ಅಮಿತ್ ಶಾ ಆಧುನಿಕ ವಲ್ಲಭಭಾಯಿ ಪಟೇಲ್: ಬೊಮ್ಮಾಯಿ

Public TV
2 Min Read
Amit Shah 2

ಧಾರವಾಡ: ದೇಶದ ಗೃಹ ಸಚಿವ ಅಮಿತ್ ಶಾ (Amit Shah) ಅವರು ಆಧುನಿಕ ಭಾರತದ ವಲ್ಲಭಭಾಯಿ ಪಟೇಲ್ (Vallabhbhai Patel) ಇದ್ದಂತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹಾಡಿ ಹೊಗಳಿದ್ದಾರೆ.

BASAVRAJ BOMMAI

ಧಾರವಾಡದ (Dharwad) ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ನಡೆದ ಫಾರೆನ್ಸಿಕ್ ಕ್ಯಾಂಪಸ್ (Forensic University) ನಿರ್ಮಾಣದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧುನಿಕತೆ ಬೆಳೆದಂತೆಲ್ಲ ಅಪರಾಧ ಜಗತ್ತು ಕೂಡ ಬೆಳೆಯುತ್ತಿದೆ. ಹೀಗಾಗಿ ಫಾರೆನ್ಸಿಕ್ ಕ್ಯಾಂಪಸ್ ಬಹಳ ಅವಶ್ಯಕತೆ ಇದೆ. ಈ ಹಿಂದೆ ಸೈಬರ್ ಕ್ರೈಂ (Cyber Crime) ಇರಲಿಲ್ಲ. ಈಗ ಸೈಬರ್ ಕ್ರೈಂ ಹೆಚ್ಚಾಗುತ್ತಿವೆ. ಅದಕ್ಕೆ ಕಾನೂನು ಕೂಡ ಬಂದಿದೆ. ಇದಕ್ಕೆ ಕಡಿವಾಣ ಹಾಕಲು ನಾವು ತಂತ್ರಜ್ಞಾನದಲ್ಲಿ ಒಂದು ಹೆಜ್ಜೆ ಮುಂದಿಡಬೇಕಿದೆ ಎಂದಿದ್ದಾರೆ. ಇದನ್ನೂ ಓದಿ: ರೆಬೆಲ್ ಯತ್ನಾಳ್‍ಗೆ ಹೈಕಮಾಂಡ್ ಮತ್ತೆ ಮಾಫಿ- ಓನ್ಲಿ ವಾರ್ನಿಂಗ್, ನೋ ಆಕ್ಷನ್

Amit Shah DHARWAD VIST

ಸದ್ಯ ನಾವು ಕಾನೂನು ಮತ್ತು ಟೆಕ್ನಾಲಜಿಯಲ್ಲಿ ಮುಂದಿದ್ದೇವೆ. ಎಫ್‍ಎಸ್‍ಎಲ್ ವರದಿ ಬರುವುದು ತಡವಾಗುತ್ತದೆ. ಹೀಗಾಗಿ ನಾನು ರಾಜ್ಯದ ಗೃಹ ಸಚಿವನಿದ್ದಾಗ 2 ರಿಜಿನಲ್ ಸೆಂಟರ್‌ಗಳನ್ನು ತೆರೆದಿದ್ದೆ. ಕ್ರೈಂ ಆದಾಗ ವಿಶೇಷ ಅಧಿಕಾರಿಗಳು ಹೋಗಬೇಕು. ಇದು ವಿದೇಶದಲ್ಲಿ ಮಾತ್ರ ಜಾರಿಯಲ್ಲಿದೆ. ಈಗ ನಮ್ಮ ರಾಜ್ಯದಲ್ಲೂ ಈ ಪದ್ಧತಿ ಬಂದಿದೆ. ಫಾರೆನ್ಸಿಕ್ ಕ್ಯಾಂಪಸ್ ಧಾರವಾಡಕ್ಕೆ ಬಂದಿದ್ದು ಬಹಳ ಸಂತಸದ ಸಂಗತಿ. ಇದು ಧಾರವಾಡಕ್ಕೆ ಬರಲು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ (Pralhad Joshi) ಪಾತ್ರ ಬಹಳ ಮುಖ್ಯವಾದದ್ದು. ಇದರ ಸೇವೆ ಕೇವಲ ಧಾರವಾಡ ಅಷ್ಟೇ ಅಲ್ಲ ರಾಜ್ಯದ ಉದ್ದಗಲಕ್ಕೂ ಹರಡಲಿದೆ ಎಂದರು. ಕ್ರೈಂ ಪತ್ತೆ ಮಾಡುವಲ್ಲಿ ನಮ್ಮ ರಾಜ್ಯದ ಪೊಲೀಸರು ಮುಂದೆ ಇದ್ದಾರೆ. ಧಾರವಾಡ ವಿದ್ಯಾಕಾಶಿ. ಇಲ್ಲಿ ಕೃಷಿ ವಿವಿ, ಕವಿವಿ (KVV), ಐಐಟಿ (IIT), ಐಐಐಟಿ (IIIT) ಇದೆ. ಇದೀಗ ಫಾರೆನ್ಸಿಕ್ ಕ್ಯಾಂಪಸ್ ಬಂದು ಧಾರವಾಡದ ಹಿರಿಮೆ ಹೆಚ್ಚಿಸಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಅಶೋಕ್ ಗೋಬ್ಯಾಕ್ ಭುಗಿಲು- ವರಿಷ್ಠರಿಗೆ ವರದಿ ರವಾನೆ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *