Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸೌದೆ ತಗೊಂಡ್ರೇ ಮಾತ್ರ ಹೆಣ ಸುಡಲು ಸ್ಲಾಟ್ – ಬೆಂಗಳೂರಿನ ಸ್ಮಶಾನದಲ್ಲೂ ಬ್ರೋಕರ್‌ಗಳ ಹಾವಳಿ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಸೌದೆ ತಗೊಂಡ್ರೇ ಮಾತ್ರ ಹೆಣ ಸುಡಲು ಸ್ಲಾಟ್ – ಬೆಂಗಳೂರಿನ ಸ್ಮಶಾನದಲ್ಲೂ ಬ್ರೋಕರ್‌ಗಳ ಹಾವಳಿ!

Bengaluru City

ಸೌದೆ ತಗೊಂಡ್ರೇ ಮಾತ್ರ ಹೆಣ ಸುಡಲು ಸ್ಲಾಟ್ – ಬೆಂಗಳೂರಿನ ಸ್ಮಶಾನದಲ್ಲೂ ಬ್ರೋಕರ್‌ಗಳ ಹಾವಳಿ!

Public TV
Last updated: April 9, 2025 8:42 am
Public TV
Share
2 Min Read
Brokers are also invading the graveyard in Bengaluru
SHARE

– 100 ರೂ. ಜಾಗದಲ್ಲಿ 6 ಸಾವಿರ ಕೊಡಬೇಕು
– ಸೌದೆ ಬೇಡ ಅಂದ್ರೆ ರೋಡಲ್ಲಿ ಸುಡಬೇಕು!

ಬೆಂಗಳೂರು: ಸ್ಮಶಾನಗಳನ್ನು ಚಿರಶಾಂತಿ ಸ್ಥಳ ಎನ್ನುತ್ತಾರೆ. ಇಂತಹ ಜಾಗಗಳಲ್ಲೂ ಬ್ರೋಕರ್‌ಗಳ ಹಾವಳಿ ಹೆಚ್ಚಾಗಿದೆ. ಸ್ಮಶಾನದಲ್ಲಿ ಹೆಣ ಸುಡಬೇಕು ಅಂದರೆ ಸೌದೆಗೆ ಆರು ಸಾವಿರ ರೂ. ಕೊಡಬೇಕು.

ಹೌದು. ನಗರದ ಚಾಮರಾಜಪೇಟೆಯ ಟಿ ಆರ್ ಮಿಲ್ ಚಿತಾಗಾರದಲ್ಲಿ ಈಗಲೂ ಸೌದೆ ಬಳಸಿ  ಹೆಣಗಳನ್ನು ಸುಡಲಾಗುತ್ತದೆ. ಈ ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲು ತಿರ್ಮಾನಿಸಲಾಗಿದೆ. ಸದ್ಯ ಸೌದೆಗಳ ಮೂಲಕವೇ ಹೆಣ ಸುಡಲಾಗುತ್ತಿದೆ. ಈ ಸ್ಮಶಾನದಲ್ಲಿ ಹೆಣ ಸುಡಬೇಕಾದರೆ ಸೌದೆಗಾಗಿ 6 ಸಾವಿರ ರೂ. ಕೊಡಬೇಕು.

ಸೌದೆ ತೆಗೆದುಕೊಂಡರೆ ಮಾತ್ರ ಮೃತದೇಹ ಸುಡಲು ಸ್ಲಾಟ್ ಕೊಡುತ್ತಾರೆ. ಸೌದೆ ಬ್ರೋಕರ್‌ಗಳ ಕಾರುಬಾರು ವಿಪರೀತ ಹೆಚ್ಚಾಗಿದ್ದು ಇರುವ ಸ್ಲಾಟ್‌ಗಳನ್ನು ಮೂವರು ಸೌದೆ ಮಂಡಿಯವರು ಹಂಚಿಕೊಂಡಿದ್ದಾರೆ. ಇವರ ಬಳಿಸೌದೆ ಖರೀದಿಸಿದರೆ ಮಾತ್ರ ಜನರಿಗೆ ಸ್ಲಾಟ್ ಸಿಗುತ್ತದೆ. ಸೌದೆ ಬೇಡ ಅಂದರೆ ಇಲ್ಲಿ ಸುಡಲು ಅವಕಾಶವಿಲ್ಲ. ಬ್ರೋಕರ್‌ಗಳೇ ಈ ಶಾಕಿಂಗ್‌ ವಿಚಾರವನ್ನು ತಿಳಿಸಿದ್ದು, ಸೌದೆ ಬೇಡ ಅಂದರೆ ನೆಲದ ಮೇಲೆ ಸುಡಿ, ಇಲ್ಲದೇ ಇದ್ರೆ ರೋಡಲ್ಲಿ ಸುಡಿ ಎನ್ನುತ್ತಾರೆ. ಮಂಡಿಯವರ ಹಾವಳಿ ಪಬ್ಲಿಕ್‌ ಟಿವಿಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಇದನ್ನೂ ಓದಿ: ಡೀಸೆಲ್ ಬೆಲೆ ಏರಿಕೆ – ಖಾಸಗಿ ಬಸ್ ಪ್ರಯಾಣ ದರ ದುಬಾರಿ!

