Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: Explainer| ಅಪರೂಪದ ಭೂ ಖನಿಜ ರಫ್ತಿಗೆ ಚೀನಾ ನಿಷೇಧ: ಭಾರತದ ಮೇಲೆ ಪರಿಣಾಮ ಏನು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Automobile | Explainer| ಅಪರೂಪದ ಭೂ ಖನಿಜ ರಫ್ತಿಗೆ ಚೀನಾ ನಿಷೇಧ: ಭಾರತದ ಮೇಲೆ ಪರಿಣಾಮ ಏನು?

Automobile

Explainer| ಅಪರೂಪದ ಭೂ ಖನಿಜ ರಫ್ತಿಗೆ ಚೀನಾ ನಿಷೇಧ: ಭಾರತದ ಮೇಲೆ ಪರಿಣಾಮ ಏನು?

Public TV
Last updated: December 1, 2025 12:56 pm
Public TV
Share
4 Min Read
Explainer Chinas rare earth export curbs hit the auto industry india worldwide Electric Vehicle
SHARE

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಚೀನಾ (China) ಈಗ ಭಾರತ, ಅಮೆರಿಕದ ಸೇರಿದಂತೆ ವಿವಿಧ ದೇಶಗಳಿಗೆ ಅಪರೂಪದ ಭೂಮಿಯ ಮ್ಯಾಗ್ನೆಟ್‌ಗಳ ರಫ್ತಿಗೆ ನಿರ್ಬಂಧ ಹೇರಿದೆ. ನಿರ್ಬಂಧದದಿಂದ ಭಾರತ (India) ಸೇರಿದಂತೆ ವಿಶ್ವದ ಎಲೆಕ್ಟ್ರಿಕ್‌ ವಾಹನ (Electric Vehicle) ಉದ್ಯಮದ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಚೀನಾ ಈ ನಿರ್ಧಾರ ಕೈಗೊಂಡಿದ್ದು ಯಾಕೆ? ಭಾರತದ ಮೇಲೆ ಏನು ಪರಿಣಾಮ ಬೀರಲಿದೆ ಇತ್ಯಾದಿ ವಿಚಾರಗಳನ್ನು ಇಲ್ಲಿ ವಿವರಿಸಲಾಗಿದೆ.

ಚೀನಾ ನಿರ್ಬಂಧ ಹೇರಿದ್ದು ಯಾಕೆ?
ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಡೊನಾಲ್ಡ್‌ ಟ್ರಂಪ್‌ (Donald Trump) ವಿಶ್ವದ ಮೇಲೆ ತೆರಿಗೆ ಸಮರ ಆರಂಭಿಸಿದ್ದರು. ತೆರಿಗೆ ಸಮರ ಆರಂಭಿಸಿದ ಬೆನ್ನಲ್ಲೇ ಹಲವು ರಾಷ್ಟ್ರಗಳು ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲೆ ತೆರಿಗೆ ಕಡಿಮೆ ಮಾಡಲು ಮಾತುಕತೆ ಆರಂಭಿಸಿದ್ದವು. ಆದರೆ ಪ್ರತಿಷ್ಠೆಗೆ ಬಿದ್ದ ಚೀನಾ ಅಮೆರಿಕದ ವಸ್ತುಗಳ ಮೇಲೆ ಮತ್ತಷ್ಟು ಸುಂಕ ವಿಧಿಸಿತು. ಇದಕ್ಕೆ ಪ್ರತಿಯಾಗಿ ಅಮೆರಿಕವೂ ಸುಂಕ ವಿಧಿಸಿತು. ಇದರಿಂದಾಗಿ ಚೀನಾ ಆರ್ಥಿಕತೆಯ ಮೇಲೆ ಪೆಟ್ಟು ಬಿತ್ತು. ಷೇರು ಮಾರುಕಟ್ಟೆ ಪತನ ಹೊಂದಿತು. ವಿದೇಶಿ ಹೂಡಿಕೆಗಳು ಹಿಂದಕ್ಕೆ ಸರಿದವು. ಈ ಬೆನ್ನಲ್ಲೇ ಈಗ ವಿದೇಶಗಳಿಗೆ ಅಪರೂಪದ ಭೂ ಖನಿಜ (Rare Earth Minerals) ರಫ್ತು ಮಾಡಲು ನಿರ್ಬಂಧ ಹೇರಿದೆ.

