ಕಷ್ಟ ಅಂತ ಬಂದಾಗ ಬಾಲಿವುಡ್ ನಟ ಆಮೀರ್ ಖಾನ್ ಅವರಿಗೆ ಸ್ಪಂದಿಸುತ್ತೇಲೇ ಇರುತ್ತಾರೆ. ಅದು ಉದ್ಯಮದ ಜನರೇ ಇರಬಹುದು ಅಥವಾ ಯಾವುದೇ ರಾಜ್ಯದವರೇ ಆಗಿರಬಹುದು. ಒಂದಿಲ್ಲೊಂದು ರೀತಿಯಲ್ಲಿ ಅವರ ಸ್ಪಂದನೆ ಇದ್ದೇ ಇರುತ್ತದೆ. ಸದ್ಯ ಅಸ್ಸಾಂನಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಅಲ್ಲಿನ ಜನರು ಪ್ರವಾಹದಿಂದಾಗಿ ತತ್ತರಿಸಿದ್ದಾರೆ. ಬದುಕು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅನೇಕರು ನೀರಿನಲ್ಲಿ ಕೊಚ್ಚಿಯೂ ಹೋಗಿದ್ದಾರೆ. ಮನೆ ಮಠ ಕಳೆದುಕೊಂಡು ಪರದಾಡುತ್ತಿರುವ ಜನರಿಗಾಗಿ ಮಿಡಿದಿದ್ದಾರೆ ಆಮೀರ್ ಖಾನ್.
- Advertisement 2
ಅಸ್ಸಾಂನ ಉದಲ್ ಗುರಿ ಜಿಲ್ಲೆ, ನಲ್ಬರಿ, ಗೋಲಾಘಾಟ್, ಧುಬ್ರಿ, ಬಕ್ಸಾ ಸೇರಿದಂತೆ ಅನೇಕ ಜಿಲ್ಲೆಗಳ ಇಪ್ಪತ್ತು ಲಕ್ಷಕ್ಕೂ ಅಧಿಕ ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ಪ್ರತಿಯೊಬ್ಬರ ಬದುಕು ನರಕದಂತಿದೆ. ಹಾಗಾಗಿ ಅನೇಕರು ಅಸ್ಸಾಂ ಜನರಿಗಾಗಿ ಸಹಾಯ ಹಸ್ತ ಚಾಚಿದ್ದಾರೆ. ಬಾಲಿವುಡ್ ನಟ ಆಮಿರ್ ಖಾನ್ ಕೂಡ 25 ಲಕ್ಷ ರೂಪಾಯಿಗಳನ್ನು ಸಂತೃಸ್ತರಿಗಾಗಿ ನೀಡಿದ್ದಾರೆ. ಇನ್ನೂ ಹೆಚ್ಚಿನ ಸಹಾಯವನ್ನೂ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:ಪಿಂಕ್ ಕಲರ್ ಸೀರೆಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ
- Advertisement 3
- Advertisement 4
ಅಸ್ಸಾಂ ರಾಜ್ಯ ಸರಕಾರದ ಜೊತೆ ಕೈ ಜೋಡಿಸಿರುವ ಆಮೀರ್, ಅಸ್ಸಾ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ನೀಡಿದ್ದಾರೆ. ಹಣ ಸ್ವೀಕರಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮ ಟ್ವಿಟ್ ಮೂಲಕ ಆಮೀರ್ ಅವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಸಂಕಷ್ಟಕ್ಕೆ ಸಿಲುಕಿರುವ ರಾಜ್ಯಕ್ಕೆ ನೀವು ನೆರವು ನೀಡಿದಕ್ಕೆ ಧನ್ಯವಾದಗಳು ಎಂದು ಟ್ವಿಟ್ ಮಾಡಿದ್ದಾರೆ.