ಬೆಂಗಳೂರು: ಉಪಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕನ್ಫ್ಯೂಷನ್ ನಲ್ಲಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಯಾರು ಯಾವ ರೀತಿ ಬದಲಾಗ್ತಾರೆ, ಯಾರು ಶತ್ರುಗಳಾಗುತ್ತಾರೆ, ಯಾರು ಮಿತ್ರರಾಗ್ತಾರೆ ಅನ್ನೋ ಗೊಂದಲದಲ್ಲಿ ಮುಖ್ಯಮಂತ್ರಿಗಳಿದ್ದಾರೆ. ಈ ಮೂಲಕ ಸ್ವಂತ ಪಕ್ಷದವರ ಮೇಲೆಯೇ ಬಿಎಸ್ವೈಗೆ ಅನುಮಾನ ಹುಟ್ಟಿಕೊಂಡಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
- Advertisement 2
- Advertisement 3
ಕನ್ಫ್ಯೂಷನ್ ಯಾಕೆ?
ಯಡಿಯೂರಪ್ಪಗೆ ಗೊಂದಲ ಹುಟ್ಟಿಸೋರು ಹೆಚ್ಚಾಗಿದ್ದಾರೆ. ಪಕ್ಷದೊಳಗೆ ಕ್ಷೇತ್ರಗಳ ಸ್ಥಳೀಯ ಮುಖಂಡರು ಒಬ್ಬರಿಗೊಬ್ಬರು ಹಣಿಯಲು ಮುಂದಾಗಿದ್ದಾರೆ. ಸುಖಾಸುಮ್ಮನೆ ಬಿಎಸ್ವೈವರೆಗೂ ಜಟಾಪಟಿ ಎಳೆದು ತರುತ್ತಿದ್ದಾರೆ.
- Advertisement 4
ಸ್ಥಳೀಯ ಕ್ಷೇತ್ರಗಳ 2-3 ಮುಖಂಡರ ಬಣಗಳಿಂದ ಚಾಡಿ ಮಾತುಗಳು ಬಿಎಸ್ವೈ ಬಳಿ ಬರುತ್ತಿವೆ. ಈ ಚಾಡಿ ಹೇಳುತ್ತಿರುವವರ ಮೊದಲ ಬಣ ಬಿಎಸ್ವೈ ಬಣದಲ್ಲಿ ಗುರುತಿಸಿಕೊಂಡವರಾಗಿದ್ದಾರೆ. ಅನರ್ಹರಿಗೆ ಟಿಕೆಟ್ ಬೇಡ ಅಂತಿರೋರ ವಿರುದ್ಧವೇ ಈ ಬಣ ಸ್ಥಳೀಯವಾಗಿ ಆಕ್ಟೀವ್ ಆಗಿದೆ. ಅನರ್ಹರಿಗೆ ಟಿಕೆಟ್ ವಿರೋಧಿಸುತ್ತಿರುವವರನ್ನೇ ವಿಲನ್ ಗಳಾಗಿ ಮಾಡುವ ಯತ್ನಗಳು ನಡೆಯುತ್ತಿವೆ.
