ಮೈಸೂರು: ಕುಡಿದ ಮತ್ತಿನಲ್ಲಿ ರಸ್ತೆ ಮಧ್ಯೆ ಕುಳಿತ ಪಾನಮತ್ತನೊಬ್ಬ ವಾಹನ ಸಂಚಾರಕ್ಕೆ ಕಿರಿಕಿರಿ ಉಂಟುಮಾಡಿದ ಘಟನೆ ಮೈಸೂರು ನಗರದಲ್ಲಿ ನಡೆದಿದೆ.
ಕೆ.ಜಿ. ಕೊಪ್ಪಲಿನ ರೈಲ್ವೇ ಸೇತುವೆ ಬಳಿ ವೃತ್ತದ ಮಧ್ಯೆ ಕುಳಿತು ಸಾರ್ವಜನಿಕರಿಗೆ ಕಿರಿಕಿರಿ ಮಾಡಿದ್ದಾನೆ. ಈ ವೇಳೆ ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಹೋಂಗಾರ್ಡ್ ಕುಡುಕನನ್ನು ಕದಲಿಸಲು ಹರಸಾಹಸ ಪಟ್ಟಿದ್ದಾರೆ. ಆದರೆ ಆ ಕುಡುಕ ವಾಹನ ಸಂಚಾರಕ್ಕೆ ಅಡ್ಡಿಯಾದರೂ ಹೋಂ ಗಾರ್ಡ್ ಮನವಿಗೆ ಸ್ಪಂದಿಸದೆ ಕಿರಿಕಿರಿ ಮುಂದುವರಿಸಿದ್ದಾನೆ.
- Advertisement 2
ಸುಮಾರು ಅರ್ಧಗಂಟೆ ಕಾಲ ಇದೇ ಸನ್ನಿವೇಶವನ್ನು ನಿರ್ಮಾಣ ಮಾಡಿದ್ದಾನೆ. ಬಳಿಕ ಕೆಲ ಸ್ಥಳೀಯ ಯುವಕರು ಬಂದು ಕುಡುಕನನ್ನು ಸ್ಥಳದಿಂದ ಕದಲಿಸಲು ಯತ್ನಿಸಿದ್ದಾರೆ. ಆದರು ಆತ ಕದಲಿಲ್ಲ. ನಂತರ ಯುವಕರು ಬಲವಂತವಾಗಿ ಸ್ಥಳದಿಂದ ಎಳೆದು ರಸ್ತೆಯಿಂದ ಹೊರ ಕರೆದುಕೊಂಡು ಹೋಗಿದ್ದಾರೆ. ಈ ಕುಡುಕನ ಹಾವಳಿಯಿಂದ ಕೆಲಕಾಲ ವಾಹನ ಸವಾರರಿಗೆ ಕಿರಿಕಿರಿಯಾಗಿತ್ತು.
- Advertisement 3