ಮತ್ತೆ ಮತ್ತೆ ರಾಜಕಾರಣಕ್ಕೆ ಬರುವ ಕುರಿತಂತೆ ನಟಿ ಕಂಗನಾ ರಣಾವತ್ (Kangana Ranaut) ಹೇಳುತ್ತಲೇ ಇರುತ್ತಾರೆ. ಹಾಗಾಗಿ ಈ ಬಾರಿಯ ಲೋಕಸಭಾ ಅಖಾಡದಲ್ಲಿ ಕಂಗನಾ ಇರಲಿದ್ದಾರಾ ಎನ್ನುವ ಕುತೂಹಲ ಮೂಡಿದೆ. ರಾಜಕಾರಣಕ್ಕೆ ನಾನು ಬರಲು ಇದು ಸೂಕ್ತ ಸಮಯ ಎಂದು ಹೇಳುವ ಮೂಲಕ ಅಖಾಡವನ್ನು ಅವರು ರೆಡಿ ಮಾಡಿಕೊಳ್ಳುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ.
ಕಂಗನಾ ರಣಾವತ್, ರಾಜಕಾರಣಕ್ಕೆ (Politics) ಪ್ರವೇಶ ಮಾಡುತ್ತಾರಾ? ಮುಂದಿನ ಲೋಕಸಭಾ (Lok Sabha) ಚುನಾವಣೆಯಲ್ಲಿ (Elections) ಭಾಗಿ ಆಗ್ತಾರಾ ಇಂಥದ್ದೊಂದು ಪ್ರಶ್ನೆ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಅದಕ್ಕೆ ಉತ್ತರ ಎನ್ನುವಂತೆ ಅವರ ನಟನೆಯ ತೇಜಸ್ ಸಿನಿಮಾ ರಿಲೀಸ್ ಸಮಯದಲ್ಲಿ ದ್ವಾರಕಾಧೀಶನ ದರ್ಶನ ಪಡೆದು, ಮಾಧ್ಯಮಗಳೊಂದಿಗೆ ಮಾತನಾಡಿದ್ದರು.
ಶ್ರೀಕೃಷ್ಣನ ಆಶೀರ್ವಾದ ನನ್ನ ಮೇಲೆ ಇದ್ದರೆ, ನಾನೂ ಕೂಡ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಮಾಧ್ಯಮದವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದರು. ಈ ಮೂಲಕ ಮುಂದಿನ ದಿನಗಳಲ್ಲಿ ಕಂಗನಾ ರಾಜಕೀಯಕ್ಕೆ ಬರಲಿದ್ದಾರೆ ಎನ್ನುವುದು ನಿಕ್ಕಿ ಕೂಡ ಆಗಿತ್ತು.
ಪದೇ ಪದೇ ಅವರು ರಾಜಕೀಯಕ್ಕೆ ಬರುವ ಕುರಿತಂತೆ ಹೇಳಿಕೆ ಕೊಡುತ್ತಿರುವುದರಿಂದ ಮತ್ತು ಅವರ ತಂದೆ ಕೂಡ ಇದೇ ಮಾತನ್ನು ಹೇಳಿದ್ದರು. ಈ ಬಾರಿ ಕಂಗನಾ ಕಣದಲ್ಲಿ ಇರೋದು ಗ್ಯಾರಂಟಿ ಎನ್ನಲಾಗುತ್ತಿದೆ.