rare earth minerals 2

ಚೀನಾವೇ ಸೂಪರ್‌ ಪವರ್!
ಈ ನಿರ್ಬಂಧದ ಪ್ರಕಾರ ಏಳು ಅಪರೂಪದ ಭೂಮಿಯ ಅಂಶಗಳು (REEs) ಮತ್ತು ಸಂಬಂಧಿತ ಆಯಸ್ಕಾಂತಗಳ ರಫ್ತು ಮಾಡಲು ನಿರ್ಬಂಧ ಹೇರಲಾಗಿದೆ. ಅಂತರರಾಷ್ಟ್ರೀಯ ಇಂಧನ ಸಂಸ್ಥೆ ಮತ್ತು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (2025) ಪ್ರಕಾರ, ಚೀನಾ ವಿಶ್ವದ REEs ನ 60% ಉತ್ಪಾದಿಸುತ್ತದೆ ಮತ್ತು ಜಾಗತಿಕ ಸಂಸ್ಕರಣಾ ಸಾಮರ್ಥ್ಯದ 90% ಅನ್ನು ನಿಯಂತ್ರಿಸುತ್ತದೆ.

ಸಮರಿಯಮ್, ಗ್ಯಾಡೋಲಿನಿಯಮ್, ಟೆರ್ಬಿಯಂ, ಡಿಸ್ಪ್ರೋಸಿಯಮ್, ಲುಟೇಷಿಯಮ್, ಸ್ಕ್ಯಾಂಡಿಯಮ್ ಮತ್ತು ಯಟ್ರಿಯಮ್ ಸೇರಿದಂತೆ ನಿರ್ಣಾಯಕ ವಸ್ತುಗಳು ವಿದ್ಯುತ್ ಮೋಟಾರ್‌ಗಳು, ಬ್ರೇಕಿಂಗ್ ವ್ಯವಸ್ಥೆಗಳು, ಸ್ಮಾರ್ಟ್‌ಫೋನ್‌ಗಳು, ಏರೋಸ್ಪೇಸ್ ಘಟಕಗಳು ಮತ್ತು ಕ್ಷಿಪಣಿ ತಂತ್ರಜ್ಞಾನದಲ್ಲಿ ಅತ್ಯಗತ್ಯ.

ಏನಿದು ಅಪರೂಪದ ಭೂ ಖನಿಜ?
ಆವರ್ತಕ ಕೋಷ್ಟಕದಲ್ಲಿ ಇರುವ 17 ಲೋಹಗಳ ಗುಂಪನ್ನು ಅಪರೂಪದ ಭೂ ಖನಿಜಗಳು ಎಂದು ಕರೆಯಲಾಗುತ್ತದೆ. ಈ ಖನಿಜ ನಿಕ್ಷೇಪಗಳು ವಿಶ್ವದ ಕೆಲ ದೇಶಗಳಲ್ಲಿ ಮಾತ್ರ ಲಭ್ಯವಿದೆ. ಈ ಖನಿಜಗಳು ಕಾಂತೀಯ ಮತ್ತು ವಾಹಕ ಗುಣಲಕ್ಷಣಗಳನ್ನು ಒಳಗೊಂಡಂತೆ ಅವುಗಳ ವಿಶಿಷ್ಟ ಗುಣಲಕ್ಷಣಗಳಿಂದಾಗಿ ಇವು ಮೌಲ್ಯಯುತವಾಗಿವೆ. ಇದನ್ನೂ ಓದಿ: ಟೆಸ್ಲಾಗೆ 2 ಶೋ ರೂಂ ತೆರೆಯುವ ಆಸಕ್ತಿ ಇದೆ, ಆದ್ರೆ ಭಾರತದಲ್ಲೇ ಕಾರು ಉತ್ಪಾದಿಸುವ ಆಸಕ್ತಿ ಇಲ್ಲ: ಹೆಚ್‌ಡಿಕೆ

