ಸೌತ್ ಬ್ಯೂಟಿ ಪೂಜಾ ಹೆಗ್ಡೆ ಅವರು ಇತ್ತೀಚಿಗೆ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಚಿತ್ರ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದೆ. ಹೀಗಿರುವಾಗ ತಮ್ಮ ಕೆಲಸಕ್ಕೆಲ್ಲಾ ಬ್ರೇಕ್ ಹಾಕಿ, ಮಂಗಳೂರಿಗೆ ನಟಿ ಪೂಜಾ ಹೆಗ್ಡೆ (Pooja Hegde) ಬಂದು ಇಳಿದಿದ್ದಾರೆ.
- Advertisement 2
ಕುಟುಂಬದ (Family) ಜೊತೆ ಪೂಜಾ ಹೆಗ್ಡೆ ಬಾಂಬೆಯಲ್ಲಿ ಸೆಟೆಲ್ ಆಗಿದ್ರು ಕೂಡ ಆಗಾಗ ನಟಿ ಮಂಗಳೂರಿಗೆ (Mangaluru) ಬಂದು ಹೋಗುತ್ತಾರೆ. ಪೂಜಾ ಕುಟುಂಬ ಮೂಲತಃ ಮಂಗಳೂರಿನವರಾಗಿದ್ದು, ದೈವ ಕೋಲ, ಕಟೀಲು ದೇವಸ್ಥಾನ ಅಂತಾ ಬಂದು ಹೋಗುತ್ತಾರೆ.
- Advertisement 3
- Advertisement 4
ಇದೀಗ ಸಿನಿಮಾ ತೆರೆಕಂಡ ಬೆನ್ನಲ್ಲೇ ತಮ್ಮ ಕುಟುಂಬದ ಜೊತೆ ಮಂಗಳೂರಿಗೆ ಪೂಜಾ ಬಂದಿದ್ದಾರೆ. ಕಾಡಿನಲ್ಲಿ ಸುತ್ತಾಡಿ, ಹೆಬ್ಬಲಸು ಕಿತ್ತು ತಿಂದಿದ್ದಾರೆ. ನಾಯಿ ಜೊತೆ ಆಟವಾಡಿದ್ದಾರೆ. ಮಂಗಳೂರಿನ ರುಚಿಯಾದ ಮೀನಿನ ಊಟ ಸವಿದಿದ್ದಾರೆ. ಈ ಕುರಿತ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ತಮಿಳಿನಲ್ಲಿ ಸದ್ದು ಮಾಡುತ್ತಿದ್ದಾರೆ ಕನ್ನಡದ ಮತ್ತೋರ್ವ ನಟ ಸರ್ದಾರ್ ಸತ್ಯ
View this post on Instagram
ಮಹೇಶ್ ಬಾಬು ನಟನೆಯ ಮುಂದಿನ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳ ಸೋಲು ಕಂಡಿರುವ ಪೂಜಾಗೆ ಮುಂದಿನ ಚಿತ್ರವಾದರೂ ಸಕ್ಸಸ್ ತಂದು ಕೊಡುತ್ತಾ ಎಂಬುದನ್ನ ಕಾದುನೋಡಬೇಕಿದೆ.