– ಫಾರಿನ್ ಕರೆನ್ಸಿ, ಚಿನ್ನ ಬೆಳ್ಳಿ ಜೊತೆ ಸಿಕ್ತು ಶಕ್ತಿ ಟಿಕೆಟ್
ಬೆಂಗಳೂರು: ನಗರದ ನಂಬರ್ ಒನ್ ಶ್ರೀಮಂತ ದೇಗುಲ ಬನಶಂಕರಿ ಸನ್ನಿಧಾನಕ್ಕೆ (Banashankari Temple) ಈ ತಿಂಗಳು ದಾಖಲೆಯ ಕಾಣಿಕೆ ಸಂಗ್ರಹವಾಗಿದೆ. ಜೊತೆಗೆ ಫಾರಿನ್ ಕರೆನ್ಸಿಗಳು ಹಾಗೂ ಇಡೀ ದೇಗುಲದ ಆಡಳಿತ ಮಂಡಳಿಗೆ ಅಚ್ಚರಿಯಾಗುವ ವಸ್ತು ಕೂಡ ಸಿಕ್ಕಿದೆ.
ಬೆಂಗಳೂರಿನ ಶ್ರೀಮಂತ ದೇಗುಲದಲ್ಲಿ ಮೊದಲ ಸ್ಥಾನ ಬನಶಂಕರಿ ದೇವಿಗೆ. ಈ ಬಾರಿ ದೇವಾಲಯದಲ್ಲಿ ಜಾತ್ರೆ ಇದ್ದಿದ್ರಿಂದ ದೇಗುಲದ ಹುಂಡಿ ಮತಷ್ಟು ತುಂಬಿ ತುಳುಕಿದೆ. ಬರೀ 32 ದಿನದಲ್ಲಿ ಭರ್ತಿ ಅರ್ಧಕೋಟಿ ಹತ್ರತ್ರ ಅಂದ್ರೆ 47 ಲಕ್ಷದ 92 ಸಾವಿರ ಸಂಗ್ರಹವಾಗಿದೆ. ವಿಶೇಷ ಅಂದ್ರೆ ಮಹಿಳೆಯರು ಶಕ್ತಿ ಯೋಜನೆಯ ಬಸ್ ಟಿಕೆಟ್ನ್ನು (Bus Ticket) ಕೂಡ ಹುಂಡಿಗೆ ಹಾಕುತ್ತಿದ್ದಾರೆ ಇದು ಯಾವ ಕಾರಣಕ್ಕೆ ಅನ್ನೋದು ದೇಗುಲದವರಿಗೂ ಅಚ್ಚರಿ ತಂದಿದೆ. ಆದರೆ ಶಕ್ತಿ ಯೋಜನೆಯ ಬಳಿಕ ಹುಂಡಿಯಲ್ಲಿ ಬಿಎಂಟಿಸಿ ಟಿಕೆಟ್ ಸಿಗೋದು ಕೂಡ ಹೆಚ್ಚಾಗಿದೆಯಂತೆ.
ಕೇವಲ ಹುಂಡಿಗೆ ಲಕ್ಷ ಲಕ್ಷ ದುಡ್ಡು ಮಾತ್ರವಲ್ಲ ಚಿನ್ನ ಬೆಳ್ಳಿ ಕೂಡ ಬಂದಿದೆ. ಅಲ್ಲದೇ ವಿದೇಶಿ ಕರೆನ್ಸಿಗಳ ಹವಾ ಕೂಡ ಜೋರಾಗಿದೆ. ಯುಎಸ್, ಆಸ್ಟ್ರೇಲಿಯಾ, ಅರಬ್, ಡಾಲರ್ ಗಳು ಕೂಡ ಹುಂಡಿಯಲ್ಲಿ ಸಿಕ್ಕಿದೆ. ಇದರ ಜೊತೆಗೆ ಸಾಕಷ್ಟು ಜನ ಭಕ್ತರು ದೇವಿಗೆ ತಮ್ಮ ತಮ್ಮ ಸಮಸ್ಯೆಗಳ ಬಗ್ಗೆ ಪತ್ರವನ್ನು ಬರೆದಿದ್ದಾರೆ. ಇದನ್ನೂ ಓದಿ: ಚಿಕ್ಕಪ್ಪನಿಂದಲೇ 11 ವರ್ಷದ ಬಾಲಕಿಯ ಶಿರಚ್ಛೇದ – ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ಉದ್ವಿಗ್ನ
ಬನಶಂಕರಿ ದೇವಿ ಬೆಂಗಳೂರಿನ ಪಾಲಿಗೆ ಮಾತ್ರ ನಂಬಿಕೆಯ ದೇವಾಲಯ ಮಾತ್ರವಲ್ಲ ಇಡೀ ರಾಜ್ಯಾದ್ಯಂತ ಭಕ್ತರು ಕೂಡ ಇದ್ದಾರೆ. ಹೀಗಾಗಿಯೇ ದಿನದಿಂದ ದಿನಕ್ಕೆ ಭಕ್ತವೃಂದದ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.