ದಾವಣಗೆರೆ: ಹಾಲು ಮಾರಿ ಬದುಕುತ್ತಿದ್ದ ಕಣ್ಣು ಕಾಣದ ದಿವ್ಯಾಂಗ ವ್ಯಕ್ತಿಯ ಹಸುಗಳನ್ನು ಯಾರೋ ಕಿಡಿಗೇಡಿಗಳು ಕಳುವು ಮಾಡಿದ್ದು, ಈಗ ಆತನ ಇಡೀ ಜೀವನವನ್ನೇ ಕತ್ತಲು ಅವರಿಸಿದಂತಾಗಿದೆ.
ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಠಗಿದುರ್ಗದ ಮಗನೂರು ಚೆನ್ನಪ್ಪ ಅವರಿಗೆ ಸೇರಿದ 90 ಸಾವಿರ ಮೌಲ್ಯದ ಎರಡು ಹಸುಗಳು ಕಳುವಾಗಿದ್ದು, ಅವುಗಳನ್ನೆ ನಂಬಿ ಪ್ರತಿನಿತ್ಯ ಹಾಲು ಕರೆದು ಮಾರಿ ಬಂದ ಹಣದಿಂದ ಜೀವನ ನಡೆಸುತ್ತಿದ್ದರು. ಆದರೆ ಹಸುಗಳನ್ನು ಕಳ್ಳರು ಕಳುವು ಮಾಡಿದ್ದು ಅವರ ಜೀವನ ನಡೆಸುವುದಕ್ಕೂ ಕೂಡ ಕಷ್ಟವಾಗಿದೆ.
ಇಂದು ಬೆಳಗಿನ ಜಾವ ಕಳ್ಳರು ಚೆನ್ನಪ್ಪ ಅವರ ಎರಡು ಹಸುಗಳನ್ನು ಕಳುವು ಮಾಡಿದ್ದಾರೆ. ತನ್ನ ಜೀವನ ನಡೆಸಲು ಸಹಾಯವಾಗಿದ್ದ ಎರಡು ಹಸುಗಳನ್ನು ಕಳೆದುಕೊಂಡು ಚೆನ್ನಪ್ಪ ರೋಧನೆ ಅನುಭವಿಸುತ್ತಿದ್ದಾರೆ. ಈ ಸಂಬಂಧ ಅರಸಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.