ಬೆಂಗಳೂರು: ಅವರಿಬ್ಬರು ಒಂದು ಕಾಲದ ಕುಚಿಕುಗಳು. ಗೆಳೆಯರ ನಡುವೆ ಅದೊಂದು ಕಾರಣಕ್ಕೆ ಬಿರುಕು ಮೂಡಿತ್ತು. ಇಬ್ಬರ ನಡುವೆ ಉಂಟಾದ ಬಿರುಕು ಪಾಲಿಕೆ ಟ್ಯಾಕ್ಸ್ ಕಲೆಕ್ಟರ್ (Tax Collector) ಸ್ನೇಹಿತ ರೌಡಿಶೀಟರ್ ಕೊಲೆ ಮಾಡಲು ಯತ್ನಿದ್ದಾನೆ.
ಪಾಲಿಕೆ ಟ್ಯಾಕ್ಸ್ ಕಲೆಕ್ಟರ್ ಒಂದು ಕಾಲದ ತನ್ನ ಸ್ನೇಹಿತ ಗಗನ್ ಕುಮಾರ್ ಗೆ ಸ್ಕೆಚ್ ಹಾಕಿ ಕೊಲೆ ಮಾಡಲು ಯತ್ನಿಸಿದ್ದಾನೆ. ಮಾರ್ಚ್ 21ರ ಮುಂಜಾನೆ 5.30 ರಿಂದ 6 ಗಂಟೆ ಸುಮಾರಿಗೆ ಜಯಮಾಹಲ್ ರಸ್ತೆ (JayaMahal Road) ಯ ಸಚಿವರ ಮನೆ ಮುಂಭಾಗ ಸ್ನೇಹಿತ ರೌಡಿಶೀಟರ್ ಗಗನ್ ಕುಮಾರ್ಗೆ ಪಾಲಿಕೆ ಟ್ಯಾಕ್ಸ್ ಕಲೆಕ್ಟರ್ ಹಾಗೂ ಗ್ಯಾಂಗ್ ದೊಣ್ಣೆ ಮಾರಕಾಸ್ತ್ರಗಳಿಂದ ಹಿಗ್ಗಾಮುಗ್ಗ ಥಳಿಸಿದ್ದಾರೆ.
- Advertisement 2
- Advertisement 3
ಗಗನ್ ಕುಮಾರ್ ಸಾಯಲಿಲ್ಲಿ ಅನ್ನೋ ಕಾರಣಕ್ಕೆ ರೌಡಿ ಶೀಟರ್ ಗಗನ್ನನ್ನ ಕೆಳಗೆ ಬೀಳಿಸಿ ಕೆಎ 03 ಎಂಫ್ 3347 ನಂಬರ್ನ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದಾನೆ. ಮೂರ್ನಾಲ್ಕು ಬಾರಿ ಕಾರು ಹತ್ತಿಸಿ ಬಳಿಕ ಎಸ್ಕೇಪ್ ಆಗಿದ್ದಾರೆ. ಪಾಲಿಕೆ ಟ್ಯಾಕ್ಸ್ ಕಲೆಕ್ಟರ್ ಸುನೀಲ್ ಕುಮಾರ್ ಅಂಡ್ ಗ್ಯಾಂಗ್ನಿಂದ ದಾಳಿಗೆ ಒಳಗಾಗಿದ್ದ ಗಗನ್, ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಜೆ.ಸಿ ನಗರ ಪೊಲೀಸರು ಹಲ್ಲೆಗೊಳಗಾಗಿದ್ದ ಗಗನ್ನನ್ನ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್ ಸ್ಪರ್ಶಿಸಿ ಬೆಸ್ಕಾಂ ಲೈನ್ಮ್ಯಾನ್ ಸಾವು- ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
- Advertisement 4
ಗಾಯಾಳು ರೌಡಿಶೀಟರ್ ಸಾವು ಬದುಕಿನ ಹೋರಾಟ ನಡೆಸುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸದ್ಯ ಆರೋಪಿ ಪಾಲಿಕೆ ಟ್ಯಾಕ್ಸ್ ಕಲೆಕ್ಟರ್ ಸುನೀಲ್ ಕುಮಾರ್ ನನ್ನ ಬಂಧನ ಮಾಡಿರೋ ಜೆ.ಸಿ ನಗರ ಪೊಲೀಸರು ವಿಚಾರಣೆ ಮಾಡಿದಾಗ ಘಟನೆ ಹಿಂದಿನ ಸತ್ಯ ಹೊರಬಿದ್ದಿದೆ. ಸುನೀಲ್ ಕುಮಾರ್ ಹಾಗೂ ಗಗನ ನಡುವೆ ಆಸ್ತಿಯ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಸಮಸ್ಯೆ ಬಗೆಹರಿಯದೇ ಇದ್ದಾಗ ಮಾರ್ಚ್ 20 ರಂದು ಗಗನ್ ಕರೆಸಿಕೊಂಡು ಬಿಬಿಎಂಪಿ ಟ್ಯಾಕ್ಸ್ ಕಲೆಕ್ಟರ್ ಆಗಿರುವ ಸುನೀಲ್ ಕುಮಾರ್, ಅರುಣ, ಕೃಷ್ಣ ನಾಲ್ವರೂ ಸೇರಿಕೊಂಡು ಕೊಲೆಗೆ ಯತ್ನಿಸಿದ್ದಾರೆ.
ಘಟನೆ ಸಂಬಂಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರೋ ಜೆ.ಸಿ. ನಗರ ಪೊಲೀಸರು ಪಾಲಿಕೆ ಟ್ಯಾಕ್ಸ್ ಕಲೆಕ್ಟರ್ ಸುನೀಲ್ ಕುಮಾರ್ ಬಂಧಿಸಿದ್ದು, ಗ್ಯಾಂಗ್ ಸದಸ್ಯರಾದ ಅರುಣ್ , ಕೃಷ್ಣನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.