rare earth minerals 1

ಎಲೆಕ್ಟ್ರಿಕ್‌ ವಾಹನಗಳಿಗೆ ಪೆಟ್ಟು:
ಚೀನಾದ ಅಪರೂಪದ ಭೂಮಿಯ ಮ್ಯಾಗ್ನೆಟ್ ರಫ್ತನ್ನು ನಿಷೇಧಿಸಿದೆ. ಇದರಿಂದಾಗಿ ಭಾರತದ ಆಟೋ ವಲಯಕ್ಕೆ, ವಿಶೇಷವಾಗಿ ವಿದ್ಯುತ್ ವಾಹನ (EV) ಉದ್ಯಮಕ್ಕೆ ಪೆಟ್ಟು ಬೀಳುವ ಸಾಧ್ಯತೆಯಿದೆ. ದೇಶದ ಅಪರೂಪದ ಭೂಮಿಯ ಮ್ಯಾಗ್ನೆಟ್ ಪೂರೈಕೆಯ 80% ಕ್ಕಿಂತ ಹೆಚ್ಚು ಚೀನಾದಿಂದಲೇ ಆಮದಾಗುತ್ತಿದೆ. ಚೀನಾದ ನಿರ್ಧಾರದಿಂದ ಉತ್ಪಾದನೆಗೆ ಸಮಸ್ಯೆಯಾಗಬಹುದು.

ಇವಿ ಮೋಟಾರ್‌ಗಳಿಗೆ ಅಪರೂಪದ ಭೂಮಿಯ ಆಯಸ್ಕಾಂತಗಳು ಅವಶ್ಯಕ. ಪ್ರತಿ ವಾಹನವು ಅಂದಾಜು ಸುಮಾರು 1–2 ಕೆಜಿ ವರೆಗೆ ಈ ವಸ್ತುಗಳನ್ನು ಬಳಸುತ್ತದೆ. ಮೋಟಾರುಗಳನ್ನು  ನಿಯೋಡೈಮಿಯಮ್, ಕಬ್ಬಿಣ ಮತ್ತು ಬೋರಾನ್‌ನಿಂದ ತಯಾರಿಸಲಾಗುತ್ತದೆ. ಇವು EV ಮೋಟಾರ್‌ಗಳಿಗೆ ಅವಶ್ಯಕ. ಏಕೆಂದರೆ ಅವು ಮೋಟಾರ್‌ಗಳನ್ನು ಹಗುರಗೊಳಿಸುತ್ತವೆ ಮತ್ತು ವಾಹನಗಳ ಶಕ್ತಿಯನ್ನು ಹೆಚ್ಚಿಸುತ್ತವೆ. ಇದರಿಂದಾಗಿ ಇವಿಗಳು ವೇಗವಾಗಿ ಚಲಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ಬ್ಯಾಟರಿಗಳು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡುತ್ತದೆ. ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಭಾರತ ಸಜ್ಜು – ಜೂ.10ರಂದು ಭಾರತದ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ ಶುರು

