ಬೆಂಗಳೂರು: ಗಣೆಶೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಪಿಒಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದ್ದು, ಇದೀಗ ನಿಷೇಧದ ಹೊರತಾಗಿಯೂ ಪಿಒಪಿ ಮೂರ್ತಿಗಳ ಮಾರಾಟ ಮಾಡುತ್ತಿರುವುದರಿಂದ ಜಿಲ್ಲಾಧಿಕಾರಿ ಎಸ್ ಬಿ ಶೆಟ್ಟೆಣ್ಣವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ನಗರದ ವಿವಿಧೆಡೆ ಪಿಒಪಿ ಗಣೇಶ ಮೂರ್ತಿಗಳ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆದಿದೆ. ಪಿಒಪಿಯಿಂದ ನಿರ್ಮಾಣ ಮಾಡಿದ ಬೃಹತ್ ಮೂರ್ತಿಗಳಿಂದ ಹಿಡಿದು ಚಿಕ್ಕ ಮೂರ್ತಿಗಳನ್ನು ಕೂಡ ಜಿಲ್ಲಾಧಿಕಾರಿಗಳು ದಾಳಿ ವೇಳೆ ವಶಕ್ಕೆ ಪಡೆದಿದ್ದಾರೆ.
- Advertisement 2
- Advertisement 3
ಟ್ರ್ಯಾಕ್ಟರ್ ಹಾಗೂ ಗೂಡ್ಸ್ ವಾಹನದಲ್ಲಿ ಹೇರಿಕೊಂಡ ಮೂರ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಒಟ್ಟಿನಲ್ಲಿ ಪಿಒಪಿಯಿಂದ ನಿರ್ಮಿಸಿರುವ ಗಣಪನ ಮೂರ್ತಿ ವಶಕ್ಕೆ ತೆಗೆದುಕೊಳ್ಳುವ ಮೂಲಕ ಜಿಲ್ಲಾಧಿಕಾರಿಯವರು ಪರಿಸರ ಕಾಳಜಿ ಮೆರೆದಿದ್ದಾರೆ. ಈ ವೇಳೆ ಮಹಾನಗರ ಪಾಲಿಕೆ ಅಯುಕ್ತ ಹರ್ಷ ಶೆಟ್ಟಿ ಸೇರಿದಂತೆ ಇತರ ಅಧಿಕಾರಿಗಳು ಡಿಸಿಗೆ ಸಾಥ್ ನೀಡಿದ್ರು.
- Advertisement 4
ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ) ಗಣಪನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ರೆ ಅನಿಷ್ಟ. ಪಿಒಪಿ ಗಣಪತಿ ಧರ್ಮಶಾಸ್ತ್ರಕ್ಕೆ ಅನಿಷ್ಟವಾಗಿದ್ದು, ಪೂಜೆಗೆ ನಿಷಿದ್ಧವಾಗಿದೆ. ಪಿಒಪಿ ಗಣಪತಿ ನೀರಿನಲ್ಲಿ ಕರಗಲ್ಲ, ಅದನ್ನ ಮಚ್ಚುಗಳಿಂದ ಒಡೆಯಲಾಗುತ್ತದೆ. ಹೀಗಾಗಿ ಪ್ರಕೃತಿಗೂ ಮಾರಕವಾಗಿದೆ ಎಂದು ಇತ್ತೀಚೆಗಷ್ಟೆ ಅರ್ಚಕರ ಒಕ್ಕೂಟದ ಮುಖ್ಯಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್ ದೀಕ್ಷಿತ್ ಹೇಳಿದ್ದರು.
ಭಕ್ತಿಯ ಜೊತೆಗೆ ಜ್ಞಾನವೂ ಇರಬೇಕು, ಇಲ್ಲದಿದ್ದರೆ ಗಣಪ ಒಲಿಯಲ್ಲ. ಭಾರತೀಯ ಪೂಜಾ ಪದ್ಧತಿಯು ಆಧ್ಯಾತ್ಮ ವಿಜ್ಞಾನದ ತಳಹದಿಯಿಂದ ಕೂಡಿದೆ. ಪೃಥ್ವಿ ತತ್ವದ ಗಣಪತಿಯನ್ನು ಜೇಡಿ ಮಣ್ಣಿನಿಂದಲೇ ಮಾಡಬೇಕು. ದೇವತೆಗಳ ವಿಗ್ರಹಗಳನ್ನು, ಚಿತ್ರಗಳನ್ನು ತುಳಿದರೆ, ಕತ್ತರಿಸಿದರೆ ಮಹಾದೋಷ ಪ್ರಾಪ್ತಿಯಾಗುತ್ತದೆ ಎಂದು ಕೆ.ಎಸ್ ಉಮೇಶ್ ಶರ್ಮಾ ತಿಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv