ನವದೆಹಲಿ: ಸಂಕಷ್ಟದ ಸಮಯ, ಗಡಿಗಳನ್ನು ಮುಕ್ತವಾಗಿಡಿ ಎಂದು ಅಫ್ಘಾನ್ ನೆರೆರಾಷ್ಟ್ರಗಳಿಗೆ ವಿಶ್ವಸಂಸ್ಥೆ ಕರೆ ನೀಡಿದೆ.
ಸದ್ಯ, ಅಪಾಯದಲ್ಲಿರುವವರಿಗೆ ಯಾವುದೇ ದಾರಿಯಿಲ್ಲ ಎಂದಿರುವ ವಿಶ್ವಸಂಸ್ಥೆಯ ನಿರಾಶ್ರಿತರ ಮಾನವ ವಕ್ತಾರ ಶಬಿಯಾ ಮಂಟೂ, ಅಫ್ಘಾನಿಸ್ತಾನದಲ್ಲಿ ಬೆಳೆಯುತ್ತಿರುವ ಪರಿಸ್ಥಿತಿಯಲ್ಲಿ ನಾಗರಿಕರು, ವಿಶೇಷವಾಗಿ ಮಹಿಳೆಯರು ಮತ್ತು ಹುಡುಗಿಯರ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಯ ಅಪಾಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ನಮ್ಮ ನೆರವು ಬೇಕಿದೆ: ಸೋನುಸೂದ್
ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಜನಸಂದಣಿ ಮತ್ತು ರನ್ ವೇನಲ್ಲಿ ವಿಮಾನಗಳಲ್ಲಿ ನೇತಾಡುತ್ತಿರುವ ವ್ಯಕ್ತಿಗಳ ವೀಡಿಯೋ ತುಣುಕನ್ನು ಪ್ರಸ್ತಾಪಿಸಿರುವ ಮಂಟೂ, ಅಫ್ಘಾನಿಸ್ತಾನ ತೊರೆಯಲು ಸಾಧ್ಯವಾಗದೆ ಉಳಿದಿರುವವರನ್ನು ಮರೆಯಲು ಸಾಧ್ಯವಿಲ್ಲ. ಈ ಸ್ಥಳಾಂತರಿಸುವಿಕೆಗಳು ಜೀವರಕ್ಷಕವಾಗಿವೆ, ಅವುಗಳು ನಿರ್ಣಾಯಕವಾಗಿವೆ, ಅವುಗಳು ಅಗತ್ಯವಿದೆ. ಇದಕ್ಕೆ ಅಂತಾರಾಷ್ಟ್ರೀಯ ಸಹಕಾರದ ಅಗತ್ಯವಿದೆ ಎಂದಿದ್ದಾರೆ.
ಈ ವರ್ಷದ ಆರಂಭದಿಂದಲೂ, ಯುಎನ್ಹೆಚ್ಸಿಆರ್ ದೇಶದ 230,000 ಜನರಿಗೆ ತುರ್ತು ಸಹಾಯ ಒದಗಿಸಿದೆ. ಇದರಲ್ಲಿ ನಗದು ನೆರವು, ನೈರ್ಮಲ್ಯ ಬೆಂಬಲ ಮತ್ತು ಇತರ ಪರಿಹಾರ ವಸ್ತುಗಳು ಸೇರಿವೆ. ಸ್ಥಳಾಂತರಗೊಂಡ ಸುಮಾರು ಅರ್ಧ ಮಿಲಿಯನ್ ಆಫ್ಘಾನ್ನರಿಗೆ ಅಗತ್ಯಗಳ ಮೌಲ್ಯಮಾಪನಗಳು ನಡೆಯುತ್ತಿವೆ. ಅವರಲ್ಲಿ 80ಪ್ರತಿಶತ ಮಹಿಳೆಯರು ಮತ್ತು ಮಕ್ಕಳು ಎಂದು ಯುಎನ್ ಸಂಸ್ಥೆ ಹೇಳಿದೆ.