ಕಾರು ಡಿಕ್ಕಿಯಾಗಿ ಚಿರತೆ ಮುಖಕ್ಕೆ ಗಂಭೀರ ಗಾಯ

Public TV
0 Min Read
HSN CHEETHA 1 1

ಹಾಸನ: ಕಾರು ಡಿಕ್ಕಿ ಹೊಡೆದು ಚಿರತೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರ ಕೆರೆ ಏರಿ ಮೇಲೆ ನಡೆದಿದೆ.

ಕಾರಿನ ಚಾಲಕ ಕೆರೆ ಏರಿ ಮೇಲೆ ಬಂದ ಚಿರತೆಗೆ ಏಕಾಏಕಿ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಚಿರತೆಯ ಮುಖ ಭಾಗಕ್ಕೆ ಗಂಭೀರವಾಗಿ ಗಾಯಗಳಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಿದ್ದಿದೆ. ತಕ್ಷಣ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಚಿರತೆಯನ್ನು ತಮ್ಮ ವಶಕ್ಕೆ ಪಡೆದು ಅರಸೀಕೆರೆ ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯಕ್ಕೆ ಚಿರತೆಗೆ ಚಿಕಿತ್ಸೆ ನಡೆಯುತ್ತಿದೆ.

ಕಳೆದ 4 ದಿನಗಳ ಹಿಂದೆ ಅಷ್ಟೇ ಯಗಚಿ ಹಿನ್ನೀರಿನಲ್ಲಿ ಚಿರತೆಯೊಂದು ಸಾವನ್ನಪ್ಪಿತ್ತು.

https://www.youtube.com/watch?v=Yv_IHlWTQvM

 

Share This Article
Leave a Comment

Leave a Reply

Your email address will not be published. Required fields are marked *