ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿ ಪರಪ್ಪನ ಅಗ್ರಹಾರ ಸೇರಿರುವ ಅಮೂಲ್ಯ ಲಿಯೊನ ತನ್ನ ಸ್ನೇಹಿತೆಯರ ಬಳಿ, ತಾನು ಪತ್ರಕರ್ತೆ ಗೌರಿ ಲಂಕೇಶ್ ರೀತಿ ಆಗುತ್ತೇನೆಂದ ಹೇಳಿಕೊಂಡಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.
ಗೌರಿ ಲಂಕೇಶ್ ಸಾವಿನ ಬಳಿಕ ಅಮೂಲ್ಯ ಹಲವು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಳು. ‘ನಾನು ಗೌರಿ’ ಕಾರ್ಯಕ್ರಮದಿಂದ ಪ್ರಭಾವಿತಳಾಗಿದ್ದ ಅಮೂಲ್ಯ, ಸ್ನೇಹಿತೆಯರ ಬಳಿ ನಾನು ಗೌರಿ ಲಂಕೇಶ್ ರೀತಿ ಆಗಬೇಕೆಂದು ನಿರ್ಧರಿಸಿದ್ದಳು. ತಾನು ಪತ್ರಕರ್ತೆ ಆಗಬೇಕೆಂದುಕೊಂಡು ಕನಸು ಕಂಡಿದ್ದಳು. ಡಿಗ್ರಿ ಇನ್ ಕಂಪ್ಲಿಟ್ ಆಗಿದ್ದ ಹಿನ್ನೆಲೆಯಲ್ಲಿ ಒಂದು ವರ್ಷದ ಪತ್ರಿಕೋದ್ಯಮ ಕೋರ್ಸ್ ಸೇರಿದ್ದಳು. ಕೋರ್ಸ್ ಮುಗಿದ ಬಳಿಕ ಪತ್ರಿಕೋದ್ಯಮ ಉದ್ಯೋಗ ಪಡೆಯಲು ಪ್ರಯತ್ನಿಸಿದ್ದಳು.
‘ನಾನು ಗೌರಿ’ ಕಾರ್ಯಕ್ರಮದ ಭಾಷಣಗಳಿಗೆ ಪ್ರಭಾವಿತಗೊಂಡಿದ್ದ ಅಮೂಲ್ಯ ಒಲವು ಪ್ರತಿಭಟನೆಯತ್ತ ಜಾರಿತ್ತು. ಪ್ರತಿಭಟನೆ ಬಳಿಕ ಪತ್ರಿಕೋದ್ಯಮದಲ್ಲಿ ಸೇರಿಕೊಳ್ಳಬೇಕಂದು ನಿರ್ಧರಿಸಿದ್ದಳು. ಎಡಪಂಥೀಯ ಧೋರಣೆ ಹೊಂದಿದ್ದ ಅಮೂಲ್ಯ ಸಾಕಷ್ಟು ಬಾರಿ ಗೌರಿಯ ಭಾಷಣಗಳನ್ನು ಕೇಳುತ್ತಿದ್ದಳು ಎಂದು ಆಕೆಯ ಸ್ನೇಹಿತೆಯರು ಪೊಲೀಸರ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.