ರಾಮನಗರ: ಗೃಹಲಕ್ಷ್ಮಿ ನೋಂದಣಿ (Gruha Lakshmi Scheme) ಪತ್ರದಲ್ಲಿ ನನ್ನ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಫೋಟೋವನ್ನು ಮೇಲೆ ಕೆಳಗೆ ಮಾಡದೇ, ಜೊತೆಯಲ್ಲೇ ಬರುವಂತೆ ಮಾಡಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಕರ್ನಾಟಕ ಒನ್ (Karnataka One) ಸಿಬ್ಬಂದಿಗೆ ಸೂಚಿಸಿದ್ದಾರೆ.
ಕನಕಪುರದ ಕರ್ನಾಟಕ ಒನ್ ಕೇಂದ್ರಗಳಿಗೆ ಡಿಸಿಎಂ ದಿಢೀರ್ ಭೇಟಿಕೊಟ್ಟಿದ್ದಾರೆ. ಈ ವೇಳೆ ಗೃಹಲಕ್ಷ್ಮಿ ನೋಂದಣಿ ಅರ್ಜಿಗಳ ಪರಿಶೀಲನೆ ಮಾಡಿದ್ದಾರೆ. ಬಳಿಕ ನೋಂದಣಿ ಪತ್ರದಲ್ಲಿ ನನ್ನ ಹಾಗೂ ಸಿದ್ದರಾಮಯ್ಯ ಫೋಟೋ ಜೊತೆಯಲ್ಲೆ ಬರಬೇಕು. ಮೇಲೆ ಕೆಳಗೆ ಮಾಡದಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಪ.ಬಂಗಾಳದಲ್ಲಿಯೂ ನಡೆದಿತ್ತು ಮಹಿಳೆಯರಿಬ್ಬರ ಅರೆಬೆತ್ತಲೆ ಮೆರವಣಿಗೆ- ವೀಡಿಯೋ ವೈರಲ್
ಈ ವೇಳೆ ಡಿಸಿಎಂ ಮಾತು ಕೇಳಿ ಕರ್ನಾಟಕ ಒನ್ ಸಿಬ್ಬಂದಿ ನಗೆ ಬೀರಿದ್ದಾರೆ. ಬಳಿಕ ನೋಂದಣಿ ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಿ ತೆರಳಿದ್ದಾರೆ.
ಶುಕ್ರವಾರ ಆಪ್ತ ವಕೀಲರ ನಿಧನ ಹಿನ್ನೆಲೆ ಅಂತಿಮ ದರ್ಶನಕ್ಕೆ ಕನಕಪುರಕ್ಕೆ ಡಿ.ಕೆ ಶಿವಕುಮಾರ್ ತೆರಳಿದ್ದರು. ಈ ವೇಳೆ ಕರ್ನಾಟಕ ಒನ್ ಸೆಂಟರ್ಗಳಿಗೆ ಅವರು ದಿಢೀರ್ ಭೇಟಿಕೊಟ್ಟಿದ್ದರು. ಇದನ್ನೂ ಓದಿ: ಪಣಂಬೂರು ಬೀಚ್ಗೆ ತೆರಳಿದ್ದ ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್ಗಿರಿ
Web Stories