ಅನರ್ಹರಿಗೆ ಟಿಕೆಟ್ ಬೇಡ ಅಂತಿರೋರು ಸ್ಥಳೀಯವಾಗಿ ಸ್ಟ್ರಾಂಗ್ ಇದ್ದಾರೆ. ವಿರೋಧಿ ಬಣವು ಇಂಥವರನ್ನೇ ಮೆಟ್ಟಿ ತಾವು ಸ್ಟ್ರಾಂಗ್ ಆಗಲು ಪ್ರಯತ್ನಿಸುತ್ತಿದೆ. ಟಿಕೆಟ್ ವಿರೋಧಿ ಬಣ ಏನು ಸುಮ್ಮನೆ ಕೂತಿಲ್ಲ. ಈ ಬಣವೂ ತಮ್ಮ ವಿರೋಧಿಗಳಿಗಿಂತ ಒಂದು ಹೆಜ್ಜೆ ಮುಂದೆ ನಿಂತೇ ಸಂಚು ರೂಪಿಸುತ್ತಿದೆ. ಟಿಕೆಟ್ ಗೆ ವಿರೋಧಿಸಿದರೆ ಪಕ್ಷದಲ್ಲಿ ಮಾನ್ಯತೆ ಸಿಗುತ್ತದೆ. ಹಾಗಂತ ಸ್ಟ್ರಾಂಗಾಗಿ, ವರಿಷ್ಠರ ಸಿಟ್ಟಿಗೆ ಗುರಿಯಾಗುವ ಹಾಗೆ ವಿರೋಧಿಸೋದು ಬೇಡ. ಬದಲಾಗಿ ವರಿಷ್ಠ ನಾಯಕರು ಗುರುತಿಸಿ ತಮ್ಮ ಆಪ್ತ ವಲಯದಲ್ಲಿ ಇಟ್ಟುಕೊಂಡರೆ ಸಾಕು. ನಮಗೆ ನಮ್ಮ-ನಮ್ಮ ಕ್ಷೇತ್ರಗಳಲ್ಲಿ ಮುಖಂಡರು ಅಂತ ಪರಿಗಣಿಸಿದರೆ ಸಾಕು. ಅಷ್ಟರ ಮಟ್ಟಿಗೆ ಮಾತ್ರ ಅನರ್ಹರಿಗೆ ಟಿಕೆಟ್ ಬೇಡ ಅಂತ ವಿರೋಧಿಸೋಣ ಅನ್ನೋದು ಈ ಬಣದ ಉದ್ದೇಶವಾಗಿದೆ. ಒಟಿನಲ್ಲಿ ಕ್ಷೇತ್ರಗಳಲ್ಲಿ ಸ್ಥಳೀಯ ಮುಖಂಡರ ಈ ಲೋಕಲ್ ಪಾಲಿಟಿಕ್ಸ್ ಸಿಎಂ ನಿದ್ದೆ ಕೆಡಿಸಿದ್ದು, ಯಾರನ್ನು ನಂಬೋದು ಯಾರನ್ನು ಬಿಡೋದು ಅನ್ನೋ ಗೊಂದಲದಲ್ಲಿದ್ದಾರೆ ಎನ್ನಲಾಗಿದೆ.
ನಿಜವಾಗಿಯೂ ಅನರ್ಹರಿಗೆ ಟಿಕೆಟ್ ಬೇಡ ಅನ್ನುತ್ತಿರುವವರ ಗುಂಪಲ್ಲಿ ಯಾರು ಯಾರಿದ್ದಾರೆ ಅನ್ನೋದೇ ದೊಡ್ಡ ಗೊಂದಲವಾಗಿದೆ. ಕೆಲವರು ಇಲ್ಲೂ ಇರ್ತಾರೆ ಅಲ್ಲೂ ಇರ್ತಾರೆ. ಹೀಗಾಗಿ ಯಾವ ರೀತಿ ಲೋಕಲ್ ಪಾಲಿಟಿಕ್ಸ್ ನ ಸಮಸ್ಯೆಗಳನ್ನು ಇತ್ಯರ್ಥ ಮಾಡಬೇಕು ಅಂತ ಬಿಎಸ್ವೈ ತಲೆಕೆಡಿಸಿಕೊಂಡಿದ್ದು, ಉಪಚುನಾವಣೆಗೆ ತಯಾರಿ ಮಾಡಿಕೊಳ್ಳುವಾಗ ಎದುರಾದ ಈ ದ್ವಂದ್ವ ಬಿಎಸ್ವೈ ಅವರನ್ನು ಮತ್ತಷ್ಟು ಗೊಂದಲಕ್ಕೆ ದೂಡಿದೆ ಎನ್ನಲಾಗಿದೆ.