Electric vehicle

ದ್ವಿಚಕ್ರ ವಾಹನ ಕಂಪನಿಗಳಿಗೆ ಸಮಸ್ಯೆ:
ಭಾರತದಲ್ಲಿ ಇವಿ ಕಾರುಗಳಿಗೆ ಹೋಲಿಸಿದರೆ ಇವಿ ದ್ವಿಚಕ್ರ ವಾಹನಗಳು ಈಗ ಭಾರೀ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಚೀನಾದ ನಿರ್ಧಾರದಿಂದ ದಾಸ್ತಾನುಗಳು ಬೇಗ ಖಾಲಿಯಾಗಬಹುದು. ಇವಿ ಬ್ಯಾಟರಿಗೆ ಬೇಕಾದ ಕಚ್ಚಾ ವಸ್ತುಗಳ ಸಮಸ್ಯೆಯಿಂದ ಉತ್ಪಾದನೆ ಕಡಿಮೆಯಾಗಬಹುದು. ಮುಂದೆ ಬುಕ್‌ ಮಾಡಿದರೂ ಸರಿಯಾದ ಸಮಯಕ್ಕೆ ದ್ವಿಚಕ್ರ ವಾಹನಗಳು ಗ್ರಾಹಕರ ಕೈಗೆ ಸೇರದೇ ಇರಬಹುದು. ಮುಖ್ಯವಾಗಿ ಬಜಾಜ್ ಆಟೋ, ಟಾಟಾ ಮೋಟಾರ್ಸ್, ಟಿವಿಎಸ್ ಮೋಟಾರ್ಸ್ ಮತ್ತು ಓಲಾ ಎಲೆಕ್ಟ್ರಿಕ್‌ನಂತಹ ಪ್ರಮುಖ ಆಟೋಮೊಬೈಲ್ ಸಂಸ್ಥೆಗಳ ಮೇಲೆ ಪರಿಣಾಮ ಬೀಳುವ ಸಾಧ್ಯತೆಯಿದೆ.

ಬೇರೆ ಎಲ್ಲಿ ಬಳಕೆಯಾಗುತ್ತೆ?
ಅಪರೂಪದ ಭೂಮಿಯ ಆಯಸ್ಕಾಂತಗಳನ್ನು ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ವಿಂಡ್ ಟರ್ಬೈನ್‌ಗಳು, ವಿಮಾನಗಳು ಮತ್ತು ಕ್ಷಿಪಣಿಗಳಲ್ಲಿಯೂ ಬಳಸಲಾಗುತ್ತದೆ. ಬ್ರೇಕ್‌ಗಳು, ವೈಪರ್‌ಗಳು, ಆಡಿಯೊ ಸಿಸ್ಟಮ್‌ಗಳು, ಪವರ್ ವಿಂಡೋಗಳು,  ಸ್ಪೀಡೋಮೀಟರ್‌ಗಳು, ನೀರಿನ ಪಂಪ್‌ಗಳು ಮತ್ತು ಸ್ವಯಂಚಾಲಿತ ಪ್ರಸರಣಗಳಂತಹ ಅನೇಕ ಕಾರು ಭಾಗಗಳಲ್ಲಿಯೂ ಬಳಸಲಾಗುತ್ತದೆ.

ಕೋವಿಡ್‌ ಸಮಯಯದಲ್ಲಿ ಏನಾಗಿತ್ತು?
ಚೀನಾದಲ್ಲ ಲಾಕ್‌ಡೌನ್‌ ಘೋಷಣೆ ಮಾಡಿದ್ದರಿಂದ ಹಲವಾರು ಫ್ಯಾಕ್ಟರಿಗಳು ಬಂದ್‌ ಆಗಿತ್ತು. ಸಪ್ಲೈ ಚೈನ್‌ ವ್ಯವಸ್ಥೆಯ ಮೇಲೆ ಪೆಟ್ಟು ಬಿದ್ದರಿಂದ ಸರಿಯಾದ ಸಮಯದಲ್ಲಿ ಕಚ್ಚಾ ವಸ್ತುಗಳು ರಫ್ತಾಗದ ಕಾರಣ ಭಾರತದ ಅಟೋಮೊಬೈಲ್‌ ಕಂಪನಿಗಳಿಗೆ ಕಾರು ಉತ್ಪಾದನೆಗೆ ಸಮಸ್ಯೆಯಾಗಿತ್ತು. ಬುಕ್ಕಿಂಗ್‌ ಮಾಡಿದ ಬಳಿಕ 8-9 ತಿಂಗಳು ಕಳೆದರೂ ವಾಹನ ಗ್ರಾಹಕರ ಕೈಗೆ ಸಿಕ್ಕಿರಲಿಲ್ಲ. ಭಾರತದ ಜಿಡಿಪಿಯಲ್ಲಿ ಅಟೋ ಕ್ಷೇತ್ರ ಕೊಡುಗೆ ದೊಡ್ಡದಿದೆ. ಅಟೋ ಕ್ಷೇತ್ರಕ್ಕೆ ಹಿನ್ನಡೆಯಾದರೆ ಅಟೋಮೊಬೈಲ್‌ ಕಂಪನಿಗಳಿಗೆ ಮಾತ್ರವಲ್ಲ ಇತರ ಉದ್ಯಮಗಳ ಮೇಲೂ ಪರಿಣಾಮ ಬೀರುತ್ತದೆ.

