ಹಿರಿಯ ನಟಿ ಲೀಲಾವತಿ (Leelavathi) ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಬೆಂಗಳೂರು ಹೊರವಲಯದ ಸೋಲದೇವನಹಳ್ಳಿ ನೆಲೆಸಿರುವ ನಟಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಈ ಬೆನ್ನಲ್ಲೇ ಲೀಲಾವತಿ ಕನಸಿನ ಆಸ್ಪತ್ರೆಯನ್ನ ಡಿ.ಕೆ ಶಿವಕುಮಾರ್ ಅವರು ಉದ್ಘಾಟನೆ ಮಾಡಿದ್ದಾರೆ.
- Advertisement 2
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.k Shivakumar) ಇಂದು ಲೀಲಾವತಿ ಅವರ ಪಶು ಆಸ್ಪತ್ರೆ (Animal Hospital) ಉದ್ಘಾಟನೆ ಮಾಡಿದ್ದಾರೆ. ಲೀಲಾವತಿ ಆಸೆಗೆ ಸರ್ಕಾರ ಅದಕ್ಕೆ ಸಮ್ಮತಿ ನೀಡಿದೆ. ಉದ್ಘಾಟನೆ ಬಳಿಕ ಡಿಕೆಶಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಕೆಲ ದಿನಗಳ ಹಿಂದೆ ಶ್ರೀಮತಿ ಲೀಲಾವತಿ- ವಿನೋದ್ ರಾಜ್ ನಮ್ಮ ಮನೆಗೆ ಭೇಟಿ ನೀಡಿದ್ದರು. ಪಶು ವೈದ್ಯ ಶಾಲೆ ಕಟ್ಟೀದ್ದೀವಿ ಉದ್ಘಾಟನೆ ಮಾಡಿ ಕೊಡಿ ಎಂದಿದ್ದರು. ಇದನ್ನೂ ಓದಿ:ಪೂಜಾ ಗಾಂಧಿ ಕೈ ಹಿಡಿಯಲಿರೋ ಹುಡುಗ ವಿಜಯ್
- Advertisement 3
- Advertisement 4
ಒಂದು ದೊಡ್ಡ ಸಂದೇಶ ಇಬ್ಬರು ಕೊಟ್ಟಿದ್ದಾರೆ. ಎಷ್ಟೇ ದುಡ್ಡಿರಬಹುದು ಅವರಿಗೆ ಇರುವ ಮನಸ್ಸು ಯಾರಿಗೂ ಬರಲ್ಲ. ಅವರೇನು ಶ್ರೀಮಂತರೇನು ಅಲ್ಲ. ಆದರೆ ಸಮಾಜಕ್ಕೆ ಕೊಡುಗೆ ಕೊಡ್ಬೇಕು ಅಂತಾ ಎಲ್ಲರಿಗೂ ಮಾರ್ಗದರ್ಶನವಾಗಿದ್ದಾರೆ. ಬೆಂಗಳೂರಿಗೆ ಹತ್ತಿರವಾದ ಸ್ಥಳ ಇದು. ಇದು ಇಡೀ ನಮ್ಮ ಎಲ್ಲಾ ವರ್ಗದ ಜನರಿಗೆ ಮಾದರಿಯಾಗಿದೆ. ಇವರು ವ್ಯವಸಾಯದಲ್ಲೇ ಬದುಕಿದ್ರು ಇಂತಹ ಸೇವೆ ಮಾಡ್ತಿದ್ದಾರೆ. ಅವರ ಸೇವೆ 60 ವರ್ಷಗಳಿಂದ ನಡೆದು ಬರುತ್ತಿದೆ. ಇನ್ನೂ ಕಲಾವಿದರಿಗೆ ಪೆನ್ಶನ್ ಕೊಡಿ ಅನ್ನೋ ಡಿಮ್ಯಾಂಡ್ ವಿನೋದ್ ಕೊಟ್ಟಿದ್ದಾರೆ. ಅದನ್ನ ಈಡೇರಿಸೋ ಪ್ರಯತ್ನ ಮಾಡ್ತೀನಿ ಎಂದು ಡಿ.ಕೆ ಶಿವಕುಮಾರ್ ಮಾತನಾಡಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿರೋ ಲೀಲಾವತಿ ಅವರನ್ನ ನೋಡಲು ಅರ್ಜುನ್ ಸರ್ಜಾ, ದರ್ಶನ್, ಅಭಿಷೇಕ್ ಅಂಬರೀಶ್, ಗಿರಿಜಾ ಲೋಕೇಶ್, ಶಿವಣ್ಣ ಸೇರಿದಂತೆ ಹಲವು ನಟ- ನಟಿಯರು ಮನೆಗೆ ಭೇಟಿ ಆರೋಗ್ಯ ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿಯೇ ಲೀಲಾವತಿ ಅವರ ಬಹುದಿನಗಳ ಕನಸನ್ನ ಮಗ ವಿನೋದ್ ರಾಜ್ ನನಸು ಮಾಡಿದ್ದಾರೆ.