ಬೆಂಗಳೂರು : ಪ್ರತಿ ಮಗುವಿಗೆ ಮಾತೃ ಭಾಷೆ ಅನ್ನೋದು ಮುಖ್ಯ. ಯಾವ ಭಾಷೆ ಮರೆತರು ಮಾತೃ ಭಾಷೆ ಮಾತ್ರ ಮರೆಯಬಾರದು. ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ನೀಡುವುದು ಅಗತ್ಯ. ಕ್ರಮೇಣ ಉನ್ನತ ಶಿಕ್ಷಣವನ್ನೂ ಮಾತೃಭಾಷೆಯಲ್ಲಿ ಕೊಡುವಂತಾಗಬೇಕು ಅಂತ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಸಲಹೆ ನೀಡಿದರು.
ಇಂಗ್ಲಿಷ್, ಪರ್ಷಿಯನ್ ಸೇರಿದಂತೆ ಎಲ್ಲ ಭಾಷೆಯನ್ನೂ ಕಲಿಯಿರಿ. ಆದರೆ ಕನ್ನಡವನ್ನು ಮರೆಯಬೇಡಿ. ಮಾತೃಭಾಷೆ ನಮ್ಮ ಕಣ್ಣುಗಳು. ಅನ್ಯಭಾಷೆಗಳು ಅದರ ಮೇಲೆ ಹಾಕಿಕೊಳ್ಳುವ ಕನ್ನಡಕದಂತೆ.ಬ್ರಿಟಿಷರು ಭಾರತಕ್ಕೆ ಇಂಗ್ಲಿಷ್ ತಂದರು. ಇಂಗ್ಲಿಷ್ ವಸಹಾತುಕರಣದ ಸಂಕೇತ. ಹಾಗಾಗಿ ಒಂದು ಭಾಷೆಯಾಗಿ ಇಂಗ್ಲಿಷನ್ನೂ ಕಲಿಯಿರಿ. ಆದರೆ ಶಿಕ್ಷಣ ಮಾತ್ರ ಮಾತೃಭಾಷೆಯಲ್ಲೇ ಪಡೆಯುವುದು ಸೂಕ್ತ ಅಂತ ಅಭಿಪ್ರಾಯ ವ್ಯಕ್ತಪಡಿಸಿದರು.
Teaching cannot be separated from research. In every higher education institution, both must go hand-in-hand and must fuel each other so that students are not deprived of exposure to cutting edge technology. pic.twitter.com/6MXEYYXOpj
— Vice President of India (@VPIndia) January 7, 2020
ವಿದ್ಯಾರ್ಥಿಗಳಿಗೆ ದೈಹಿಕ ಕ್ಷಮತೆ ಅನ್ನೋದು ಮುಖ್ಯ. ಮಕ್ಕಳು ಫಿಟ್ ಆಗಿರಬೇಕಾದರೆ ದೈಹಿಕ ತರಬೇತಿ ಅವಶ್ಯಕತೆ ಇದೆ. ಹೀಗಾಗಿ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ದೈಹಿಕ ಶಿಕ್ಷಣ ವಿಷಯ ಕಲಿಸಬೇಕು. ಅದಕ್ಕೆ ಅಂಕವನ್ನು ಕೊಡಬೇಕು ಅಂತ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಕೂಡಾ ಫಿಟ್ ಇಂಡಿಯಾ ಮೂಲಕ ದೇಶ ಫಿಟ್ ಇಡೋಕೆ ಕಾರ್ಯಕ್ರಮ ರೂಪಿಸಿದ್ದಾರೆ ಅಂತ ತಿಳಿಸಿದರು.