TAGGED:Electric VehicleIndiam Chinaಎಲೆಕ್ಟ್ರಿಕ್ ವಾಹನಚೀನಾಭೂ ಖನಿಜ
Share This Article
Facebook Whatsapp Whatsapp Telegram

Cinema news

Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories
Akshay Kumar 1
ನಟ ಅಕ್ಷಯ್ ಕುಮಾರ್ ಅಪ್ರಾಪ್ತ ಪುತ್ರಿಯ ಬೆತ್ತಲೆ ಫೋಟೋಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಅರೆಸ್ಟ್
Bollywood Cinema Crime Latest Top Stories

You Might Also Like

Raichur Man Death Heat Stroke Suspected copy
Districts

ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಸಾವು – ಬಿಸಿಲಿನ ತಾಪಮಾನಕ್ಕೆ ಕುಸಿದು ಬಿದ್ದಿರುವ ಶಂಕೆ

Public TV
By Public TV
38 minutes ago
Massive fire breaks out in plastic godown PG girls in Bengaluru save their lives by jumping over wall
Bengaluru City

ಪ್ಲಾಸ್ಟಿಕ್ ಗೋಡೌನ್‌ನಲ್ಲಿ ಅಗ್ನಿ ಅವಘಡ- ಗೋಡೆ ಹಾರಿ ಜೀವ ಉಳಿಸಿಕೊಂಡ ಬೆಂಗಳೂರಿನ ಪಿಜಿ ಯುವತಿಯರು

Public TV
By Public TV
1 hour ago
Indonesia Train Accident
Crime

ಇಂಡೋನೇಷ್ಯಾದಲ್ಲಿ ಎರಡು ರೈಲುಗಳ ನಡುವೆ ಭೀಕರ ಅಪಘಾತ – 7 ಪ್ರಯಾಣಿಕರು ಸಾವು, 81 ಮಂದಿಗೆ ಗಾಯ

Public TV
By Public TV
2 hours ago
Rs 1 lakh to close a pothole in Bengaluru GBAs expensive pothole business exposed 2
Bengaluru City

ಅಬ್ಬಬ್ಬಾ.. ಬೆಂಗಳೂರಿನಲ್ಲಿ ಒಂದು ಗುಂಡಿ ಮುಚ್ಚಲು 1 ಲಕ್ಷ!- ಬಯಲಾಯ್ತು ಜಿಬಿಎ ‘ದುಬಾರಿ’ ಗುಂಡಿ ಬಿಸಿನೆಸ್!

Public TV
By Public TV
2 hours ago
BESCOM Electricity Bill Name Change
Bengaluru City

ವಿದ್ಯುತ್ ಗ್ರಾಹಕರಿಗೆ ಗುಡ್‌ನ್ಯೂಸ್ – ಮನೆಯಿಂದಲೇ ಕರೆಂಟ್ ಬಿಲ್‌ನಲ್ಲಿ ಹೆಸರು ಬದಲಾವಣೆಗೆ ಹೊಸ ಲಿಂಕ್ ಬಿಡುಗಡೆ

Public TV
By Public TV
3 hours ago
Karnataka Government bus overturns near Challakere Chitradurga 44 passengers rescued 1
Bellary

ಚಳ್ಳಕೆರೆ ಬಳಿ ಬೆಂಗಳೂರಿಗೆ ಬರುತ್ತಿದ್ದ ಸರ್ಕಾರಿ ಬಸ್ ಪಲ್ಟಿ- 44 ಪ್ರಯಾಣಿಕರು ಪಾರು

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?