ಕಲಬುರಗಿ: ವಿದ್ಯಾರ್ಥಿಗಳು ಸರ್ಕಾರಿ ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನಡೆದಿದೆ.
ವಿದ್ಯಾರ್ಥಿಗಳು ಚಿತ್ತಾಪುರ ಬಸ್ ಘಟಕದ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಧರ್ಮಸಾಗರದಿಂದ ಚಿಂಚೋಳಿಗೆ ಬರುವಾಗ ಬಸ್ ಬಾಗಿಲಿನಲ್ಲಿ ನಿಂತ ವಿದ್ಯಾರ್ಥಿಗಳಿಗೆ ಒಳಬನ್ನಿ ಎಂದಿದ್ದಕ್ಕೆ ವಿದ್ಯಾರ್ಥಿಗಳು ಕೋಪಗೊಂಡು ಹಲ್ಲೆ ನಡೆಸಿದ್ದಾರೆ.
ಯುವಕರು ಮೊದಲು ಬಸ್ ನಲ್ಲಿ ಇಬ್ಬರಿಗೆ ಹೊಡೆದು ಆ ನಂತರ ಚಿಂಚೋಳಿ ಬಸ್ ಘಟಕಕ್ಕೆ ಬಂದು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ನಿರ್ವಾಹಕ ಬೀರಪ್ಪ ಚಾಲಕ ವೀರಾರೆಡ್ಡಿಗೆ ಗಾಯವಾಗಿದ್ದು, ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳುವಂತೆ ಪಟ್ಟು ಹಿಡಿದಿದ್ದಾರೆ.
ಹಲ್ಲೆ ಖಂಡಿಸಿ ಕಳೆದ ಒಂದು ಗಂಟೆಯಿಂದ ಎಲ್ಲಾ ಬಸ್ ಗಳ ಸಂಚಾರ ಸ್ಥಗಿತ ಮಾಡಿ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.
https://www.youtube.com/watch?v=VhVmQBZrKnE