ಕೆ.ಆರ್.ಎಸ್ ನಲ್ಲಿ ನಡೆದಂತಹ ಸತ್ಯ ಘಟನೆ ಆಧಾರಿತ ಚಿತ್ರಕ್ಕೆ ಮುಹೂರ್ತ

Public TV
1 Min Read
FotoJet 31

ಹೆಸರಿಡದ ಚಿತ್ರ ’ಪ್ರೊಡಕ್ಷನ್ ನಂ.1’ ಸಿನಿಮಾದ ಮುಹೂರ್ತ (Muhurth) ಸಮಾರಂಭವು ವಿಜಯ ದಶಮಿ ದಿನದಂದು ಬೆಂಗಳೂರಿನ ನಂದಿನಿ ಲೇಔಟ್‌ನ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ನಡೆಯಿತು. ಮಾಜಿ ಕಾರ್ಪೋರೇಟರ್ ರಾಜೇಂದ್ರಕುಮಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ’ಪುಟಾಣಿಸಫಾರಿ’ ’ವರ್ಣಮಯ’ ’ಮಠ’ ’ನೈಟ್‌ಕರ್ಫ್ಯೂ’ ಹಾಗೂ ಇದೇ ತಿಂಗಳು ಬಿಡುಗಡೆಯಾಗುತ್ತಿರುವ ’ವಾಸಂತಿ ನಲಿದಾಗ’ ಚಿತ್ರಗಳನ್ನು ನಿರ್ದೇಶನ ಮಾಡಿರುವ ರವೀಂದ್ರ ವೆಂಶಿ (Ravindra Venshi) ಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.

FotoJet 1 25

ರೈತ, ಉದ್ಯಮಿಯಾಗಿರುವ ಚಿಕ್ಕಬದರಿಕಲ್ಲು ಮೂಲದ ಆರ್.ಕೃಷ್ಣಮೂರ್ತಿ (R. Krishnamurthy) ಎಂ.ಆರ್.ಕೆ. ಫಿಲಿಂಸ್ ಮುಖಾಂತರ ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ. ’ಹೀಗೊಂದು ರಕ್ತ ಚರಿತ್ರೆ’ ಅಂತ ಅಡಿಬರಹದಲ್ಲಿ ಹೇಳಿಕೊಂಡಿದೆ. 2004ರ ಕಾಲಘಟ್ಟದಲ್ಲಿ ಕೆಆರ್‌ಎಸ್‌ದಲ್ಲಿ ನಡೆದಂತ ಸತ್ಯ ಘಟನೆಯನ್ನು ಆಧರಿಸಿದ ಸಿನಿಮಾವು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಳ್ಳುತ್ತಿದೆ. ’ವಾಸಂತಿ ನಲಿದಾಗ’ ಚಿತ್ರದ ನಾಯಕ ರೋಹಿತ್‌ ಶ್ರೀಧರ್ (Rohit Sridhar) ಅವರಿಗೆ ಎರಡನೇ ಅವಕಾಶ. ಇದನ್ನೂ ಓದಿ:ಮಗಳ ಫೋಟೋ ಜೊತೆ ಹೆಸರು ರಿವೀಲ್ ಮಾಡಿದ `ಕಾಂತಾರಾ’ ಹೀರೋ ರಿಷಬ್ ಶೆಟ್ಟಿ

FotoJet 2 21

ನಾಯಕಿ, ಉಳಿದ ತಾರಗಣದ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಿದೆ. ಹೆಸರಾಂತ ನಟ ಖಳನಾಗಿ ನಟಿಸುವ ಸಾಧ್ಯತೆ ಇದೆ. ಪ್ರಮೋದ್‌ ಭಾರತೀಯ ಛಾಯಾಗ್ರಾಹಕ ಇನ್ನುಳಿದಂತೆ, ತಂತ್ರಜ್ಞರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *