರೆ. ಘಟನೆಗೆ ಕಾರಣರಾದವರು ಅಕ್ಷಯ್ ಹಾಗೂ ಎದುರಾಳಿ ಗ್ಯಾಂಗ್, ಅಕ್ಷಯ್ ಫೋಟೋಗೆ ಬಾಸ್ ಅಂತ ಟ್ಯಾಗ್ ಮಾಡಿ ಪಡ್ಡೆ ಹುಡುಗರು ಸ್ಟೇಟಸ್ ಹಾಕೊಂಡಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಗಣಿ, ಸುಮಂತ ನಾವ್ ಬಾಸ್ ನಮ್ಮ ಫೋಟೋ ಹಾಕೋಳ್ರೊ ಅಂತ ವಾರ್ನ್ ಮಾಡಿದ್ರು. ಅಕ್ಷಯ್ ಕ್ರಿಕೆಟ್ ಗ್ರೌಂಡ್ನಲ್ಲಿ ಸಿಕ್ಕಾಗ ಬೈಕ್ ಕೀನಲ್ಲೆ ಹಲ್ಲೆ ನಡೆಸಿದ್ರಂತೆ. ಇದನ್ನೂ ಓದಿ: 11 ರಾಜ್ಯಗಳಲ್ಲಿ ಮಹಿಳೆಯರೇ ಹೆಚ್ಚು ಸೆಕ್ಸ್ ಪಾಲುದಾರರನ್ನು ಹೊಂದಿದ್ದಾರೆ: ವರದಿ
ಇಷ್ಟಕ್ಕೆ ಸುಮ್ಮನಾಗದ ಗಣಿ, ಸುಮಂತ್ ಇನ್ನಿಬ್ಬರು ಹುಡುಗರನ್ನ ಹಾಕೊಂಡು ಎರಡು ಲಾಂಗ್ ಹಿಡಿದು ಅಕ್ಷಯ್ ಮುಗಿಸಲು ಆತನ ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿ ಅಕ್ಷಯ್ ತಂದೆ ಆನಂದ್ ರಾಮ್ ಮತ್ತು ತಾಯಿ ಇರೋವಾಗ್ಲೆ ಮಚ್ಚು ಬೀಸೋಕೆ ಮುಂದಾಗಿದ್ರು. ಈ ಸಮಯದಲ್ಲಿ ಅಕ್ಷಯ್ ತಂದೆ ಆನಂದ್ ರಾಮ್, ಗಣಿ, ಸುಮಂತ್ ತಂದಿದ್ದ ಕೋಣ ಕಡಿಯುವ ಮಚ್ಚುಗಳಿಗಿಂತ ದೊಡ್ಡದಾಗಿದ್ದ ಲಾಂಗ್ ಕಿತ್ತುಕೊಂಡು ವಾಪಸ್ ಮಚ್ಚು ಬೀಸಿದ್ದಾರೆ.
ಯಾವಾಗ ಮಚ್ಚು ಕಿತ್ಕೊಂಡ್ರೊ ಗಣಿ ಸೇರಿದಂತೆ ಉಳಿದ ಇಬ್ಬರು ಎಸ್ಕೇಪ್ ಆಗಿದ್ದಾರೆ. ಸುಮಂತ್ ಸಿಕ್ಕಿಬಿದ್ದಾಗ ಅಕ್ಷಯ್ ಹಾಗೂ ಅವನಪ್ಪ ಮಚ್ಚಿನ ಹಿಂಬದಿಯಿಂದ ಎರಡೇಟು ಕೊಟ್ಟಿದ್ದಾರೆ. ಘಟನೆಯಲ್ಲಿ ಸುಮಂತ್ಗೆ ಗಂಭೀರಗಾಯವಾಗಿದ್ದು, ಆಸ್ಪತ್ರೆ ಸೇರಿದ್ದಾನೆ. ಸದ್ಯ ಎರಡೂ ಗುಂಪುಗಳ ಮೇಲೆ ಕೊಲೆ ಯತ್ನ ಕೇಸ್ ದಾಖಲಾಸಿರೋ ಬ್ಯಾಡರಹಳ್ಳಿ ಪೊಲೀಸರು ಘಟನೆ ನಡೆದ 24 ಗಂಟೆಯಲ್ಲಿ ಎಲ್ಲಾ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.