Hindu Graveyard 3

ಪಬ್ಲಿಕ್‌ ಟಿವಿ ಪ್ರತಿನಿಧಿ ಮತ್ತು ಸೌದೆ ಮಂಡಿಯವರ ನಡುವಿನ ಸಂಭಾಷಣೆಯನ್ನು ಇಲ್ಲಿ ನೀಡಲಾಗಿದೆ.

ಪ್ರತಿನಿಧಿ- ಟೆಂಡರ್ ತಗೊಂಡಿದ್ದೀರಾ?
ಸೌದೆ ಮಂಡಿಯವರು- ಇಲ್ಲ..ನಾವು ಮೂರು ಮಂಡಿಯವರು ಕಟ್ಟಿಗೆ ಹಾಕ್ತೀವಿ.
ಪ್ರತಿನಿಧಿ- ಎಷ್ಟಾಗುತ್ತೆ?
ಸೌದೆ ಮಂಡಿಯವರು- 5,600+300 ಆಗುತ್ತೆ
ಪ್ರತಿನಿಧಿ- ಸೌದೆ ಬಿಟ್ಟು ಬಾಕ್ಸ್ ಬುಕ್ ಮಾಡೋಕ್ ಆಗಲ್ವಾ?
ಸೌದೆ ಮಂಡಿಯವರು- ಸೌದೆ ನೀವು ತರೋಹಂಗಿಲ್ಲ?
ಪ್ರತಿನಿಧಿ- ಬಿಬಿಎಂಪಿ ಚಾರ್ಜ್ ಇರುತ್ತಾ?
ಸೌದೆ ಮಂಡಿಯವರು- 300 ಬರೆದು ಕೋಡೋಕೆ.
ಪ್ರತಿನಿಧಿ- 6 ಸಾವಿರ ಜಾಸ್ತಿ ಅಲ್ವಾ.
ಸೌದೆ ಮಂಡಿಯವರು- ಹಾಗಾದ್ರೇ ಅಲ್ಲೆ ಎಲ್ಲಾದ್ರೂ ಊರು ಕಡೆ ಮಾಡ್ಕೊಳ್ರಿ.
ಪ್ರತಿನಿಧಿ- ಊರಿಂದ ಜನ ಸೌದೆ ತರ್ತಾರೆ.
ಸೌದೆ ಮಂಡಿಯವರು- ಸೌದೆ ತಂದ್ರೇ ರೋಡಲ್ಲಿ ಇಟ್ಕೊಂಡ್ ಮಾಡಿ.
ಪ್ರತಿನಿಧಿ- ಬಿಬಿಎಂಪಿದಲ್ವಾ ಒಂದೆರಡು ಸಾವಿರದಲ್ಲಿ ಆಗಲ್ವಾ?
ಸೌದೆ ಮಂಡಿಯವರು- ಸೌದೆ ತರ್ತೀವಿ ಜಾಗ ಕೊಡಿ ಅಂದ್ರೇ ಯಾವೋನ್ ಕೊಡ್ತಾನೆ. ಇದನ್ನೂ ಓದಿ: Exclusive | ಕ್ಯಾಬಿನೆಟ್ ಕ್ಲೈಮ್ಯಾಕ್ಸ್, ಜಾತಿ ಗಣತಿ ಮಂಡನೆಗೆ ಪ್ಲ್ಯಾನ್‌ – ಮಾಸ್ಟರ್‌ಸ್ಟ್ರೋಕ್‌ ಕೊಡ್ತಾರಾ ಸಿಎಂ?

