ಅಗರ್ತಲಾ: ತ್ರಿಪುರದ ಖೋವೈ ಜಿಲ್ಲೆಯ ಸರ್ಖಿಪಾರ ಎಂಬ ದೂರದ ಬುಡಕಟ್ಟು ಕುಗ್ರಾಮದ ಜೀವನಶೈಲಿಯಲ್ಲಿ ದೊಡ್ಡ ಬದಲಾವಣೆಯಾಗಿದೆ. 80 ವರ್ಷಗಳ ಕಾಲ ಕತ್ತಲೆಯಲ್ಲಿದ್ದ ಈ ಬುಡಕಟ್ಟು ಜನರು ಈಗ ಸೌರಶಕ್ತಿಯ ಸಹಾಯದಿಂದ ಪ್ರಕಾಶಮಾನ ಬೆಳಕನ್ನು ಪಡೆಯುತ್ತಿದ್ದಾರೆ.
ಈ ಬುಡಕಟ್ಟು ಪ್ರದೇಶದಲ್ಲಿ ಮಕ್ಕಳು ಸೂರ್ಯಾಸ್ತಮಾನದ ನಂತರ, ಮನೆಯಿಂದ ಹೊರಗೆ ಬರುವುದು ಕಷ್ಟವಾಗುತ್ತಿತ್ತು ಎಂದರೇ ನಂಬಲು ಅಸಾಧ್ಯ. ಆದರೆ ಇಲ್ಲಿರುವ ಬುಡಕಟ್ಟು ಜನರು ವಿದ್ಯುತ್ ಬದಲು ಬಿದಿರು ಆಧಾರಿತ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಬೆಳಕಿಗಾಗಿ ಉಪಯೋಗಿಸುತ್ತಾರೆ. ತಂಪಾದ ಗಾಳಿಗೆ ಬೀಸಣಿಗೆಗಳನ್ನು ಬಳಸುತ್ತಾರೆ. ಇದನ್ನೂ ಓದಿ: ವಿಜಯಪುರದಲ್ಲಿ ವಿಸ್ಮಯಕಾರಿಯಾಗಿ ಹೆಚ್ಚುತ್ತಿದೆ ಕೃಷ್ಣ ಮೃಗಗಳ ಸಂತತಿ
ಈ ಕುರಿತು ಮಾತನಾಡಿದ ಸ್ಥಳೀಯರು, ಇತ್ತೀಚಿನ ದಿನಗಳಲ್ಲಿ ಈ ರೀತಿಯ ಜೀವನವನ್ನು ಊಹಿಸಲೂ ಸಾಧ್ಯವಿಲ್ಲ. ಆದರೆ, ಸೌರ ವಿದ್ಯುತ್ ಯೋಜನೆಗೆ ಧನ್ಯವಾದಗಳು. ಈಗ ಕೆಲಸದ ಅವಧಿಯು ಹೆಚ್ಚಾಗಿದೆ. ವ್ಯಾಪಾರದ ಅವಧಿಯು ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸುತ್ತದೆ ಎಂದರು.
‘ಹಾಟ್ಸ್'(ಗ್ರಾಮ ಮಾರುಕಟ್ಟೆಗಳು) ಈಗ ಮುಸ್ಸಂಜೆಯ ನಂತರವೂ ತೆರೆದಿರುತ್ತವೆ. ಈಗ ಹಳ್ಳಿಯಿಂದ ಮಾರುಕಟ್ಟೆ ರಸ್ತೆಗಳು ಪ್ರಕಾಶಿಸಲ್ಪಟ್ಟಿವೆ. ಗ್ರಾಮಸ್ಥರು ಸುಲಭವಾಗಿ ದೂರದ ಊರಿಗೂ ಹೋಗುವುದಕ್ಕೆ ಸಹಾಯವಾಗುತ್ತೆ ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಾರಾಟಕ್ಕಿದ್ದಾನೆ ವರ – ಮಾರುಕಟ್ಟೆಯಲ್ಲಿ ಹುಡುಗಿಯರಿಗೆ ಸಿಕ್ತಾನೆ ವರ
ರೈತ ಕಲಹಾ ರಿಯಾಂಗ್ ಈ ಕುರಿತು ಮಾತನಾಡಿದ ಅವರು, ಇದು ನಮಗೆ ಕನಸು ನನಸಾಗುವಂತಿದೆ. ಮುಸ್ಸಂಜೆಯ ನಂತರ ಸೀಮೆಎಣ್ಣೆ ದೀಪಗಳು ಮತ್ತು ಬ್ಯಾಟರಿ ಫ್ಲ್ಯಾಷ್ಲೈಟ್ಗಳು ಮಾತ್ರ ಬೆಳಕಿನ ಮೂಲಗಳಾಗಿದ್ದವು. ಹಳ್ಳಿಯು ರಾತ್ರಿಯಲ್ಲಿ ಭೂತದ ಸ್ಥಳದಂತೆ ಕಾಣುತ್ತಿತ್ತು. ಈಗ ಮಕ್ಕಳು ರಾತ್ರಿಯಲ್ಲಿ ಓದಬಹುದು, ನಾವು ಟಿವಿ ನೋಡಬಹುದು. ನಮ್ಮ ಜೀವನ ಬದಲಾಗಿದೆ ಎಂದು ಹೇಳಿದರು.