– ಆರಾಧ್ಯ ದೈವ ಅಜ್ಜಯ್ಯನ ಪೀಠಕ್ಕೆ ಪೂಜೆ ಸಲ್ಲಿಕೆ
ತುಮಕೂರು: ಮೊದಲಿನಿಂದಲೂ ದೇವರಲ್ಲಿ ಅಪಾರ ಭಕ್ತಿ, ನಂಬಿಕೆ ಹೊಂದಿರುವ ಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರು ರಾಜ್ಯದ ಒಂದಿಲ್ಲೊಂದು ದೇವಸ್ಥಾನಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಕುಟುಂಬ ಸಮೇತರಾಗಿ ತೆರಳಿ ವಿಶೇಷ ಪೂಜೆ ಸಲ್ಲಿಸಿ, ದೇವರಲ್ಲಿ ಪ್ರಾರ್ಥಿಸುತ್ತಾರೆ.
ನಿನ್ನೆಯಷ್ಟೇ ಬೆಂಗಳೂರು ನಗರ ದೇವತೆ ಅಣ್ಣಮ್ಮ ದೇವಿ ದರ್ಶನ ಪಡೆದು ಹರಕೆ ತೀರಿಸಿದ್ದ ಡಿಕೆಶಿ ಅವರಿಂದು, ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ (Nonavinakere Kadasiddeshwara Mutt) ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: ಹರಕೆ ತೀರಿಸಿದ ಸಿಎಂಗೆ ಅಣ್ಣಮ್ಮ ದೇವಿ ಶುಭಸೂಚನೆ – ಡಿಕೆಶಿ ಇಷ್ಟಾರ್ಥ ಈಡೇರುತ್ತಾ?

ಇಂದು ಸಂಜೆ 5 ಗಂಟೆಗೆ ಮಠಕ್ಕೆ ಭೇಟಿ ನೀಡಲಿದ್ದು, ತಮ್ಮ ಆರಾಧ್ಯ ದೈವ ಅಜ್ಜಯ್ಯನ ಪೀಠಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಮಠದಲ್ಲೇ ಇದು, ಅಲ್ಲಿ ನಡೆಯುವ ವಿವಿಧ ಪೂಜಾ ಕೈಂಕರ್ಯಗಳನ್ನ ನೇರವೇರಿಸಲಿದ್ದಾರೆ.
ಮೇ 28 ರಂದೇ ಸಿದ್ದೇಶ್ವರ ಮಠಕ್ಕೆ ಡಿಕೆ ಶಿವಕುಮಾರ್ ಅವರ ಭೇಟಿ ನಿಗದಿಯಾಗಿತ್ತು. ಆದ್ರೆ ಅಂದು ಶಾಸಕಾಂಗ ಪಕ್ಷದ ಸಭೆ ಇದ್ದ ಕಾರಣ ಭೇಟಿ ರದ್ದಾಯಿತು. ಇದನ್ನೂ ಓದಿ: ಬೆಂಗಳೂರು ನಗರವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ: ಪರೋಕ್ಷವಾಗಿ ಖಾತೆ ಬಿಟ್ಟುಕೊಡಲ್ಲ ಎಂದ ಕೃಷ್ಣಬೈರೇಗೌಡ

ಡಿಕೆಶಿ ಅವರ ಆಡಳಿತದ ಬಗ್ಗೆ ಮಾತನಾಡಿದ್ದ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಕರಿವೃಷಭ ಶಿವಯೋಗೀಶ್ವರ ಸ್ವಾಮೀಜಿ, ಶಾಸ್ತ್ರದ ಪ್ರಕಾರ ಡಿಕೆ ಶಿವಕುಮಾರ್ ಅವರು ಸಕಲ ದೋಷ ನೋಡಿಕೊಂಡು ಮುನ್ನಡೆಯಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.
ಶ್ರೀಮಠದ ಆಶೀರ್ವಾದ ಡಿಕೆಶಿ ಅವರಿಗೆ ಇದ್ದೇ ಇರುತ್ತದೆ. ʻರಾಜಾ ಪ್ರತ್ಯಕ್ಷ ದೇವತಾ…ʼ ಅಂದ್ರೆ ರಾಜ್ಯವನ್ನು ಆಳುವಂತಾ ದೊರೆ ನಾಯಕ. ರೈತರ ಪರ ಬಡವರ ಪರಯಿರುವ ನಾಯಕನಾಗಿ ಹೊರಹೊಮ್ಮುತ್ತಾರೆ. ಶ್ರೀ ಮಠದ ಧರ್ಮದ ಧ್ವಜವನ್ನ ಕೊಟ್ಟು ಅವರಿಗೆ ಆರ್ಶಿವಾದ ಮಾಡುವ ಕಾಲ ಹತ್ತಿರ ಬಂದಿದೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ಅವರ ಬಾಳು ಬಂಗಾರವಾಗಲೆಂದು ಆರ್ಶಿವಾದ ಮಾಡಿದ್ದರು. ಇದನ್ನೂ ಓದಿ: ಈ ಪೆಟ್ಟು ಯಾರ ಒಳ ಏಟು? ಇದು ಬಂಡೆ ಜೆಲ್ಲಿಪುಡಿಯಾಗುವ ಮುನ್ಸೂಚನೆ: ಬಿಜೆಪಿ ಲೇವಡಿ