ಪ್ರತಿನಿಧಿ- ಸೌದೆ ಇಲ್ಲದೆ ಬುಕ್ ಮಾಡ್ಕೊಳ್ಳಲ್ವಾ?
ಸೌದೆ ಮಂಡಿಯವರು- ಊರಿಂದ ಸೌದೆ ತಂದ್ರೇ ಬಾಕ್ಸ್ ಕೊಡಲ್ಲ. ನೆಲದಲ್ಲೇ ಮಾಡ್ಕೋಬೇಕು.
ಸೌದೆ ಮಂಡಿಯವರು- ಸಾವಿನ ಮನೆಯವರು ದುಡ್ಡಿನ ಬಗ್ಗೆ ಇಷ್ಟೋಂದು ಯೋಚನೆ ಮಾಡಲ್ಲ.
ಪ್ರತಿನಿಧಿ- ಟೆಂಡರ್ ಹಾ ಇದು. ಬಿಬಿಎಂಪಿ ದಾ ಇದು.
ಸೌದೆ ಮಂಡಿಯವರು- ಸ್ಲಾಟ್ ಬುಕ್ಕಿಂಗ್ ಬಿಬಿಎಂಪಿಯದ್ದು. ಸೌದೆ ಮಂಡಿಯವರದ್ದು.
ಪ್ರತಿನಿಧಿ- ಬಿಬಿಸಂಪಿಯಿಂದ ದುಡ್ಡಿರಲ್ಲ ಹಾಗಿದ್ರೆ.
ಸೌದೆ ಮಂಡಿಯವರು- ಬಿಬಿಎಂಪಿಯಿಂದ ಒಂದು ರೂಪಾಯಿ ಸಹ ಇರಲ್ಲ.
ಸೌದೆ ಮಂಡಿಯವರು- ಬುಕ್ಕಿಂಗ್ ಮಾಡಿದ್ರಷ್ಟೇ ಸ್ಲಾಟ್ ಸಿಗೋದು.
ಪ್ರತಿನಿಧಿ- ಡಿಪೋದವರು ಕಡಿಮೆಗೆ ಹೇಳಿದ್ರು.
ಸೌದೆ ಮಂಡಿಯವರು- ಹಾಗಾದ್ರೇ ಅಲ್ಲೆ ಮಾಡ್ಕೊಳ್ಳಿ.

ಬಿಬಿಎಂಪಿ ಶುಲ್ಕ 100- 300 ರೂ. ಇದ್ದರೆ ಸೌದೆ ಅಂತ ಇವರು 6 ಸಾವಿರ ರೂ. ಪಡೆಯುತ್ತಾರೆ. ಈಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಬಡ ಜನರ ಮೇಲೆ ಹೊರೆಯಾಗದಂತೆ ನೋಡಿಕೊಳ್ಳಬೇಕಿದೆ.

TAGGED:bbmpbengalurucorruptiongraveyardಬಿಬಿಎಂಪಿಬೆಂಗಳೂರುಭ್ರಷ್ಟಾಚಾರಸ್ಮಶಾನ
Share This Article
Facebook Whatsapp Whatsapp Telegram

Cinema news

Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post
Pooja Hegde Udupi
ಉಡುಪಿಯಲ್ಲಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ ಪೂಜಾ ಹೆಗ್ಡೆ
Cinema Districts Karnataka Latest Top Stories Udupi

You Might Also Like

Bengaluru Rain 2 1
Bengaluru City

Bengaluru Rain Alert | ಬೆಂಗಳೂರಲ್ಲಿ ರಣ ಮಳೆಗೆ ಮತ್ತೆರಡು ಬಲಿ

Public TV
By Public TV
16 minutes ago
Vaibhav Suryavanshi 1
Cricket

ನನ್ನ ಬ್ಯಾಟ್‌ಗೆ ದೇವರೇ AI ಚಿಪ್ ಅಂಟಿಸಿದ್ದಾನೆ, ಈಗ ಅದನ್ನೇ ಬಳಸ್ತಿದ್ದೀನಿ – ಪಾಕ್ ಕ್ರಿಕೆಟ್ ತಜ್ಞನ ಮಾತಿಗೆ ವೈಭವ್ ಕೌಂಟರ್

Public TV
By Public TV
25 minutes ago
udf congress rahul gandhi
Latest

Exit Poll| ಕೇರಳದಲ್ಲಿ ಪಿಣರಾಯಿ ಹ್ಯಾಟ್ರಿಕ್‌ ಕನಸು ಭಗ್ನ – ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ಗೆ ಜಯ

Public TV
By Public TV
49 minutes ago
exit polls
Latest

Exit Poll Results | ಬಂಗಾಳದಲ್ಲಿ ಫಸ್ಟ್‌ ಟೈಂ ಬಿಜೆಪಿಗೆ ಅಧಿಕಾರ – ತಮಿಳುನಾಡಲ್ಲಿ ಡಿಎಂಕೆ ಕಮಾಲ್ – ಒಂದರಲ್ಲಿ ದಳಪತಿಗೆ ಪಟ್ಟ

Public TV
By Public TV
52 minutes ago
TVK Vijay
Latest

ಚುನಾವಣಾ ಫಲಿತಾಂಶಕ್ಕೂ ಮುನ್ನ ಟೆಂಪಲ್ ರನ್ – ಶಿರಡಿ ಸಾಯಿಬಾಬಾ ದರ್ಶನ ಪಡೆದ ನಟ ವಿಜಯ್

Public TV
By Public TV
1 hour ago
exit polls
Latest

Exit Polls 2026 Live: ಬಿಜೆಪಿ ತೆಕ್ಕೆಗೆ ಬಂಗಾಳ, ಅಸ್ಸಾಂನಲ್ಲಿ BJP ಹ್ಯಾಟ್ರಿಕ್;‌ ತ.ನಾಡಲ್ಲಿ ಡಿಎಂಕೆಗೆ ಮತ್ತೆ ಅಧಿಕಾರ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?