ಪಾಟ್ನ: ಇಬ್ಬರು ಹೆಂಡತಿಯರ ಮುದ್ದಿನ ಗಂಡನಾಗಿದ್ದ ವ್ಯಕ್ತಿಯೊಬ್ಬ ಮೊದಲ ಹೆಂಡತಿಯರಿಂದಲೇ ಬರ್ಬರವಾಗಿ ಕೊಲೆಯಾಗಿರುವ ಘಟನೆ ಬಿಹಾರದ (Bihar) ಛಾಪ್ರಾ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಛಾಪ್ರಾ ಜಿಲ್ಲೆಯ ಮಹಿಳೆಯರು ಗಂಡನಿಂದ ಬೇರ್ಪಟ್ಟು ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದರು. ಇತೀಚೆಗೆ ಬಕ್ರೀದ್ ಹಬ್ಬಕ್ಕೆ (Bakrid Festival) ತವರಿಗೆ ಮರಳಿದಾಗ ಪೊಲೀಸರು (Bihar Police) ಸಲ್ಮಾ ಹಾಗೂ ಅಮೀನಾ ಇಬ್ಬರೂ ಪತ್ನಿಯರನ್ನ ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಎಣ್ಣೆ ಹೊಡೆಯುವುನ್ನು ತಪ್ಪಿಸಲೆತ್ನಿಸಿದ ದಂಪತಿಯನ್ನು ಹೊಡೆದು ಕೊಂದ ಮದ್ಯವ್ಯಸನಿ!
ಮುದ್ದಿನ ಗಂಡ ಮರ್ಡರ್ ಆಗಿದ್ದೇಗೆ?
ಬೆಡ್ವಾಲಿಯಾ ರಾಯಪುರ ನಿವಾಸಿ ಅಲಂಗೀರ್ ಅನ್ಸಾರಿ (45), ಸರನ್ ಜಿಲ್ಲೆಯ ಚಿಂತಮಂಗಂಜ್ ಗ್ರಾಮದ ನಿವಾಸಿ ಸಲ್ಮಾಳೊಂದಿಗೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ಮದುವೆಯಾದ 10 ವರ್ಷಗಳ ವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ನಂತರ ಅಲಂಗೀರ್ ಮತ್ತು ಸಲ್ಮಾ ನಡುವೆ ಮನಸ್ತಾಪ ಶುರುವಾಗಿತ್ತು. ಹಾಗಾಗಿ ಸಲ್ಮಾ ಪತಿಯನ್ನ ತೊರೆದು ಬೇರೆ ಸ್ಥಳದಲ್ಲಿ ವಾಸ ಮಾಡಿಕೊಂಡಿದ್ದಳು. ಕಳೆದ 6 ತಿಂಗಳ ಹಿಂದೆ ಅಲಂಗೀರ್ ದೆಹಲಿಗೆ (NewDelhi) ಬಂದಿದ್ದಾಗ ಬಂಗಾಳ ಮೂಲದ ಮಹಿಳೆ ಅಮಿನಾಳನ್ನ ಮದುವೆಯಾಗಿದ್ದ.
ಕೆಲವು ದಿನಗಳ ಹಿಂದೆ ದೆಹಲಿಗೆ ಬಂದಿದ್ದ ಸಲ್ಮಾ, ತನ್ನ ಗಂಡನ 2ನೇ ಹೆಂಡತಿ ಅಮೀನಾಳನ್ನ ತವರು ಮನೆಗೆ ಕರೆದುಕೊಂಡು ಹೋಗಿದ್ದಳು, ಇಬ್ಬರೂ ಒಟ್ಟಿಗೆ ವಾಸ ಮಾಡುತ್ತಿದ್ದರು. ಇತ್ತೀಚೆಗಷ್ಟೇ ಬಕ್ರೀದ್ ಹಬ್ಬಕ್ಕೆ ತಮ್ಮ ಗ್ರಾಮಕ್ಕೆ ಬಂದಿದ್ದರು. ಜುಲೈ 9ರಂದು ಇಬ್ಬರು ಪತ್ನಿಯರೂ ಗಂಡನ ಮನೆಗೆ ಬಂದಿದ್ದರು. ಈ ನಡುವೆ ಯಾವುದೋ ವಿಚಾರಕ್ಕೆ ಮೂವರ ನಡುವೆ ಜಗಳ ಶುರುವಾಗಿದೆ. ಈ ವೇಳೆ ಸಲ್ಮಾ ಚಾಕು ತೆಗೆದು ಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ. ಇದನ್ನೂ ಓದಿ: ಪುನೀತ್ ಫೋಟೋ ತೆಗೆಸಿದ್ದೇ ಯುವಬ್ರಿಗೇಡ್ ಕಾರ್ಯಕರ್ತನ ಕೊಲೆಗೆ ಕಾರಣವೇ? – ಮೃತನ ಪತ್ನಿ ಹೇಳಿದ್ದೇನು?
ತಕ್ಷಣ ಅಲಂಗೀರ್ನನ್ನ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಸಲ್ಮಾ-ಅಮೀಳಾನ್ನ ಬಂಧಿಸಿದ್ದಾರೆ. ಅಲಂಗೀರ್ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಮುಂದುವರಿದಿದೆ.
Web Stories