ಬಳ್ಳಾರಿ: ಕಾಂಪೆಕ್ಸ್ ಕಟ್ಟಡ ನಿರ್ಮಾಣಕ್ಕಾಗಿ ತೆಗೆದಿದ್ದ ಆಳವಾದ ಬುನಾದಿಯ ಗುಂಡಿಯಲ್ಲಿ ಹೋರಿಯೊಂದು ಬಿದ್ದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಇಲ್ಲಿನ ದೇವಿನಗರದ ಕುರುಬರ ಹಾಸ್ಟೆಲ್ ಸಮೀಪದಲ್ಲಿ ಘಟನೆ ನಡೆದಿದ್ದು, ಹೋರಿಗೆ ಯಾವುದೇ ಗಂಭೀರವಾದ ಗಾಯಗಳಾಗಿಲ್ಲ. ಆದರೆ ಕೆಲವು ಗಂಟೆಗಳ ಕಾಲ ಮಾತ್ರ ಹೋರಿ ಮೇಲೆ ಬರಲಾರದೇ ಒದ್ದಾಡಿದೆ. ಇದನ್ನು ಓದಿ: ಕೇಬಲ್ ಗುಂಡಿಗೆ ಬಿದ್ದು, ಒದ್ದಾಡಿ ಹಸು ಸಾವು
ಕಾಂಪ್ಲೆಕ್ಸ್ ಕಟ್ಟಡ ನಿರ್ಮಾಣದ ಉದ್ದೇಶದಿಂದ ಕೆಲವು ಗುಂಡಿಗಳನ್ನು ತೆಗೆಯಲಾಗಿದೆ. ರಸ್ತೆ ಪಕ್ಕದಲ್ಲಿದ್ದ ಆಳವಾದ ಗುಂಡಿಗೆ ಜಾರಿ ಬಿದ್ದ ಹೋರಿ, ಮೇಲೆಕ್ಕೆ ಬರಲು ಸಾಧ್ಯವಾಗಿಲ್ಲ. ಹೋರಿ ಬಿದ್ದಿರುವುದು ತಿಳಿಯುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಒಟ್ಟಾಗಿ ಹೋರಿಯನ್ನು ಮೇಲೆತ್ತಿ ಮಾನವೀಯತೆ ಮೆರೆದಿದ್ದಾರೆ. ಇತ್ತೀಚೆಗೆ ಚರಂಡಿಯಲ್ಲಿ ಬಿದ್ದು ಹಸುವೊಂದು ಮೇಲಕ್ಕೆ ಬರಲಾರದೇ ಸಾವನ್ನಪ್ಪಿತ್ತು.